<p><strong>ಚಳ್ಳಕೆರೆ:</strong> ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ನಗರದ ಹೊರವಲಯದ ಕಾಟಪ್ಪನಹಟ್ಟಿ ಸುತ್ತಲಿನ ರೈತರು ಸೋಮವಾರ ನಗರದ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.</p>.<p>ಲೋಡ್ ಶೆಡ್ಡಿಂಗ್ ಆಗುತ್ತಿರುವುದರಿಂದ ಹಗಲು 12 ಗಂಟೆ ವಿದ್ಯುತ್ ಇರುತ್ತದೆ. ಇಡೀ ರಾತ್ರಿ ಕತ್ತಲಲ್ಲಿ ಇರಬೇಕಾಗಿದೆ. ವಿದ್ಯುತ್ ಇಲ್ಲದ ಕಾರಣ ಕುಡಿಯುವ ನೀರಿನ ಸಮಸ್ಯೆಯಾಗಿದೆ.</p>.<p>ಹೊಲದಲ್ಲಿ ಇಟ್ಟ ಫಸಲು ಬಿಸಿಲಿಗೆ ಬಾಡುವುದಲ್ಲದೆ ಬೆಳೆ ನಷ್ಟವಾಗುತ್ತಿದೆ. ಪರೀಕ್ಷೆ ಸಮಯವಾದ್ದರಿಂದ ವಿದ್ಯುತ್ ಕಡಿತಗೊಳಿಸುತ್ತಿರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಮುಖಂಡ ಶ್ರೀನಿವಾಸ್ ಒತ್ತಾಯಿಸಿದರು.</p>.<p>‘ಈಗಾಗಲೇ ಹಲವು ಬಾರಿ ಓವರ್ಲೋಡ್ ಆಗುತ್ತಿದೆ. ಹೀಗಾಗಿ ಕೆಲ ಭಾಗದ ಐಪಿ ಸೆಟ್ನ ವಿದ್ಯುತ್ ಕಡಿತಗೊಳಿಸಿ ಸರಿದೂಗಿಸುತ್ತಿದ್ದೇವೆ. ಕಳೆದ ವರ್ಷ 16,000 ಮೆಗಾ ವಾಟ್ ವಿದ್ಯುತ್ ಬೇಡಿಕೆ ಇತ್ತು. ಈ ವರ್ಷ ಈಗಾಲೇ 19,000 ಮೆಗಾ ವಾಟ್ ಖರ್ಚಾಗಿದೆ. ಒಂದು ಭಾಗದಲ್ಲಿ ಕಡಿತಗೊಳಿಸಿ ಇನ್ನೊಂದು ಭಾಗಕ್ಕೆ ಪೂರೈಸಲು ಸಹಕಾರ ನೀಡಬೇಕು’ ಎಂದು ಬೆಸ್ಕಾಂ ಅಧಿಕಾರಿ ಶಿವಪ್ರಸಾದ್ ಮನವಿ ಮಾಡಿದರು.</p>.<p>ಬೆಸ್ಕಾಂ ಸಿಬ್ಬಂದಿ ನಾಗರಾಜ, ಕಾಟಪ್ಪನಹಟ್ಟಿ ನಾಗರಾಜ, ಕೆ. ವೀರಭದ್ರಪ್ಪ, ಮಂಜುನಾಥ, ವೀರಣ್ಣ, ಕೃಷ್ಣಮೂರ್ತಿ, ಚೆನ್ನಕೇಶವ, ವೀರೇಶ್, ಈರಣ್ಣ, ರಾಜಣ್ಣ, ಬೋರಯ್ಯ, ರಂಗಸ್ವಾಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಳ್ಳಕೆರೆ:</strong> ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ನಗರದ ಹೊರವಲಯದ ಕಾಟಪ್ಪನಹಟ್ಟಿ ಸುತ್ತಲಿನ ರೈತರು ಸೋಮವಾರ ನಗರದ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.</p>.<p>ಲೋಡ್ ಶೆಡ್ಡಿಂಗ್ ಆಗುತ್ತಿರುವುದರಿಂದ ಹಗಲು 12 ಗಂಟೆ ವಿದ್ಯುತ್ ಇರುತ್ತದೆ. ಇಡೀ ರಾತ್ರಿ ಕತ್ತಲಲ್ಲಿ ಇರಬೇಕಾಗಿದೆ. ವಿದ್ಯುತ್ ಇಲ್ಲದ ಕಾರಣ ಕುಡಿಯುವ ನೀರಿನ ಸಮಸ್ಯೆಯಾಗಿದೆ.</p>.<p>ಹೊಲದಲ್ಲಿ ಇಟ್ಟ ಫಸಲು ಬಿಸಿಲಿಗೆ ಬಾಡುವುದಲ್ಲದೆ ಬೆಳೆ ನಷ್ಟವಾಗುತ್ತಿದೆ. ಪರೀಕ್ಷೆ ಸಮಯವಾದ್ದರಿಂದ ವಿದ್ಯುತ್ ಕಡಿತಗೊಳಿಸುತ್ತಿರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಮುಖಂಡ ಶ್ರೀನಿವಾಸ್ ಒತ್ತಾಯಿಸಿದರು.</p>.<p>‘ಈಗಾಗಲೇ ಹಲವು ಬಾರಿ ಓವರ್ಲೋಡ್ ಆಗುತ್ತಿದೆ. ಹೀಗಾಗಿ ಕೆಲ ಭಾಗದ ಐಪಿ ಸೆಟ್ನ ವಿದ್ಯುತ್ ಕಡಿತಗೊಳಿಸಿ ಸರಿದೂಗಿಸುತ್ತಿದ್ದೇವೆ. ಕಳೆದ ವರ್ಷ 16,000 ಮೆಗಾ ವಾಟ್ ವಿದ್ಯುತ್ ಬೇಡಿಕೆ ಇತ್ತು. ಈ ವರ್ಷ ಈಗಾಲೇ 19,000 ಮೆಗಾ ವಾಟ್ ಖರ್ಚಾಗಿದೆ. ಒಂದು ಭಾಗದಲ್ಲಿ ಕಡಿತಗೊಳಿಸಿ ಇನ್ನೊಂದು ಭಾಗಕ್ಕೆ ಪೂರೈಸಲು ಸಹಕಾರ ನೀಡಬೇಕು’ ಎಂದು ಬೆಸ್ಕಾಂ ಅಧಿಕಾರಿ ಶಿವಪ್ರಸಾದ್ ಮನವಿ ಮಾಡಿದರು.</p>.<p>ಬೆಸ್ಕಾಂ ಸಿಬ್ಬಂದಿ ನಾಗರಾಜ, ಕಾಟಪ್ಪನಹಟ್ಟಿ ನಾಗರಾಜ, ಕೆ. ವೀರಭದ್ರಪ್ಪ, ಮಂಜುನಾಥ, ವೀರಣ್ಣ, ಕೃಷ್ಣಮೂರ್ತಿ, ಚೆನ್ನಕೇಶವ, ವೀರೇಶ್, ಈರಣ್ಣ, ರಾಜಣ್ಣ, ಬೋರಯ್ಯ, ರಂಗಸ್ವಾಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>