<p><strong>ಚಳ್ಳಕೆರೆ:</strong> ತಾಲ್ಲೂಕಿನ ಪರಶುರಾಂಪುರ ಹೋಬಳಿ ವ್ಯಾಪ್ತಿಯ ಗೋಸಿಕೆರೆ ಗ್ರಾಮದ ದಲಿತ ಕುಟುಂಬಗಳಿಗೆ ವಿತರಿಸಿರುವ ನಿವೇಶನಗಳ ಖಾತೆಗೆ ಆಗ್ರಹಿಸಿ ದಲಿತ ಸಂಘಟನೆ ಕಾರ್ಯಕರ್ತರು ತಾಲ್ಲೂಕು ಪಂಚಾಯಿತಿ ಮುಂದೆ ನಡೆಸುತ್ತಿರುವ ಧರಣಿ 11ನೇ ದಿನಕ್ಕೆ ಮುಂದುವರೆದಿದೆ. </p>.<p>ಬುಧವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಸಂಸದ ಗೋವಿಂದ ಕಾರಜೋಳ, 33 ವರ್ಷ ಆದರೂ ದಲಿತ ಕುಟುಂಬಗಳಿಗೆ ನಿವೇಶನದ ಖಾತೆ ಮಾಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. </p>.<p>ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವಾಗಿ ಖಾತೆ ಮಾಡಿಸಿಕೊಡುವುದಾಗಿ ಧರಣಿ ನಿರತರಿಗೆ ಭರವಸೆ ನೀಡಿದರು.</p>.<p>ಗ್ರಾಮದ ಅರ್ಹ 87 ಕುಂಟುಂಬಗಳಿಗೆ ಖಾತೆ ಜೊತೆಗೆ ನಿವೇಶನ ಹಂಚಿಕೆ ಮಾಡಿಕೊಡಬೇಕು. ನಿವೇಶನದ ಲೇಔಟ್ ರೂಪಿಸುವ ಮೂಲಕ ಮೂಲಭೂತ ಸೌಲಭ್ಯ ಒದಗಿಸಿಕೊಡುವವರೆಗೂ ಧರಣಿ ನಡೆಸುವುದಾಗಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಚೌಳೂರು ಎಚ್. ಮಂಜುನಾಥ ಎಚ್ಚರಿಕೆ ನೀಡಿದರು. </p>.<p>ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ, ಜಿಲ್ಲಾ ಮುಖಂಡ ಬಾಳೆಕಾಯಿ ರಾಮದಾಸ್, ದಯಾನಂದ ಮಾತನಾಡಿದರು.</p>.<p>ದಲಿತ ಮುಖಂಡ ರಾಜಣ್ಣ, ಸಿದ್ದಾಪುರ ರುದ್ರಮುನಿ, ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಗೋಸಿಕೆರೆ ಓಂಕಾರಮೂರ್ತಿ, ಟಿ.ಎನ್. ಕೋಟೆ ರಂಗಸ್ವಾಮಿ, ಕೋನಿಗರಹಳ್ಳಿ ಹರೀಶ್, ಮಹಿಳಾ ಸಂಘದ ಪ್ರತಿನಿಧಿ ದುರುಗಮ್ಮ, ಸಾಕಮ್ಮ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಳ್ಳಕೆರೆ:</strong> ತಾಲ್ಲೂಕಿನ ಪರಶುರಾಂಪುರ ಹೋಬಳಿ ವ್ಯಾಪ್ತಿಯ ಗೋಸಿಕೆರೆ ಗ್ರಾಮದ ದಲಿತ ಕುಟುಂಬಗಳಿಗೆ ವಿತರಿಸಿರುವ ನಿವೇಶನಗಳ ಖಾತೆಗೆ ಆಗ್ರಹಿಸಿ ದಲಿತ ಸಂಘಟನೆ ಕಾರ್ಯಕರ್ತರು ತಾಲ್ಲೂಕು ಪಂಚಾಯಿತಿ ಮುಂದೆ ನಡೆಸುತ್ತಿರುವ ಧರಣಿ 11ನೇ ದಿನಕ್ಕೆ ಮುಂದುವರೆದಿದೆ. </p>.<p>ಬುಧವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಸಂಸದ ಗೋವಿಂದ ಕಾರಜೋಳ, 33 ವರ್ಷ ಆದರೂ ದಲಿತ ಕುಟುಂಬಗಳಿಗೆ ನಿವೇಶನದ ಖಾತೆ ಮಾಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. </p>.<p>ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವಾಗಿ ಖಾತೆ ಮಾಡಿಸಿಕೊಡುವುದಾಗಿ ಧರಣಿ ನಿರತರಿಗೆ ಭರವಸೆ ನೀಡಿದರು.</p>.<p>ಗ್ರಾಮದ ಅರ್ಹ 87 ಕುಂಟುಂಬಗಳಿಗೆ ಖಾತೆ ಜೊತೆಗೆ ನಿವೇಶನ ಹಂಚಿಕೆ ಮಾಡಿಕೊಡಬೇಕು. ನಿವೇಶನದ ಲೇಔಟ್ ರೂಪಿಸುವ ಮೂಲಕ ಮೂಲಭೂತ ಸೌಲಭ್ಯ ಒದಗಿಸಿಕೊಡುವವರೆಗೂ ಧರಣಿ ನಡೆಸುವುದಾಗಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಚೌಳೂರು ಎಚ್. ಮಂಜುನಾಥ ಎಚ್ಚರಿಕೆ ನೀಡಿದರು. </p>.<p>ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ, ಜಿಲ್ಲಾ ಮುಖಂಡ ಬಾಳೆಕಾಯಿ ರಾಮದಾಸ್, ದಯಾನಂದ ಮಾತನಾಡಿದರು.</p>.<p>ದಲಿತ ಮುಖಂಡ ರಾಜಣ್ಣ, ಸಿದ್ದಾಪುರ ರುದ್ರಮುನಿ, ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಗೋಸಿಕೆರೆ ಓಂಕಾರಮೂರ್ತಿ, ಟಿ.ಎನ್. ಕೋಟೆ ರಂಗಸ್ವಾಮಿ, ಕೋನಿಗರಹಳ್ಳಿ ಹರೀಶ್, ಮಹಿಳಾ ಸಂಘದ ಪ್ರತಿನಿಧಿ ದುರುಗಮ್ಮ, ಸಾಕಮ್ಮ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>