‘ಮನೆ ವ್ಯರ್ಥವಾಗುತ್ತಿರುವುದನ್ನು ಅರಿತ ಪಟ್ಟಣ ಪಂಚಾಯಿತಿ ಮರು ಸಮೀಕ್ಷೆ, ಮರು ಹಂಚಿಕೆ ಕೆಲಸ ಮಾಡಿತು. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ರಾಜ್ಯ ಹಣಕಾಸು ಯೋಜನೆಗಳಲ್ಲಿ ಬಡಾವಣೆಗೆ ವಿದ್ಯುತ್, ರಸ್ತೆ, ಚರಂಡಿ ವ್ಯವಸ್ಥೆ ಮಾಡಿತು. ಆದರೆ, ಫಲಾನುಭವಿಗಳು ವಾಸ ಮಾಡದ ಕಾರಣ ಬಡಾವಣೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ’ ಎಂದು ಬಡಾವಣೆಯ ಹೊನ್ನೂರಪ್ಪ, ಯಲ್ಲಮ್ಮ ಹೇಳಿದರು.