ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಯಲ್ಲಿ ಆಗಿರುವ ಲೋಪಗಳು ಗ್ರಾಮೀಣ ಪ್ರದೇಶದ ಜನರನ್ನು ಬಾಧಿಸುತ್ತಿವೆ. ಅಸಹಾಯಕರಾದ ಜನರು ಸೋಂಕು ತಡೆಯುವ ಬದಲು ಮೌಢ್ಯದ ಮೊರೆ ಹೋಗುತ್ತಿದ್ದಾರೆ. ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡ ಮೊಳಕಾಲ್ಮುರು, ಚಳ್ಳಕೆರೆ ಹಾಗೂ ಹಿರಿಯೂರು ತಾಲ್ಲೂಕಿನ ಗ್ರಾಮಗಳಲ್ಲಿ ಕೊರೊನಮ್ಮನ ಪೂಜೆ, ಅನ್ನ ಬಿಸಾಡುವ ಆಚರಣೆಗಳು ನಡೆಯುತ್ತಿವೆ.