<p><strong>ಹೊಸದುರ್ಗ</strong>: ತಾಲ್ಲೂಕಿನ ಕಂಚೀಪುರದಲ್ಲಿ ನೆಲೆಸಿರುವ ಕಂಚಿ ವರದರಾಜ ಸ್ವಾಮಿಯ ನಾಮಧಾರಣೆ ದಶರಥ ರಾಮೇಶ್ವರದಲ್ಲಿ ಮಂಗಳವಾರ ವೈಭವಯುತವಾಗಿ ನಡೆಯಿತು.</p>.<p>ಉತ್ತರೆ ಮಳೆ ಅಂಬು ಮುಗಿದ ನಂತರ ನಡೆಯುವ ನಾಮಧಾರಣೆ ಕಾರ್ಯದ ಅಂಗವಾಗಿ, ಹೊಂಡದಲ್ಲಿ ಗಂಗಾಪೂಜೆ ನೇರವೇರಿತು. ಸ್ವಾಮಿ ಉತ್ತರೆ ಮಳೆಯ ನೀರಿನಲ್ಲಿ ತಿರುನಾಮ ತೇದು ಹಚ್ಚಿಕೊಳ್ಳುತ್ತದೆ. ನಂತರ ಸ್ವಾಮಿ ದಶರಥರಾಮೇಶ್ವರ ದೇವರ ಬಳಿ ತೆರಳಿತು. ಅಲ್ಲಿ ದೇವರಿಗೆ ನಾಮಧಾರಣೆ ನಡೆಯಿತು. </p>.<p>ಕಂಚಿದೇವರ ಪಟ್ಟದ ಪೂಜಾರಿಯು ತಲೆಗೆ ಪಾಗು ಸುತ್ತಿಕೊಂಡು ದೇವರನ್ನು ಹೊರುತ್ತಾರೆ. ಇಲ್ಲಿ ಕಂಚಿ ದೇವರ ಕುಣಿತ ಅತ್ಯಂತ ಆಕರ್ಷಕವಾಗಿದ್ದು, ಈ ದೃಶ್ಯವನ್ನು ಭಕ್ತರು ಕಣ್ತುಂಬಿಕೊಳ್ಳುತ್ತಾರೆ. ಕಂಚಿ ವರದರಾಜ ಸ್ವಾಮಿ ದಶರಥರಾಮೇಶ್ವರನ ಪರಮಶಿಷ್ಯನೆಂಬ ನಂಬಿಕೆ ಮತ್ತು ಆಚರಣೆಗಳು ಇಂದಿಗೂ ಇಲ್ಲಿವೆ.</p>.<p><strong>ಹಣ ಸುರಿದು ಭಕ್ತಿ ಸಮರ್ಪಿಸಿದ ಭಕ್ತರು:</strong> ನಾಮಧಾರಣೆ ಮುಗಿದ ನಂತರ ಸ್ವಾಮಿ ಬಂದಕೂಡಲೇ ಹಣ ತೂರಿ ಭಕ್ತಿ ಸಮರ್ಪಿಸಿದರು. ತಮ್ಮ ಇಷ್ಟಾರ್ಥ ಪೂರೈಸುವ ದೇವರಿಗೆ ಹರಕೆ ರೂಪದಲ್ಲಿ ಹಣ ತೂರಲಾಗುತ್ತದೆ. ಇದು ವಿಶೇಷ ಆಚರಣೆಯಾಗಿದ್ದು, ನಾಡಿನಲ್ಲೇ ಪ್ರಖ್ಯಾತಿ ಪಡೆದಿದೆ.</p>.<p>ಬುತ್ತಿಬಾನ ಹೊತ್ತ ಭಕ್ತರು ಮಂಗಳವಾರ ಸಿದ್ದಪ್ಪನ ಬೆಟ್ಟದಿಂದ ನೇರವಾಗಿ ದಶರಥರಾಮೇಶ್ವರಕ್ಕೆ ಆಗಮಿಸಿದರು. ಬುತ್ತಿ ಎಡೆಯಲ್ಲಿನ ಆಹಾರವನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆಲ್ಲಾ ನೀಡಿದರು.</p>.<p><strong>ಸಾಮೂಹಿಕ ಅನ್ನ ದಾಸೋಹ</strong>: ಕಂಚಿ ವರದರಾಜ ಸ್ವಾಮಿ ದಶರಥರಾಮೇಶ್ವರಕ್ಕೆ ಬಂದಾಗ, ಆಗಮಿಸಿದ ಸಾವಿರಾರು ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ಸಾವಿರಾರು ಜನರಿಗೆ ಅನ್ನ ದಾಸೋಹ ನಡೆಯಿತು. </p>.<p><strong>ಕಾನುಬೇನಹಳ್ಳಿಯಲ್ಲಿ ಆಚರಣೆ</strong>: ದಶರಥರಾಮೇಶ್ವರದಲ್ಲಿ ನಾಮಧಾರಣೆ ಮುಗಿಸಿಕೊಂಡು ಕಾನುಬೇನಹಳ್ಳಿಗೆ ಸ್ವಾಮಿಯು ಸಾಗಿತು. ಅಲ್ಲಿ ರಾತ್ರಿ 101 ಎಡೆ ಸೇವೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸದುರ್ಗ</strong>: ತಾಲ್ಲೂಕಿನ ಕಂಚೀಪುರದಲ್ಲಿ ನೆಲೆಸಿರುವ ಕಂಚಿ ವರದರಾಜ ಸ್ವಾಮಿಯ ನಾಮಧಾರಣೆ ದಶರಥ ರಾಮೇಶ್ವರದಲ್ಲಿ ಮಂಗಳವಾರ ವೈಭವಯುತವಾಗಿ ನಡೆಯಿತು.</p>.<p>ಉತ್ತರೆ ಮಳೆ ಅಂಬು ಮುಗಿದ ನಂತರ ನಡೆಯುವ ನಾಮಧಾರಣೆ ಕಾರ್ಯದ ಅಂಗವಾಗಿ, ಹೊಂಡದಲ್ಲಿ ಗಂಗಾಪೂಜೆ ನೇರವೇರಿತು. ಸ್ವಾಮಿ ಉತ್ತರೆ ಮಳೆಯ ನೀರಿನಲ್ಲಿ ತಿರುನಾಮ ತೇದು ಹಚ್ಚಿಕೊಳ್ಳುತ್ತದೆ. ನಂತರ ಸ್ವಾಮಿ ದಶರಥರಾಮೇಶ್ವರ ದೇವರ ಬಳಿ ತೆರಳಿತು. ಅಲ್ಲಿ ದೇವರಿಗೆ ನಾಮಧಾರಣೆ ನಡೆಯಿತು. </p>.<p>ಕಂಚಿದೇವರ ಪಟ್ಟದ ಪೂಜಾರಿಯು ತಲೆಗೆ ಪಾಗು ಸುತ್ತಿಕೊಂಡು ದೇವರನ್ನು ಹೊರುತ್ತಾರೆ. ಇಲ್ಲಿ ಕಂಚಿ ದೇವರ ಕುಣಿತ ಅತ್ಯಂತ ಆಕರ್ಷಕವಾಗಿದ್ದು, ಈ ದೃಶ್ಯವನ್ನು ಭಕ್ತರು ಕಣ್ತುಂಬಿಕೊಳ್ಳುತ್ತಾರೆ. ಕಂಚಿ ವರದರಾಜ ಸ್ವಾಮಿ ದಶರಥರಾಮೇಶ್ವರನ ಪರಮಶಿಷ್ಯನೆಂಬ ನಂಬಿಕೆ ಮತ್ತು ಆಚರಣೆಗಳು ಇಂದಿಗೂ ಇಲ್ಲಿವೆ.</p>.<p><strong>ಹಣ ಸುರಿದು ಭಕ್ತಿ ಸಮರ್ಪಿಸಿದ ಭಕ್ತರು:</strong> ನಾಮಧಾರಣೆ ಮುಗಿದ ನಂತರ ಸ್ವಾಮಿ ಬಂದಕೂಡಲೇ ಹಣ ತೂರಿ ಭಕ್ತಿ ಸಮರ್ಪಿಸಿದರು. ತಮ್ಮ ಇಷ್ಟಾರ್ಥ ಪೂರೈಸುವ ದೇವರಿಗೆ ಹರಕೆ ರೂಪದಲ್ಲಿ ಹಣ ತೂರಲಾಗುತ್ತದೆ. ಇದು ವಿಶೇಷ ಆಚರಣೆಯಾಗಿದ್ದು, ನಾಡಿನಲ್ಲೇ ಪ್ರಖ್ಯಾತಿ ಪಡೆದಿದೆ.</p>.<p>ಬುತ್ತಿಬಾನ ಹೊತ್ತ ಭಕ್ತರು ಮಂಗಳವಾರ ಸಿದ್ದಪ್ಪನ ಬೆಟ್ಟದಿಂದ ನೇರವಾಗಿ ದಶರಥರಾಮೇಶ್ವರಕ್ಕೆ ಆಗಮಿಸಿದರು. ಬುತ್ತಿ ಎಡೆಯಲ್ಲಿನ ಆಹಾರವನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆಲ್ಲಾ ನೀಡಿದರು.</p>.<p><strong>ಸಾಮೂಹಿಕ ಅನ್ನ ದಾಸೋಹ</strong>: ಕಂಚಿ ವರದರಾಜ ಸ್ವಾಮಿ ದಶರಥರಾಮೇಶ್ವರಕ್ಕೆ ಬಂದಾಗ, ಆಗಮಿಸಿದ ಸಾವಿರಾರು ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ಸಾವಿರಾರು ಜನರಿಗೆ ಅನ್ನ ದಾಸೋಹ ನಡೆಯಿತು. </p>.<p><strong>ಕಾನುಬೇನಹಳ್ಳಿಯಲ್ಲಿ ಆಚರಣೆ</strong>: ದಶರಥರಾಮೇಶ್ವರದಲ್ಲಿ ನಾಮಧಾರಣೆ ಮುಗಿಸಿಕೊಂಡು ಕಾನುಬೇನಹಳ್ಳಿಗೆ ಸ್ವಾಮಿಯು ಸಾಗಿತು. ಅಲ್ಲಿ ರಾತ್ರಿ 101 ಎಡೆ ಸೇವೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>