<p><strong>ಹೊಸದುರ್ಗ: </strong>ಲಾಕ್ಡೌನ್ನಿಂದಾಗಿ ವೀಳ್ಯದೆಲೆ ದರ ಕುಸಿತವಾಗಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.</p>.<p>ತಾಲ್ಲೂಕಿನ ದೊಡ್ಡಕಿಟ್ಟದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ನೂರಾರು ಮಂದಿ ರೈತರು ಹಲವು ವರ್ಷಗಳಿಂದಲೂ ವೀಳ್ಯದೆಲೆ ಬೆಳೆಯುತ್ತಿದ್ದಾರೆ. ಲಾಕ್ಡೌನ್ಗಿಂತ ಮೊದಲು ಬಳ್ಳಿಯಿಂದ ವೀಳ್ಯದೆಲೆ ಬಿಡಿಸಿ, ಪೆಂಡಿ ಕಟ್ಟಿಕೊಂಡು ಚಿತ್ರದುರ್ಗದ ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡುತ್ತಿದ್ದರು. ಆಗ ಒಂದು ಪೆಂಡಿ ವೀಳ್ಯದೆಲೆ ₹4,000ದಿಂದ<br />₹ 5,000ದವರೆಗೆ ದರ ಇತ್ತು. ಆದರೆ, ಲಾಕ್ಡೌನ್ ಆಗುತ್ತಿದ್ದಂತೆ ಸ್ಥಳೀಯ ಮಾರುಕಟ್ಟೆ ಬಂದ್ ಆಗಿದೆ.</p>.<p>ಒಂದೆಡೆ ಕೊರೊನಾ ಸೋಂಕು ಭೀತಿ, ಮತ್ತೊಂದೆಡೆ ಲಾಕ್ಡೌನ್ನಿಂದ ಮುಕ್ತ ಸಾರಿಗೆ ವ್ಯವಸ್ಥೆಗೆ ಅವಕಾಶ ಇಲ್ಲದಿರುವುದರಿಂದ ಇಲ್ಲಿನ ಬಡ ರೈತರು ಹೊರ ಜಿಲ್ಲೆ ಹಾಗೂ ರಾಜ್ಯದ ಮಾರುಕಟ್ಟೆಗೆ ವೀಳ್ಯದೆಲೆ ಸಾಗಿಸಲು ಪರದಾಡುವಂತಾಗಿದೆ.</p>.<p>ಹೊರಗಿನ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಮಾರುಕಟ್ಟೆಯೂ ಇಲ್ಲ. ಇದರಿಂದಾಗಿ ಕೆಲವು ಬೆಳೆಗಾರರು ಕಟಾವಿಗೆ ಬಂದಿರುವ ವೀಳ್ಯದೆಲೆ ಬಿಡಿಸಿಲ್ಲ. ಬಳ್ಳಿಯಲ್ಲಿಯೇ ಕೊಳೆಯುತ್ತಿದೆ.</p>.<p>‘ವೀಳ್ಯದೆಲೆ ಖರೀದಿಗೆ ಗ್ರಾಮ ಹಾಗೂ ರೈತರ ಜಮೀನಿಗೆ ಬರುವ ಸ್ಥಳೀಯ ವ್ಯಾಪಾರಿಗಳು 1 ಪೆಂಡಿ ವೀಳ್ಯದೆಲೆ ₹ 1,500ದಿಂದ ₹ 2,000ಕ್ಕೆ ಕೇಳುತ್ತಿದ್ದಾರೆ. ಅರ್ಧಕ್ಕಿಂತ ಹೆಚ್ಚು ದರ ಕುಸಿತ ಆಗಿರುವುದರಿಂದ ಬೆಳೆಗಾರರಿಗೆ ದಿಕ್ಕು ತೋಚದಂತಾಗಿದೆ.ವೀಳ್ಯದೆಲೆ ಬೆಳೆಯಲು ಮಾಡಿರುವ ಖರ್ಚು ಸಹ ಕೈಸೇರದಂತಹ ಸ್ಥಿತಿ ನಿರ್ಮಾಣವಾಗಿದೆ. ಕಟಾವಿಗೆ ಬಂದಿರುವ ವೀಳ್ಯದೆಲೆ ಕೊಯ್ಯ<br />ದಿದ್ದರೆ ಕೊಳೆಯುತ್ತದೆ. ಇದರಿಂದಾಗಿ ಬಳ್ಳಿ ಹಾಳಾಗುತ್ತದೆ. ಆದ್ದರಿಂದ ರೈತರು ಅನಿವಾರ್ಯವಾಗಿ ಮಧ್ಯವರ್ತಿಗಳು ಕೇಳುವ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ’ ಎಂದು ಬೇಸರಿಸಿದರುಸಣ್ಣಕಿಟ್ಟದಹಳ್ಳಿ ಗ್ರಾಮದ ವೀಳ್ಯದೆಲೆ ಬೆಳೆಗಾರ ಈಶಣ್ಣ.</p>.<p>‘1 ಎಕರೆಯಲ್ಲಿ ವೀಳ್ಯದೆಲೆ ಬೆಳೆಯಲು ಸಗಣಿ ಹಾಗೂ ರಾಸಾಯನಿಕ ಗೊಬ್ಬರ ಹಾಕಿಸಿದ್ದು, ಔಷಧ ಸಿಂಪಡಣೆ, ಕಾರ್ಮಿಕರ ಕೂಲಿ, ಪ್ರತಿ ತಿಂಗಳು ಬಳ್ಳಿ ಕಟ್ಟಿಸುವುದು, ಪ್ರತಿವರ್ಷ ಬಳ್ಳಿಯನ್ನು ಗುಂಡಿಗೆ ಇಳಿಸುವುದು, ಇನ್ನಿತರ ಖರ್ಚು ಸೇರಿ ವರ್ಷಕ್ಕೆ ₹ 2.50 ಲಕ್ಷಕ್ಕೂ ಅಧಿಕ ಖರ್ಚು ಬರುತ್ತದೆ. ಬಳ್ಳಿ ನಾಟಿ ಮಾಡಿದ 1 ವರ್ಷಕ್ಕೆ ವೀಳ್ಯದೆಲೆ ಕಟಾವಿಗೆ ಬರುತ್ತದೆ.ವರ್ಷಕ್ಕೆ ಸುಮಾರು 100ರಿಂದ 120 ಪೆಂಡಿ ವೀಳ್ಯದೆಲೆ ಇಳುವರಿ ಬರಬಹುದು. ಈಗ ಸಿಗುತ್ತಿರುವ ದರದಿಂದ ಬೆಳೆಗೆ ಖರ್ಚು ಮಾಡಿರುವ ಹಣವೂ ಕೈಸೇರದಂತಾಗಿದೆ’ ಎಂದು ಬೆಳೆಗಾರ ರಂಗಸ್ವಾಮಿ ‘ಪ್ರಜಾವಾಣಿ’ ಬಳಿ ಅಳಲುತೋಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸದುರ್ಗ: </strong>ಲಾಕ್ಡೌನ್ನಿಂದಾಗಿ ವೀಳ್ಯದೆಲೆ ದರ ಕುಸಿತವಾಗಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.</p>.<p>ತಾಲ್ಲೂಕಿನ ದೊಡ್ಡಕಿಟ್ಟದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ನೂರಾರು ಮಂದಿ ರೈತರು ಹಲವು ವರ್ಷಗಳಿಂದಲೂ ವೀಳ್ಯದೆಲೆ ಬೆಳೆಯುತ್ತಿದ್ದಾರೆ. ಲಾಕ್ಡೌನ್ಗಿಂತ ಮೊದಲು ಬಳ್ಳಿಯಿಂದ ವೀಳ್ಯದೆಲೆ ಬಿಡಿಸಿ, ಪೆಂಡಿ ಕಟ್ಟಿಕೊಂಡು ಚಿತ್ರದುರ್ಗದ ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡುತ್ತಿದ್ದರು. ಆಗ ಒಂದು ಪೆಂಡಿ ವೀಳ್ಯದೆಲೆ ₹4,000ದಿಂದ<br />₹ 5,000ದವರೆಗೆ ದರ ಇತ್ತು. ಆದರೆ, ಲಾಕ್ಡೌನ್ ಆಗುತ್ತಿದ್ದಂತೆ ಸ್ಥಳೀಯ ಮಾರುಕಟ್ಟೆ ಬಂದ್ ಆಗಿದೆ.</p>.<p>ಒಂದೆಡೆ ಕೊರೊನಾ ಸೋಂಕು ಭೀತಿ, ಮತ್ತೊಂದೆಡೆ ಲಾಕ್ಡೌನ್ನಿಂದ ಮುಕ್ತ ಸಾರಿಗೆ ವ್ಯವಸ್ಥೆಗೆ ಅವಕಾಶ ಇಲ್ಲದಿರುವುದರಿಂದ ಇಲ್ಲಿನ ಬಡ ರೈತರು ಹೊರ ಜಿಲ್ಲೆ ಹಾಗೂ ರಾಜ್ಯದ ಮಾರುಕಟ್ಟೆಗೆ ವೀಳ್ಯದೆಲೆ ಸಾಗಿಸಲು ಪರದಾಡುವಂತಾಗಿದೆ.</p>.<p>ಹೊರಗಿನ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಮಾರುಕಟ್ಟೆಯೂ ಇಲ್ಲ. ಇದರಿಂದಾಗಿ ಕೆಲವು ಬೆಳೆಗಾರರು ಕಟಾವಿಗೆ ಬಂದಿರುವ ವೀಳ್ಯದೆಲೆ ಬಿಡಿಸಿಲ್ಲ. ಬಳ್ಳಿಯಲ್ಲಿಯೇ ಕೊಳೆಯುತ್ತಿದೆ.</p>.<p>‘ವೀಳ್ಯದೆಲೆ ಖರೀದಿಗೆ ಗ್ರಾಮ ಹಾಗೂ ರೈತರ ಜಮೀನಿಗೆ ಬರುವ ಸ್ಥಳೀಯ ವ್ಯಾಪಾರಿಗಳು 1 ಪೆಂಡಿ ವೀಳ್ಯದೆಲೆ ₹ 1,500ದಿಂದ ₹ 2,000ಕ್ಕೆ ಕೇಳುತ್ತಿದ್ದಾರೆ. ಅರ್ಧಕ್ಕಿಂತ ಹೆಚ್ಚು ದರ ಕುಸಿತ ಆಗಿರುವುದರಿಂದ ಬೆಳೆಗಾರರಿಗೆ ದಿಕ್ಕು ತೋಚದಂತಾಗಿದೆ.ವೀಳ್ಯದೆಲೆ ಬೆಳೆಯಲು ಮಾಡಿರುವ ಖರ್ಚು ಸಹ ಕೈಸೇರದಂತಹ ಸ್ಥಿತಿ ನಿರ್ಮಾಣವಾಗಿದೆ. ಕಟಾವಿಗೆ ಬಂದಿರುವ ವೀಳ್ಯದೆಲೆ ಕೊಯ್ಯ<br />ದಿದ್ದರೆ ಕೊಳೆಯುತ್ತದೆ. ಇದರಿಂದಾಗಿ ಬಳ್ಳಿ ಹಾಳಾಗುತ್ತದೆ. ಆದ್ದರಿಂದ ರೈತರು ಅನಿವಾರ್ಯವಾಗಿ ಮಧ್ಯವರ್ತಿಗಳು ಕೇಳುವ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ’ ಎಂದು ಬೇಸರಿಸಿದರುಸಣ್ಣಕಿಟ್ಟದಹಳ್ಳಿ ಗ್ರಾಮದ ವೀಳ್ಯದೆಲೆ ಬೆಳೆಗಾರ ಈಶಣ್ಣ.</p>.<p>‘1 ಎಕರೆಯಲ್ಲಿ ವೀಳ್ಯದೆಲೆ ಬೆಳೆಯಲು ಸಗಣಿ ಹಾಗೂ ರಾಸಾಯನಿಕ ಗೊಬ್ಬರ ಹಾಕಿಸಿದ್ದು, ಔಷಧ ಸಿಂಪಡಣೆ, ಕಾರ್ಮಿಕರ ಕೂಲಿ, ಪ್ರತಿ ತಿಂಗಳು ಬಳ್ಳಿ ಕಟ್ಟಿಸುವುದು, ಪ್ರತಿವರ್ಷ ಬಳ್ಳಿಯನ್ನು ಗುಂಡಿಗೆ ಇಳಿಸುವುದು, ಇನ್ನಿತರ ಖರ್ಚು ಸೇರಿ ವರ್ಷಕ್ಕೆ ₹ 2.50 ಲಕ್ಷಕ್ಕೂ ಅಧಿಕ ಖರ್ಚು ಬರುತ್ತದೆ. ಬಳ್ಳಿ ನಾಟಿ ಮಾಡಿದ 1 ವರ್ಷಕ್ಕೆ ವೀಳ್ಯದೆಲೆ ಕಟಾವಿಗೆ ಬರುತ್ತದೆ.ವರ್ಷಕ್ಕೆ ಸುಮಾರು 100ರಿಂದ 120 ಪೆಂಡಿ ವೀಳ್ಯದೆಲೆ ಇಳುವರಿ ಬರಬಹುದು. ಈಗ ಸಿಗುತ್ತಿರುವ ದರದಿಂದ ಬೆಳೆಗೆ ಖರ್ಚು ಮಾಡಿರುವ ಹಣವೂ ಕೈಸೇರದಂತಾಗಿದೆ’ ಎಂದು ಬೆಳೆಗಾರ ರಂಗಸ್ವಾಮಿ ‘ಪ್ರಜಾವಾಣಿ’ ಬಳಿ ಅಳಲುತೋಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>