‘ಯುಗಾದಿ ಹಬ್ಬದ ಸಮಯದಲ್ಲಿ ಒಂದಿಷ್ಟು ಬಾಳೆ ಕಟಾವು ಮಾಡಲಾಗಿತ್ತು. ನಿರೀಕ್ಷಿಸಿದಷ್ಟು ಬೆಲೆ ಸಿಗಲಿಲ್ಲ. ಬಸವ ಜಯಂತಿಗೆ ಉಳಿದ ಬಾಳೆಯನ್ನು ಕಟಾವು ಮಾಡುವ ಆಲೋಚನೆ ಇತ್ತು. ಶುಕ್ರವಾರ ಸಂಜೆ ಮಳೆಗಿಂತ ಬಿರುಗಾಳಿಯೇ ಜೋರಾಗಿ ಬೀಸಿದ್ದರಿಂದ ಬಹುತೇಕ ಬೆಳೆ ನೆಲಕಚ್ಚಿದೆ. ಬೇಸಾಯಕ್ಕೆ ಖರ್ಚು ಮಾಡಿದ ಹಣವೂ ಈಗ ಸಿಗದು’ ಎಂದು ನಾಗರತ್ನಮ್ಮ ಅಳಲು ತೋಡಿಕೊಂಡರು.