‘ಶಿಕ್ಷಕರ ಕ್ಷೇತ್ರದ ಮತದಾರರನ್ನು ಸೆಳೆಯಲು ಅನೇಕರು ಅಡ್ಡದಾರಿ ತುಳಿದಿದ್ದಾರೆ. ನಾಗರಿಕ ಸಮಾಜ ನಾಚುವಂತಹ ಪ್ರಯತ್ನಗಳು ನಡೆಯುತ್ತಿವೆ. ಮತದಾರರಿಗೆ ಸೀರೆ, ವಾಚ್ ಹಂಚುವ ಹಾಗೂ ಕ್ಯೂಆರ್ ಕೋಡ್ ನೀಡಿ ಏನನ್ನೋ ವರ್ಗಾವಣೆ ಮಾಡುವ ಹುನ್ನಾರಗಳ ಬಗ್ಗೆ ಶಿಕ್ಷಕರು ಬೇಸರಗೊಂಡಿದ್ದಾರೆ. ಇಂತಹ ಅಭ್ಯರ್ಥಿಗಳ ಬದಲು ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿವಿರುವವರನ್ನು ಆಯ್ಕೆ ಮಾಡಿ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿಕೊಂಡರು.