<p><strong>ಹೊಸದುರ್ಗ:</strong> ತಾಲ್ಲೂಕಿನಾದ್ಯಂತ ಈರುಳ್ಳಿ ಬೆಳೆಗೆ ನೇರಳೆ ಮಚ್ಚೆರೋಗ (ಕೊಳೆರೋಗ) ಕಂಡುಬಂದಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಶುಕ್ರವಾರ ಬಾಗೂರಿನ ಜಮೀನುಗಳಿಗೆ ಭೇಟಿ ನೀಡಿ, ರೈತರಿಗೆ ಸಲಹೆ ಸೂಚನೆ ನೀಡಿದರು.</p>.<p>ಹತ್ತು ದಿನಗಳಿಂದ ನಿರಂತರ ಜಿಟಿಜಿಟಿ ಮಳೆಯಾಗಿದೆ. ಈ ಭಾಗದಲ್ಲಿ ಕಪ್ಪು ಮಣ್ಣು ಅಧಿಕವಾಗಿದೆ. ಈ ಮಣ್ಣಿಗೆ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ. ಹಾಗಾಗಿ ತೇವಾಂಶದಿಂದ ಈ ರೋಗ ಅಧಿಕವಾಗಿದೆ. ಬಿಸಿಲು ಬಂದರೆ ನಿವಾರಣೆಯಾಗುತ್ತದೆ. ಅಲ್ಲಿಯವರೆಗೂ ಔಷಧ ಸಿಂಪಡಣೆ ಮಾಡಬೇಕು ಎಂದು ತೋಟಗಾರಿಕೆ ಉಪನಿರ್ದೇಶಕ ಶರಣಬಸಪ್ಪ ಭೋಗಿ ಹೇಳಿದರು.</p>.<p>‘ನೇರಳೆಮಚ್ಚೆ ರೋಗದ ಹತೋಟಿಗಾಗಿ ಕಾರ್ಬೆಂಡಾಝಿನ್, ಮ್ಯಾಂಕೋಜೆಬ್ ಅಥವಾ ಪ್ರೋಪಿಕೋನಜೋಲ್ 25 ಇ.ಸಿ. 1 ಮಿ.ಲೀ. ಅಥವಾ ಹೆಕ್ಸಕೋನಜೋಲ್ 5 ಇ.ಸಿ. 1 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಜೊತೆಗೆ ಅಂಟು ದ್ರಾವಣ 0.25 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಬೇಕು. ಬಿಸಿಲು ಬರುವವರಿಗೂ 10 ದಿನಗಳಿಗೊಮ್ಮೆಯಾದರೂ ಈ ಶೀಲಿಂದ್ರ ನಾಶಕಗಳ ಸಿಂಪಡಣೆ ಮಾಡಬೇಕು’ ಎಂದು ಕೀಟ ಮತ್ತು ರೋಗ ತಜ್ಞ ಎಸ್. ಓಂಕಾರಪ್ಪ ತಿಳಿಸಿದರು.</p>.<p>ರೈತರು ಬೆಳೆವಿಮೆ ಅವಧಿ ವಿಸ್ತರಿಸಬೇಕು. ಇಲಾಖೆಯಲ್ಲಿ ಔಷಧಗಳು ರಿಯಾಯಿತಿ ದರದಲ್ಲಿ ದೊರೆಯುವಂತಾದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು. </p>.<p>ತೋಟಗಾರಿಕೆ ತಜ್ಞ ಬಿ.ಎಸ್. ಮಹಾಂತೇಶ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ವೆಂಕಟೇಶ್ ಮೂರ್ತಿ, ಸಹಾಯಕ ನಿರ್ದೇಶಕರಾದ ಶೋಭಾ, ಹೋಬಳಿ ಅಧಿಕಾರಿಗಳಾದ ಪುಟ್ಟಣ್ಣ ಸಿ., ನರಸಿಂಹಮೂರ್ತಿ ಎಚ್., ನಿರಂಜನ್, ಬಿ. ರಂಗನಾಥ್ ಇದ್ದರು.</p>.<p>‘ತೇವಾಂಶ ಅಧಿಕ ಈರುಳ್ಳಿ ಬೆಳೆಗೆ ಕೊಳೆರೋಗ’ ಶೀರ್ಷಿಕೆಯಡಿ ಜುಲೈ 30ರಂದು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ವರದಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿದ್ದು, ‘ಪ್ರಜಾವಾಣಿ’ ಕಾರ್ಯ ಶ್ಲಾಘನೀಯ ಎಂದು ರೈತರು ಮೆಚ್ಚುಗೆ ವ್ಯಕ್ತಪಡಿಸಿದರು.<br><br></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸದುರ್ಗ:</strong> ತಾಲ್ಲೂಕಿನಾದ್ಯಂತ ಈರುಳ್ಳಿ ಬೆಳೆಗೆ ನೇರಳೆ ಮಚ್ಚೆರೋಗ (ಕೊಳೆರೋಗ) ಕಂಡುಬಂದಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಶುಕ್ರವಾರ ಬಾಗೂರಿನ ಜಮೀನುಗಳಿಗೆ ಭೇಟಿ ನೀಡಿ, ರೈತರಿಗೆ ಸಲಹೆ ಸೂಚನೆ ನೀಡಿದರು.</p>.<p>ಹತ್ತು ದಿನಗಳಿಂದ ನಿರಂತರ ಜಿಟಿಜಿಟಿ ಮಳೆಯಾಗಿದೆ. ಈ ಭಾಗದಲ್ಲಿ ಕಪ್ಪು ಮಣ್ಣು ಅಧಿಕವಾಗಿದೆ. ಈ ಮಣ್ಣಿಗೆ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ. ಹಾಗಾಗಿ ತೇವಾಂಶದಿಂದ ಈ ರೋಗ ಅಧಿಕವಾಗಿದೆ. ಬಿಸಿಲು ಬಂದರೆ ನಿವಾರಣೆಯಾಗುತ್ತದೆ. ಅಲ್ಲಿಯವರೆಗೂ ಔಷಧ ಸಿಂಪಡಣೆ ಮಾಡಬೇಕು ಎಂದು ತೋಟಗಾರಿಕೆ ಉಪನಿರ್ದೇಶಕ ಶರಣಬಸಪ್ಪ ಭೋಗಿ ಹೇಳಿದರು.</p>.<p>‘ನೇರಳೆಮಚ್ಚೆ ರೋಗದ ಹತೋಟಿಗಾಗಿ ಕಾರ್ಬೆಂಡಾಝಿನ್, ಮ್ಯಾಂಕೋಜೆಬ್ ಅಥವಾ ಪ್ರೋಪಿಕೋನಜೋಲ್ 25 ಇ.ಸಿ. 1 ಮಿ.ಲೀ. ಅಥವಾ ಹೆಕ್ಸಕೋನಜೋಲ್ 5 ಇ.ಸಿ. 1 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಜೊತೆಗೆ ಅಂಟು ದ್ರಾವಣ 0.25 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಬೇಕು. ಬಿಸಿಲು ಬರುವವರಿಗೂ 10 ದಿನಗಳಿಗೊಮ್ಮೆಯಾದರೂ ಈ ಶೀಲಿಂದ್ರ ನಾಶಕಗಳ ಸಿಂಪಡಣೆ ಮಾಡಬೇಕು’ ಎಂದು ಕೀಟ ಮತ್ತು ರೋಗ ತಜ್ಞ ಎಸ್. ಓಂಕಾರಪ್ಪ ತಿಳಿಸಿದರು.</p>.<p>ರೈತರು ಬೆಳೆವಿಮೆ ಅವಧಿ ವಿಸ್ತರಿಸಬೇಕು. ಇಲಾಖೆಯಲ್ಲಿ ಔಷಧಗಳು ರಿಯಾಯಿತಿ ದರದಲ್ಲಿ ದೊರೆಯುವಂತಾದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು. </p>.<p>ತೋಟಗಾರಿಕೆ ತಜ್ಞ ಬಿ.ಎಸ್. ಮಹಾಂತೇಶ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ವೆಂಕಟೇಶ್ ಮೂರ್ತಿ, ಸಹಾಯಕ ನಿರ್ದೇಶಕರಾದ ಶೋಭಾ, ಹೋಬಳಿ ಅಧಿಕಾರಿಗಳಾದ ಪುಟ್ಟಣ್ಣ ಸಿ., ನರಸಿಂಹಮೂರ್ತಿ ಎಚ್., ನಿರಂಜನ್, ಬಿ. ರಂಗನಾಥ್ ಇದ್ದರು.</p>.<p>‘ತೇವಾಂಶ ಅಧಿಕ ಈರುಳ್ಳಿ ಬೆಳೆಗೆ ಕೊಳೆರೋಗ’ ಶೀರ್ಷಿಕೆಯಡಿ ಜುಲೈ 30ರಂದು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ವರದಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿದ್ದು, ‘ಪ್ರಜಾವಾಣಿ’ ಕಾರ್ಯ ಶ್ಲಾಘನೀಯ ಎಂದು ರೈತರು ಮೆಚ್ಚುಗೆ ವ್ಯಕ್ತಪಡಿಸಿದರು.<br><br></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>