<p><strong>ಸಾಣೇಹಳ್ಳಿ (ಹೊಸದುರ್ಗ):</strong> ‘ಹಳ್ಳಿಗಳ ಗುಡಿ ಕೈಗಾರಿಕೆಗಳು ನಶಿಸಿ ಹೋಗಿ, ಹಳ್ಳಿಗರು ಆತ್ಮಸ್ಥೈರ್ಯ ಕಳೆದುಕೊಂಡಿ<br />ದ್ದಾರೆ. ಹಳ್ಳಿಗಳು ದರಿದ್ರದ ನಾಡಾಗಿವೆ. ಸರ್ಕಾರಗಳು ನಾಚಿಕೆಗೇಡಿನ ಜನಪ್ರಿಯ ಯೋಜನೆಗಳ ಮೂಲಕ ಅವರಿಗೆ ಮುಫತ್ತಾಗಿ ಬಟ್ಟೆ, ಅನ್ನ, ಟಿವಿ ಮುಂತಾದ ವಸ್ತುಗಳನ್ನು ಕೊಟ್ಟು ಅವರನ್ನು ಪರಾವಲಂಬಿಗಳನ್ನಾಗಿ ಮಾಡುತ್ತಿವೆ’ ಎಂದು ರಂಗಕರ್ಮಿ ಪ್ರಸನ್ನ ದೂರಿದರು.</p>.<p>ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ರಂಗ ಪ್ರಯೋಗ ಶಾಲೆಯಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಭೀಮನಕೋಣೆಯ ಚರಕ ಸಂಸ್ಥೆ ಭಾನುವಾರ ಆಯೋಜಿಸಿದ್ದ ‘ಪವಿತ್ರ ವಸ್ತ್ರ ಸಮರ್ಪಣಾ’ ಅಭಿಯಾನಕ್ಕೆ ಪವಿತ್ರ ವಸ್ತ್ರ ನೀಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.</p>.<p>‘75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯಲ್ಲಿದ್ದೇವೆ. ಸ್ವಾತಂತ್ರ್ಯದ ಎಲ್ಲ ಫಲಗಳನ್ನು ನಗರಗಳು ಮತ್ತು ಅಲ್ಲಿನ ಕೈಗಾರಿಕೆಗಳು ಪಡೆದುಕೊಂಡು ಅನುಭವಿಸಿ ರಾಕ್ಷಸಾಕಾರ ಪಡೆದುಕೊಳ್ಳುತ್ತಿವೆ. ಬುದ್ಧ, ಬಸವ, ಕನಕ, ಅಕ್ಕನಂಥ ಧೀಮಂತರು ಬಾಳಿ ಬದುಕಿದ ನಾಡಿನ ಜನ ಭಿಕ್ಷುಕರಾಗುತ್ತಿದ್ದಾರೆ. ಪವಿತ್ರ ವಸ್ತ್ರ ಅಭಿಯಾನದ ಮೂಲಕ ಗ್ರಾಮೀಣ ಉತ್ಪನ್ನಗ<br />ಳನ್ನು ಮುನ್ನೆಲೆಗೆ ತರುವ ಕೆಲಸವನ್ನು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾಡುತ್ತಿರುವುದು ಅರ್ಥಪೂರ್ಣ’ ಎಂದು ಶ್ಲಾಘಿಸಿದರು.</p>.<p>ಜೆಡಿಯು ಮುಖಂಡ ಮಹಿಮ ಪಟೇಲ್, ‘ಮಾನವ ಇಂದು ಎಲ್ಲಾ ಇದ್ದರೂ ಏನೂ ಇಲ್ಲದವನಂತೆ ಅನಿಶ್ಚಿತತೆ, ಆತಂಕದಿಂದ ಬದುಕು ವಂತಾಗಿದೆ. ಇವುಗಳಿಂದ ಮುಕ್ತಿ ಪಡೆಯಬೇಕಾದರೆ ಅರಿವಿನಿಂದ ಒಟ್ಟಾಗಿ ಕೆಲಸ ಮಾಡುವ ಅನಿವಾರ್ಯ ಇದೆ’ ಎಂದು ತಿಳಿಸಿದರು.</p>.<p>ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ನಾವಿಂದು ತಿನ್ನುವ ಅನ್ನ, ಕುಡಿಯುವ ನೀರು, ತೊಡುವ ಬಟ್ಟೆಯಾದಿಯಾಗಿ ವಿಷಮಯವಾಗಿವೆ. ಎಲ್ಲದರಲ್ಲೂ ವಿಷವೇ ತುಂಬಿರುವಂತೆ ಅಂತರಂಗವೂ ವಿಷದಿಂದಲೇ ತುಂಬಿದೆ. ನಾವು ಹಿಂದಿನ ಪರಂಪರೆಯ ಕಡೆ ಮುಖಮಾಡಬೇಕಾಗಿದೆ’ ಎಂದರು.</p>.<p>ಶಿವನಕೆರೆ ಬಸವಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗಶಾಲೆಯ ಪ್ರಾಂಶುಪಾಲ ಆರ್. ಜಗದೀಶ್ ರಂಗ ಗೀತೆ ಹಾಡಿದರು. ಅಧ್ಯಾಪಕ ಎಚ್.ಎಸ್. ದ್ಯಾಮೇಶ್ ವಂದಿಸಿದರು. ಎಸ್.ಕೆ. ಪರಮೇಶ್ವರಯ್ಯ, ಕೃಷಿಕ ಶಂಕರಣ್ಣ, ಚರಕ ಸಂಸ್ಥೆ ಅಧ್ಯಕ್ಷೆ ಮಹಾಲಕ್ಷ್ಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಣೇಹಳ್ಳಿ (ಹೊಸದುರ್ಗ):</strong> ‘ಹಳ್ಳಿಗಳ ಗುಡಿ ಕೈಗಾರಿಕೆಗಳು ನಶಿಸಿ ಹೋಗಿ, ಹಳ್ಳಿಗರು ಆತ್ಮಸ್ಥೈರ್ಯ ಕಳೆದುಕೊಂಡಿ<br />ದ್ದಾರೆ. ಹಳ್ಳಿಗಳು ದರಿದ್ರದ ನಾಡಾಗಿವೆ. ಸರ್ಕಾರಗಳು ನಾಚಿಕೆಗೇಡಿನ ಜನಪ್ರಿಯ ಯೋಜನೆಗಳ ಮೂಲಕ ಅವರಿಗೆ ಮುಫತ್ತಾಗಿ ಬಟ್ಟೆ, ಅನ್ನ, ಟಿವಿ ಮುಂತಾದ ವಸ್ತುಗಳನ್ನು ಕೊಟ್ಟು ಅವರನ್ನು ಪರಾವಲಂಬಿಗಳನ್ನಾಗಿ ಮಾಡುತ್ತಿವೆ’ ಎಂದು ರಂಗಕರ್ಮಿ ಪ್ರಸನ್ನ ದೂರಿದರು.</p>.<p>ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ರಂಗ ಪ್ರಯೋಗ ಶಾಲೆಯಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಭೀಮನಕೋಣೆಯ ಚರಕ ಸಂಸ್ಥೆ ಭಾನುವಾರ ಆಯೋಜಿಸಿದ್ದ ‘ಪವಿತ್ರ ವಸ್ತ್ರ ಸಮರ್ಪಣಾ’ ಅಭಿಯಾನಕ್ಕೆ ಪವಿತ್ರ ವಸ್ತ್ರ ನೀಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.</p>.<p>‘75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯಲ್ಲಿದ್ದೇವೆ. ಸ್ವಾತಂತ್ರ್ಯದ ಎಲ್ಲ ಫಲಗಳನ್ನು ನಗರಗಳು ಮತ್ತು ಅಲ್ಲಿನ ಕೈಗಾರಿಕೆಗಳು ಪಡೆದುಕೊಂಡು ಅನುಭವಿಸಿ ರಾಕ್ಷಸಾಕಾರ ಪಡೆದುಕೊಳ್ಳುತ್ತಿವೆ. ಬುದ್ಧ, ಬಸವ, ಕನಕ, ಅಕ್ಕನಂಥ ಧೀಮಂತರು ಬಾಳಿ ಬದುಕಿದ ನಾಡಿನ ಜನ ಭಿಕ್ಷುಕರಾಗುತ್ತಿದ್ದಾರೆ. ಪವಿತ್ರ ವಸ್ತ್ರ ಅಭಿಯಾನದ ಮೂಲಕ ಗ್ರಾಮೀಣ ಉತ್ಪನ್ನಗ<br />ಳನ್ನು ಮುನ್ನೆಲೆಗೆ ತರುವ ಕೆಲಸವನ್ನು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾಡುತ್ತಿರುವುದು ಅರ್ಥಪೂರ್ಣ’ ಎಂದು ಶ್ಲಾಘಿಸಿದರು.</p>.<p>ಜೆಡಿಯು ಮುಖಂಡ ಮಹಿಮ ಪಟೇಲ್, ‘ಮಾನವ ಇಂದು ಎಲ್ಲಾ ಇದ್ದರೂ ಏನೂ ಇಲ್ಲದವನಂತೆ ಅನಿಶ್ಚಿತತೆ, ಆತಂಕದಿಂದ ಬದುಕು ವಂತಾಗಿದೆ. ಇವುಗಳಿಂದ ಮುಕ್ತಿ ಪಡೆಯಬೇಕಾದರೆ ಅರಿವಿನಿಂದ ಒಟ್ಟಾಗಿ ಕೆಲಸ ಮಾಡುವ ಅನಿವಾರ್ಯ ಇದೆ’ ಎಂದು ತಿಳಿಸಿದರು.</p>.<p>ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ನಾವಿಂದು ತಿನ್ನುವ ಅನ್ನ, ಕುಡಿಯುವ ನೀರು, ತೊಡುವ ಬಟ್ಟೆಯಾದಿಯಾಗಿ ವಿಷಮಯವಾಗಿವೆ. ಎಲ್ಲದರಲ್ಲೂ ವಿಷವೇ ತುಂಬಿರುವಂತೆ ಅಂತರಂಗವೂ ವಿಷದಿಂದಲೇ ತುಂಬಿದೆ. ನಾವು ಹಿಂದಿನ ಪರಂಪರೆಯ ಕಡೆ ಮುಖಮಾಡಬೇಕಾಗಿದೆ’ ಎಂದರು.</p>.<p>ಶಿವನಕೆರೆ ಬಸವಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗಶಾಲೆಯ ಪ್ರಾಂಶುಪಾಲ ಆರ್. ಜಗದೀಶ್ ರಂಗ ಗೀತೆ ಹಾಡಿದರು. ಅಧ್ಯಾಪಕ ಎಚ್.ಎಸ್. ದ್ಯಾಮೇಶ್ ವಂದಿಸಿದರು. ಎಸ್.ಕೆ. ಪರಮೇಶ್ವರಯ್ಯ, ಕೃಷಿಕ ಶಂಕರಣ್ಣ, ಚರಕ ಸಂಸ್ಥೆ ಅಧ್ಯಕ್ಷೆ ಮಹಾಲಕ್ಷ್ಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>