<p><strong>ಹೊಸದುರ್ಗ</strong>: ಜಾನಪದ ಸಾಹಿತ್ಯವನ್ನು ಕೇಳಿಸಿಕೊಂಡ ವಿದ್ಯಾವಂತರು ಅವುಗಳನ್ನು ದಾಖಲಿಸಿ ಪದವಿ ಪಡೆದುಕೊಳ್ಳುತ್ತಿದ್ದಾರೆ. ಓದು ಬರಹ ಬಲ್ಲವರು ಬರೆದಿದ್ದು ಮಾತ್ರ ಸಾಹಿತ್ಯವಲ್ಲ. ಅನುಭಾವದ ನುಡಿಗಳನ್ನು ಹಂಚಿಕೊಳ್ಳುವವರೆಲ್ಲರೂ ಸಾಹಿತಿಗಳೇ. ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.</p>.<p>ಸಾಣೇಹಳ್ಳಿಯ ಬಯಲು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ‘ರಾಷ್ಟ್ರೀಯ ನಾಟಕೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಯಾವ ಮನೆಯಲ್ಲಿ ತಾಯಿ ಸುಸಂಸ್ಕೃತವಾಗಿರುವಳೋ ಆ ಮನೆ ಅಭಿವೃದ್ಧಿ ಪಥದತ್ತ ಸಾಗುತ್ತದೆ. ಆಕೆ ಸಮಾಜದ ಜ್ಯೋತಿ, ಕಣ್ಣು ಹಾಗೂ ನಾಡಿನ ಬೆಳಕಾಗುವಳು. ಸಮಾಜದ ಹಿತಕ್ಕಾಗಿ ತನ್ನನ್ನು ತಾನು ಗಂಧದಂತೆ ತೇಯ್ದುಕೊಳ್ಳುವವರೆಲ್ಲರೂ ತಾಯಂದಿರೇ ಎಂದರು.</p>.<p>‘ಬುದ್ಧಿವಂತರನ್ನು ಬುದ್ಧಿವಂತ ರಾಗಿಸುವುದಕ್ಕಿಂತ, ದಡ್ಡರನ್ನು ಬುದ್ಧಿವಂತರಾಗಿಸುವುದು ದೊಡ್ಡದು. ನಮ್ಮ ಸುತ್ತಮುತ್ತ ನಾಡಿಗೆ ಬೆಳಕು ನೀಡುತ್ತಿರುವ ಅನೇಕ ಚೇತನಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಮ್ಮದಾಗಬೇಕು’ ಎಂದರು.</p>.<p>ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಭಾರತದ ಪ್ರಜೆಯಾಗಿ ನಾನು ದೇಶಕ್ಕೆ ಏನು ಕೊಡಬಲ್ಲೆ ಎನ್ನುವ ಸ್ವ<br />ಅವಲೋಕನ ಮಾಡಿಕೊಳ್ಳುವ ನಾಗರಿಕ ಸಮಾಜ ಸೃಷ್ಟಿಯಾಗಲಿ ಎಂದರು.</p>.<p>‘ಮಹಿಳೆ ಮತ್ತು ಸಾಹಿತ್ಯ ಕುರಿತು ಉಪನ್ಯಾಸ ನೀಡಿದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ, ‘ಶರಣ ಸಂಸ್ಕೃತಿಯನ್ನು ಜನಸಾಮಾನ್ಯರ ಮಧ್ಯೆ ತೆಗೆದುಕೊಂಡು ಹೋಗುವ ಮತ್ತೆ ಕಲ್ಯಾಣ ಕಾರ್ಯಕ್ರಮ ಅಪೂರ್ವವಾದುದು.<br />ಸಂಸ್ಕೃತಿಯ ತೊಟ್ಟಿಲನ್ನು ತೂಗುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಮಹಿಳೆ ಕುಟ್ಟುವಾಗ, ಬೀಸುವಾಗ, ಕಳೆ ತೆಗೆಯುವಾಗ, ಮದುವೆ ಮುಂತಾದ ಸಮಾರಂಭಗಳಲ್ಲಿ ಹೇಳುವ ಜಾನಪದ ಗೀತೆಗಳೇ ಎಲ್ಲಾ ಸಾಹಿತ್ಯಕ್ಕೂ ಮೂಲ. ಜನಪದ ಪರಂಪರೆ ಎಲ್ಲಾ ಸಾಹಿತ್ಯದ ತಾಯಿಬೇರು’ ಎಂದರು.</p>.<p>ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ‘ಕಣ್ಣಿಗೆ ಕಾಣದ ದೇವರು, ಜಾತಿ ಧರ್ಮಗಳನ್ನು ಮುಂದಿಟ್ಟುಕೊಂಡು ಜನರು ಹೊಡೆದಾಡುತ್ತಿರುವುದು ಅತ್ಯಂತ ಬೇಸರದ ಸಂಗತಿ. ಸಮಾಜ ಮತ್ತು ದೇಶ ಸದೃಢವಾಗಲು ಶರಣರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ’ ಎಂದರು.</p>.<p>ಸಾರಿಗೆ ಆಯುಕ್ತ ಸಿದ್ದರಾಮಪ್ಪ ಮಾತನಾಡಿ, ‘ರಂಗಭೂಮಿ ಹುಟ್ಟಿದ್ದು ಯೂರೋಪಿನಲ್ಲಿಯಾದರೂ ಅವುಗಳನ್ನೂ ಮೀರಿಸುವಂತೆ ಸಾಣೇಹಳ್ಳಿಯಲ್ಲಿ ರಂಗಮಂದಿರಗಳು ತಲೆ ಎತ್ತಿವೆ. ರಂಗ ಚಟುವಟಿಕೆ ನಿರಂತರವಾಗಿ ನಡೆಯುತ್ತಿದೆ’ ಎಂದರು.</p>.<p>ಇದೇ ವೇಳೆ ದಾವಣಗೆರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪಯೋಜನಾ ಸಮನ್ವಯಾಧಿಕಾರಿ ಪುಷ್ಪಲತಾ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಎಸ್. ಚಂದ್ರಶೇಖರ್, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಜೆ. ಎಸ್ ಷಣ್ಮುಖಪ್ಪ ಅವರನ್ನು ಅಭಿನಂಧಿಸಲಾಯಿತು.</p>.<p>ಸಭಾ ಕಾರ್ಯಕ್ರಮದ ನಂತರ ಮಾಲತೇಶ ಬಡಿಗೇರ್ ನಿರ್ದೇಶನದ ‘ಮೇಘದೂತ ದರ್ಶನಂ’ ನಾಟಕ ಪ್ರದರ್ಶನಗೊಂಡಿತು.</p>.<p>ರಾಜಕೀಯ ಮುಖಂಡ ಎಸ್. ಲಿಂಗಮೂರ್ತಿ, ಲೇಖಕ ಡಿ.ಒ. ಸದಾಶಿವ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸದುರ್ಗ</strong>: ಜಾನಪದ ಸಾಹಿತ್ಯವನ್ನು ಕೇಳಿಸಿಕೊಂಡ ವಿದ್ಯಾವಂತರು ಅವುಗಳನ್ನು ದಾಖಲಿಸಿ ಪದವಿ ಪಡೆದುಕೊಳ್ಳುತ್ತಿದ್ದಾರೆ. ಓದು ಬರಹ ಬಲ್ಲವರು ಬರೆದಿದ್ದು ಮಾತ್ರ ಸಾಹಿತ್ಯವಲ್ಲ. ಅನುಭಾವದ ನುಡಿಗಳನ್ನು ಹಂಚಿಕೊಳ್ಳುವವರೆಲ್ಲರೂ ಸಾಹಿತಿಗಳೇ. ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.</p>.<p>ಸಾಣೇಹಳ್ಳಿಯ ಬಯಲು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ‘ರಾಷ್ಟ್ರೀಯ ನಾಟಕೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಯಾವ ಮನೆಯಲ್ಲಿ ತಾಯಿ ಸುಸಂಸ್ಕೃತವಾಗಿರುವಳೋ ಆ ಮನೆ ಅಭಿವೃದ್ಧಿ ಪಥದತ್ತ ಸಾಗುತ್ತದೆ. ಆಕೆ ಸಮಾಜದ ಜ್ಯೋತಿ, ಕಣ್ಣು ಹಾಗೂ ನಾಡಿನ ಬೆಳಕಾಗುವಳು. ಸಮಾಜದ ಹಿತಕ್ಕಾಗಿ ತನ್ನನ್ನು ತಾನು ಗಂಧದಂತೆ ತೇಯ್ದುಕೊಳ್ಳುವವರೆಲ್ಲರೂ ತಾಯಂದಿರೇ ಎಂದರು.</p>.<p>‘ಬುದ್ಧಿವಂತರನ್ನು ಬುದ್ಧಿವಂತ ರಾಗಿಸುವುದಕ್ಕಿಂತ, ದಡ್ಡರನ್ನು ಬುದ್ಧಿವಂತರಾಗಿಸುವುದು ದೊಡ್ಡದು. ನಮ್ಮ ಸುತ್ತಮುತ್ತ ನಾಡಿಗೆ ಬೆಳಕು ನೀಡುತ್ತಿರುವ ಅನೇಕ ಚೇತನಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಮ್ಮದಾಗಬೇಕು’ ಎಂದರು.</p>.<p>ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಭಾರತದ ಪ್ರಜೆಯಾಗಿ ನಾನು ದೇಶಕ್ಕೆ ಏನು ಕೊಡಬಲ್ಲೆ ಎನ್ನುವ ಸ್ವ<br />ಅವಲೋಕನ ಮಾಡಿಕೊಳ್ಳುವ ನಾಗರಿಕ ಸಮಾಜ ಸೃಷ್ಟಿಯಾಗಲಿ ಎಂದರು.</p>.<p>‘ಮಹಿಳೆ ಮತ್ತು ಸಾಹಿತ್ಯ ಕುರಿತು ಉಪನ್ಯಾಸ ನೀಡಿದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ, ‘ಶರಣ ಸಂಸ್ಕೃತಿಯನ್ನು ಜನಸಾಮಾನ್ಯರ ಮಧ್ಯೆ ತೆಗೆದುಕೊಂಡು ಹೋಗುವ ಮತ್ತೆ ಕಲ್ಯಾಣ ಕಾರ್ಯಕ್ರಮ ಅಪೂರ್ವವಾದುದು.<br />ಸಂಸ್ಕೃತಿಯ ತೊಟ್ಟಿಲನ್ನು ತೂಗುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಮಹಿಳೆ ಕುಟ್ಟುವಾಗ, ಬೀಸುವಾಗ, ಕಳೆ ತೆಗೆಯುವಾಗ, ಮದುವೆ ಮುಂತಾದ ಸಮಾರಂಭಗಳಲ್ಲಿ ಹೇಳುವ ಜಾನಪದ ಗೀತೆಗಳೇ ಎಲ್ಲಾ ಸಾಹಿತ್ಯಕ್ಕೂ ಮೂಲ. ಜನಪದ ಪರಂಪರೆ ಎಲ್ಲಾ ಸಾಹಿತ್ಯದ ತಾಯಿಬೇರು’ ಎಂದರು.</p>.<p>ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ‘ಕಣ್ಣಿಗೆ ಕಾಣದ ದೇವರು, ಜಾತಿ ಧರ್ಮಗಳನ್ನು ಮುಂದಿಟ್ಟುಕೊಂಡು ಜನರು ಹೊಡೆದಾಡುತ್ತಿರುವುದು ಅತ್ಯಂತ ಬೇಸರದ ಸಂಗತಿ. ಸಮಾಜ ಮತ್ತು ದೇಶ ಸದೃಢವಾಗಲು ಶರಣರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ’ ಎಂದರು.</p>.<p>ಸಾರಿಗೆ ಆಯುಕ್ತ ಸಿದ್ದರಾಮಪ್ಪ ಮಾತನಾಡಿ, ‘ರಂಗಭೂಮಿ ಹುಟ್ಟಿದ್ದು ಯೂರೋಪಿನಲ್ಲಿಯಾದರೂ ಅವುಗಳನ್ನೂ ಮೀರಿಸುವಂತೆ ಸಾಣೇಹಳ್ಳಿಯಲ್ಲಿ ರಂಗಮಂದಿರಗಳು ತಲೆ ಎತ್ತಿವೆ. ರಂಗ ಚಟುವಟಿಕೆ ನಿರಂತರವಾಗಿ ನಡೆಯುತ್ತಿದೆ’ ಎಂದರು.</p>.<p>ಇದೇ ವೇಳೆ ದಾವಣಗೆರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪಯೋಜನಾ ಸಮನ್ವಯಾಧಿಕಾರಿ ಪುಷ್ಪಲತಾ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಎಸ್. ಚಂದ್ರಶೇಖರ್, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಜೆ. ಎಸ್ ಷಣ್ಮುಖಪ್ಪ ಅವರನ್ನು ಅಭಿನಂಧಿಸಲಾಯಿತು.</p>.<p>ಸಭಾ ಕಾರ್ಯಕ್ರಮದ ನಂತರ ಮಾಲತೇಶ ಬಡಿಗೇರ್ ನಿರ್ದೇಶನದ ‘ಮೇಘದೂತ ದರ್ಶನಂ’ ನಾಟಕ ಪ್ರದರ್ಶನಗೊಂಡಿತು.</p>.<p>ರಾಜಕೀಯ ಮುಖಂಡ ಎಸ್. ಲಿಂಗಮೂರ್ತಿ, ಲೇಖಕ ಡಿ.ಒ. ಸದಾಶಿವ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>