<p><strong>ಮೊಳಕಾಲ್ಮುರು:</strong>ಇಲ್ಲಿನ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಭಾನುವಾರ ನೂತನವಾಗಿ ನಿರ್ಮಿಸಿರುವ ಪದ್ಮಾವತಿ ಕಲ್ಯಾಣ ಮಂಟಪ ಲೋಕಾರ್ಪಣೆಮಾಡಲಾಯಿತು.</p>.<p>ರಾಘವೇಂದ್ರ ಸ್ವಾಮಿ ಮಠದಿಂದ ₹50 ಲಕ್ಷ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಲೋಕಾರ್ಪಣೆ ಅಂಗವಾಗಿ ಶನಿವಾರಪುಣ್ಯಾಹ, ಮಹಾ ಗಣಪತಿ ಪೂಜೆ, ಸ್ವಸ್ತಿವಾಚನ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ಕಾರ್ಯಗಳು ಜರುಗಿದವು.</p>.<p>ಭಾನುವಾರ ಬೆಳಿಗ್ಗೆ ಗೋಪೂಜೆ, ಶ್ರೀನಿವಾಸ ಸ್ವಾಮಿಯ ಪ್ರವೇಶ, ಸ್ವಾಮಿಗೆ ಆರತಿ, ಶ್ರೀನಿವಾಸ ಸ್ವಾಮಿಗೆ ವರಪೂಜೆ, ದೇವರಿಗೆ ಮಂಗಳ ಸ್ನಾನ,ಪುಣ್ಯಾಹ, ನಾಂದಿ, ಲಕ್ಷ್ಮೀ ಪೂಜೆ, ಮಧುಪರ್ಕ ಪೂಜೆ, ಕಾಶಿಯಾತ್ರೆ ನಡೆಸಲಾಯಿತು.</p>.<p>ಮಧ್ಯಾಹ್ನ ನಿರೀಕ್ಷಣೆ, ಕನ್ಯಾದಾನ, ಕಂಕಣ ಬಂಧನ, ಮಾಂಗಲ್ಯಧಾರಣೆ, ಮಹಾಮಂಗಳಾರತಿ, ಹಸ್ತೋದಕ, ತೀರ್ಥಪ್ರಸಾದ, ನೈವೇದ್ಯ, ಮಂತ್ರಾಕ್ಷತೆನೀಡಲಾಯಿತು. ಬೆಂಗಳೂರಿನ ಕಲ್ಯಾಣಂರಾಘವೇಂದ್ರರಾವ್ ನೇತೃತ್ವ ವಹಿಸಿದ್ದರು.</p>.<p>ದೇವಸ್ಥಾನ ಸಮಿತಿಯ ಎಂ.ಎಸ್. ಅನಂತ ಪಭ್ಮನಾಭ, ಎಂ.ಎಸ್. ಗುರುರಾಜ್, ಎಂ.ಎಸ್. ವೇಣುಗೋಪಾಲ್, ಎಂ.ಎಸ್. ಶ್ರೀಧರ್, ಎಂಎಸ್.ಗೋಪಿನಾಥ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು:</strong>ಇಲ್ಲಿನ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಭಾನುವಾರ ನೂತನವಾಗಿ ನಿರ್ಮಿಸಿರುವ ಪದ್ಮಾವತಿ ಕಲ್ಯಾಣ ಮಂಟಪ ಲೋಕಾರ್ಪಣೆಮಾಡಲಾಯಿತು.</p>.<p>ರಾಘವೇಂದ್ರ ಸ್ವಾಮಿ ಮಠದಿಂದ ₹50 ಲಕ್ಷ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಲೋಕಾರ್ಪಣೆ ಅಂಗವಾಗಿ ಶನಿವಾರಪುಣ್ಯಾಹ, ಮಹಾ ಗಣಪತಿ ಪೂಜೆ, ಸ್ವಸ್ತಿವಾಚನ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ಕಾರ್ಯಗಳು ಜರುಗಿದವು.</p>.<p>ಭಾನುವಾರ ಬೆಳಿಗ್ಗೆ ಗೋಪೂಜೆ, ಶ್ರೀನಿವಾಸ ಸ್ವಾಮಿಯ ಪ್ರವೇಶ, ಸ್ವಾಮಿಗೆ ಆರತಿ, ಶ್ರೀನಿವಾಸ ಸ್ವಾಮಿಗೆ ವರಪೂಜೆ, ದೇವರಿಗೆ ಮಂಗಳ ಸ್ನಾನ,ಪುಣ್ಯಾಹ, ನಾಂದಿ, ಲಕ್ಷ್ಮೀ ಪೂಜೆ, ಮಧುಪರ್ಕ ಪೂಜೆ, ಕಾಶಿಯಾತ್ರೆ ನಡೆಸಲಾಯಿತು.</p>.<p>ಮಧ್ಯಾಹ್ನ ನಿರೀಕ್ಷಣೆ, ಕನ್ಯಾದಾನ, ಕಂಕಣ ಬಂಧನ, ಮಾಂಗಲ್ಯಧಾರಣೆ, ಮಹಾಮಂಗಳಾರತಿ, ಹಸ್ತೋದಕ, ತೀರ್ಥಪ್ರಸಾದ, ನೈವೇದ್ಯ, ಮಂತ್ರಾಕ್ಷತೆನೀಡಲಾಯಿತು. ಬೆಂಗಳೂರಿನ ಕಲ್ಯಾಣಂರಾಘವೇಂದ್ರರಾವ್ ನೇತೃತ್ವ ವಹಿಸಿದ್ದರು.</p>.<p>ದೇವಸ್ಥಾನ ಸಮಿತಿಯ ಎಂ.ಎಸ್. ಅನಂತ ಪಭ್ಮನಾಭ, ಎಂ.ಎಸ್. ಗುರುರಾಜ್, ಎಂ.ಎಸ್. ವೇಣುಗೋಪಾಲ್, ಎಂ.ಎಸ್. ಶ್ರೀಧರ್, ಎಂಎಸ್.ಗೋಪಿನಾಥ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>