ನಾಯಕನಹಟ್ಟಿ ಹೋಬಳಿಯ ರೇಖಲಗೆರೆ ಗ್ರಾಮದಲ್ಲಿ ದುರಸ್ತಿ ಕಾಣದ ಶುದ್ಧ ಕುಡಿಯುವ ನೀರಿನ ಘಟಕ
ಸಕ್ಕರ ಗ್ರಾಮದಲ್ಲಿ ದುರಸ್ತಿಗೆ ಕಾದಿರುವ ಶುದ್ಧ ಕುಡಿಯುವ ನೀರಿನ ಘಟಕ
ಚಿತ್ರದುರ್ಗ ನಗರದಲ್ಲಿ 16 ಆರ್ಒ ಘಟಕಗಳನ್ನು ಈಗಾಗಲೇ ದುರಸ್ತಿ ಮಾಡಿಸಲಾಗಿದೆ. ನಿರ್ವಹಣೆಗೆ ಟೆಂಡರ್ ಕರೆಯಲಾಗಿದೆ. ಮಾರ್ಚ್ ಮೊದಲ ವಾರದಿಂದ ಬಹುತೇಕ ಘಟಕಗಳು ಕಾರ್ಯ ನಿರ್ವಹಿಸಲಿವೆ. ಶುದ್ಧ ನೀರಿಗೆ ಕ್ರಮವಹಿಸಲಾಗಿದೆ
–ಎಂ.ರೇಣುಕಾ, ಪೌರಾಯುಕ್ತೆ
ಬುದ್ಧ ನಗರದಲ್ಲಿ ಘಟಕ ಸ್ಥಗಿತವಾಗಿ ಎಂಟು ತಿಂಗಳಾಗಿದೆ. ಶುದ್ಧ ಕುಡಿಯುವ ನೀರಿಗೆ ತೀವ್ರ ಸಮಸ್ಯೆಯಾಗಿದೆ. ಅನಿವಾರ್ಯವಾಗಿ ಖಾಸಗಿ ಪ್ಲಾಂಟ್ಗಳಿಗೆ ಹೋಗಬೇಕಿದೆ. ಬೇಸಿಗೆ ಹೆಚ್ಚಾಗುವ ಮುನ್ನ ಸಮಸ್ಯೆ ಬಗೆಹರಿಸಿ.
–ಬಸವರಾಜಪ್ಪ, ನಿವಾಸಿ ಬುದ್ಧನಗರ
ಸಕ್ಕರ ಗ್ರಾಮದಲ್ಲಿ ಮೂರು ಸಾವಿರ ಜನಸಂಖ್ಯೆ ಇದೆ. ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗುವುದರಿಂದ ನಮಗೆ ತುಂಬಾ ತೊಂದರೆಯಾಗುತ್ತಿದ್ದು ಹೊಸದಾಗಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಬೇಕು
–ಲಕ್ಷ್ಮಿ, ಸಕ್ಕರ ಗ್ರಾಮ
ಗೊಲ್ಲರಹಟ್ಟಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿಲ್ಲದೆ ಜನರಿಗೆ ತೀವ್ರ ಸಮಸ್ಯೆಯಾಗಿದೆ. ನಿತ್ಯ ಎರಡು ಕಿ.ಮೀ. ದೂರದಿಂದ ನೀರು ತರಲು ಆಗುತ್ತಿಲ್ಲ. ಅದಕ್ಕಾಗಿ ಸಕ್ಕರ ಗೊಲ್ಲರಹಟ್ಟಿಯಲ್ಲಿ ನೀರಿನ ಘಟಕ ಪ್ರಾರಂಭಿಸಿ