ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೌಢ್ಯ ಆಚರಣೆಗಳಿಂದ ಹೊರಬನ್ನಿ’: ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ

Last Updated 9 ನವೆಂಬರ್ 2021, 7:06 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಧಾರ್ಮಿಕ ವಿಚಾರದಲ್ಲಿ ಬುಡಕಟ್ಟು ಸಮುದಾಯದವರು ಆಚರಿಸುವ ಮೌಢ್ಯ ಆಚರಣೆಗಳು, ಸಮಾಜದಲ್ಲಿ ಭಿನ್ನತೆಯನ್ನು ಗುರುತಿಸುವಂತಾಗಿದೆ. ಈಗಿನ ವಿದ್ಯಾವಂತ ಹಾಗೂ ಪ್ರಜ್ಞಾವಂತರು ಈ ಬುಡಕಟ್ಟು ಸಮುದಾಯಗಳನ್ನು ಸುಧಾರಿಸುವ ಮತ್ತು ಮೌಢ್ಯದಿಂದ ಹೊರಬರುವಂತೆ ಸಂಘಟಿಸುವ ಕಾಲ ಸನ್ನಿಹಿತವಾಗಿದೆ ಎಂದು ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ ಹೇಳಿದರು.

ಸಮೀಪದ ತಣಿಗೆಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕರಿಯಮ್ಮ ದೇವಿ ರಥದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬುಡಕಟ್ಟು ಸಮುದಾಯದವರು, ಹಬ್ಬ, ಜಾತ್ರೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದೇವರ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ನೀಡುವುದು ಇಂದಿಗೂ ಆಚರಿಸುತ್ತಿರುವುದು ವಿಷಾದನೀಯ. ಯಾವುದೇ ದೇವರು ಬಲಿಯನ್ನು ನೀಡಬೇಕು ಎಂದು ಹೇಳಿಲ್ಲ. ದೇವರನ್ನು ಒಲಿಸಿಕೊಳ್ಳಲು ಶುದ್ಧವಾದ ಮನಸು ಮತ್ತು ಏಕಾಗ್ರತೆ ಬೇಕೇ ವಿನಾ ಮೌಢ್ಯಾಚರಣೆಗಳಲ್ಲ ಎಂದು ತಿಳಿಸಿದರು.

ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ‘ಹುಟ್ಟು ಸಾವಿನ ನಡುವಿನ ಜೀವನ ಸಾರ್ಥಕವಾಗಬೇಕೆಂದರೆ, ಭಗವಂತನ ನಾಮಸ್ಮರಣೆಯನ್ನು ಮಾಡುವುದು ಲೇಸು’ ಎಂದರು.

ಶಾಸಕ ಎಂ. ಚಂದ್ರಪ್ಪ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸುವುದಾಗಿ ತಿಳಿಸಿದರು.

ಬಿ. ದುರ್ಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಟಿ. ರಮೇಶ್‌ಅಧ್ಯಕ್ಷತೆ ವಹಿಸಿದ್ದರು. ಮುರಳಿಧರ ಸ್ವಾಮೀಜಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಟಿ. ಹನುಮಂತಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಎಂ.ಬಿ. ಸಿದ್ಧೇಶ್‌, ಲೋಹಿತ್‌ಕುಮಾರ್‌, ಇಂದ್ರಪ್ಪ ಗೌಡ್ರು, ಮಂಜಿಬಾಯಿ ಸುರೇಶ್‌, ಸುಧಮ್ಮ ಚಂದ್ರಶೇಖರಪ್ಪ, ಟಿ.ಆರ್‌. ಗೋವಿಂದನಾಯ್ಕ್‌, ಲಿಂಗರಾಜ್‌,ರುದ್ರೇಗೌಡ, ಹನುಮಂತಪ್ಪ ಗೋಡೆಮನೆ, ನಾರಾಯಣನಾಯ್ಕ್‌, ದೇವರಾಜ್‌, ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT