<p><strong>ಹಿರಿಯೂರು:</strong> ತಾಲ್ಲೂಕಿನ ಐಮಂಗಲ ಪೊಲೀಸ್ ತರಬೇತಿ ಶಾಲೆಯಲ್ಲಿ ಇಬ್ಬರು ಬೋಧಕರು ಪ್ರಶಿಕ್ಷಣಾರ್ಥಿಗಳಿಂದ ಹಣ ವಸೂಲಿ ಮಾಡಿದ್ದಾರೆಂದು ಆರೋಪಿಸಿ ಶಾಲೆಯ ಪ್ರಾಂಶುಪಾಲರು ಐಮಂಗಲ ಠಾಣೆಗೆ ದೂರು ನೀಡಿದ್ದಾರೆ.</p>.<p>ಬುನಾದಿ ತರಬೇತಿ ನೀಡುತ್ತಿರುವ ಬೋಧಕರಾದ ಈ.ಮಹಲಿಂಗಪ್ಪ, ಎಸ್.ವಿ. ರವಿನಾಯ್ಕ್ ವಿರುದ್ಧ ಪ್ರಾಂಶುಪಾಲ ಎನ್. ಶ್ರೀನಿವಾಸ್ ಆ. 6ರಂದು ದೂರು ನೀಡಿದ್ದಾರೆ.</p>.<p>ಈ. ಮಹಲಿಂಗಪ್ಪ ಅವರು ಪ್ರಶಿಕ್ಷಣಾರ್ಥಿ ಮಂಜುನಾಥ್ ಛಲವಾದಿ ಮತ್ತು ಇತರೆ ಪ್ರಶಿಕ್ಷಣಾರ್ಥಿಗಳಿಂದ ಜೂನ್ 26 ಮತ್ತು ವಿವಿಧ ದಿನಾಂಕಗಳಂದು ₹ 62,000, ಎಸ್.ವಿ. ರವಿನಾಯ್ಕ್ ಅವರು ಶಿವನಗೌಡ ಮತ್ತು ಇತರೆ ಪ್ರಶಿಕ್ಷಣಾರ್ಥಿಗಳಿಂದ ಮೇ 20ರಂದು ಸರ್ಕಾರಿ ವಾಹನಕ್ಕೆ ಸೌಂಡ್ ಸಿಸ್ಟಂ ಹಾಕಿಸಬೇಕೆಂದು ₹ 200 ರೂಪಾಯಿ, ಡ್ರೈಫ್ರೂಟ್ಸ್ಗಾಗಿ ತಲಾ ₹ 250 ರೂಪಾಯಿ, ಜನ್ಮದಿನ ಆಚರಣೆಗಾಗಿ ತಲಾ ₹ 500 ವಸೂಲಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p>ಪ್ರಾಂಶುಪಾಲರ ದೂರು ಆಧರಿಸಿ ಮೊ.ನಂ.121/2025 ಕಲಂ 308(2)ಬಿಎನ್ ಎಸ್–23 ರೀತ್ಯ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರಿಯೂರು:</strong> ತಾಲ್ಲೂಕಿನ ಐಮಂಗಲ ಪೊಲೀಸ್ ತರಬೇತಿ ಶಾಲೆಯಲ್ಲಿ ಇಬ್ಬರು ಬೋಧಕರು ಪ್ರಶಿಕ್ಷಣಾರ್ಥಿಗಳಿಂದ ಹಣ ವಸೂಲಿ ಮಾಡಿದ್ದಾರೆಂದು ಆರೋಪಿಸಿ ಶಾಲೆಯ ಪ್ರಾಂಶುಪಾಲರು ಐಮಂಗಲ ಠಾಣೆಗೆ ದೂರು ನೀಡಿದ್ದಾರೆ.</p>.<p>ಬುನಾದಿ ತರಬೇತಿ ನೀಡುತ್ತಿರುವ ಬೋಧಕರಾದ ಈ.ಮಹಲಿಂಗಪ್ಪ, ಎಸ್.ವಿ. ರವಿನಾಯ್ಕ್ ವಿರುದ್ಧ ಪ್ರಾಂಶುಪಾಲ ಎನ್. ಶ್ರೀನಿವಾಸ್ ಆ. 6ರಂದು ದೂರು ನೀಡಿದ್ದಾರೆ.</p>.<p>ಈ. ಮಹಲಿಂಗಪ್ಪ ಅವರು ಪ್ರಶಿಕ್ಷಣಾರ್ಥಿ ಮಂಜುನಾಥ್ ಛಲವಾದಿ ಮತ್ತು ಇತರೆ ಪ್ರಶಿಕ್ಷಣಾರ್ಥಿಗಳಿಂದ ಜೂನ್ 26 ಮತ್ತು ವಿವಿಧ ದಿನಾಂಕಗಳಂದು ₹ 62,000, ಎಸ್.ವಿ. ರವಿನಾಯ್ಕ್ ಅವರು ಶಿವನಗೌಡ ಮತ್ತು ಇತರೆ ಪ್ರಶಿಕ್ಷಣಾರ್ಥಿಗಳಿಂದ ಮೇ 20ರಂದು ಸರ್ಕಾರಿ ವಾಹನಕ್ಕೆ ಸೌಂಡ್ ಸಿಸ್ಟಂ ಹಾಕಿಸಬೇಕೆಂದು ₹ 200 ರೂಪಾಯಿ, ಡ್ರೈಫ್ರೂಟ್ಸ್ಗಾಗಿ ತಲಾ ₹ 250 ರೂಪಾಯಿ, ಜನ್ಮದಿನ ಆಚರಣೆಗಾಗಿ ತಲಾ ₹ 500 ವಸೂಲಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p>ಪ್ರಾಂಶುಪಾಲರ ದೂರು ಆಧರಿಸಿ ಮೊ.ನಂ.121/2025 ಕಲಂ 308(2)ಬಿಎನ್ ಎಸ್–23 ರೀತ್ಯ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>