ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಗಾಪರಮೇಶ್ವರಿ ಮೂರ್ತಿ ಪ್ರತಿಷ್ಠಾಪನೆ ಸಂಭ್ರಮ

Last Updated 17 ಅಕ್ಟೋಬರ್ 2020, 12:54 IST
ಅಕ್ಷರ ಗಾತ್ರ

ಹೊಸದುರ್ಗ: ಶರನ್ನವರಾತ್ರಿ ದಸರಾ ಮಹೋತ್ಸವದ ಅಂಗವಾಗಿ ಶನಿವಾರ ಪಟ್ಟಣದ ಅಶೋಕ ರಂಗಮಂದಿರದ ದುರ್ಗಾದೇವಿ ಮಂಟಪದಲ್ಲಿ 3ನೇ ವರ್ಷದ ದುರ್ಗಾಪರಮೇಶ್ವರಿ ಮೂರ್ತಿ ಪ್ರತಿಷ್ಠಾಪನೆ ಸಂಭ್ರಮದಿಂದ ನಡೆಯಿತು.

ಬೆಳಿಗ್ಗೆಯಿಂದಲೂ ಗಂಗಾಪೂಜೆ, ಕ್ಷೀರಾಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ, ಮಹಿಳಾ ಕಲಾವಿದರಿಂದ ಭಜನೆ ಸೇರಿ ವಿವಿಧ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಅ. 26ರ ವರೆಗೂ ಪ್ರತಿದಿನ ವಿಶೇಷ ಪೂಜೆ, ಭಜನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಕಾರ್ಯಕ್ರಮ ಜರುಗಲಿವೆ.

ಅ. 26ರ ಸೋಮವಾರ ವಿಜಯದಶಮಿಯಂದು ದುರ್ಗಾಪರಮೇಶ್ವರಿ ಮೂರ್ತಿಯ ರಾಜಬೀದಿ ಉತ್ಸವದ ಮೆರವಣಿಗೆ ನಂತರ ಇಲ್ಲಿನ ಐತಿಹಾಸಿಕ ಮಠದ ಹೊಂಡದಲ್ಲಿ ವಿಸರ್ಜನೆ ಮಾಡಲಾಗುವುದು. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಸೋಂಕು ನಿಯಂತ್ರಣದ ನಿಯಮ ಪಾಲನೆಯೊಂದಿಗೆ ಮಹೋತ್ಸವದ ಯಶಸ್ಸಿಗೆ ನಾಗರಿಕರು ಸಹಕರಿಸಬೇಕು ಎಂದು ದುರ್ಗಾ ಸೇವಾ ಸಮಿತಿ ಅಧ್ಯಕ್ಷ ಟಿ. ಮಂಜುನಾಥ್‌ ಮನವಿ ಮಾಡಿದರು.

ಪುರಸಭೆ ಸದಸ್ಯ ದಾಳಿಂಬೆ ಗಿರೀಶ್‌, ದುರ್ಗಾ ಸೇವಾ ಸಮಿತಿಯ ಕೆ.ಆರ್‌. ಪ್ರವೀಣ್‌, ಎಸ್‌.ಕೆ. ಮಂಜುನಾಥ್‌, ಡಿ. ರಾಮಚಂದ್ರ, ಎಚ್‌.ಬಿ. ಮಂಜುನಾಥ್‌, ಆರ್‌.ಜಿ. ಪ್ರಸನ್ನಕುಮಾರ್‌, ಫಕ್ರುದ್ದೀನ್‌, ಪಾಂಡುರಾಯ್ಕರ್‌, ರಾಘವೇಂದ್ರ, ಪ್ರದೀಪ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT