ಕನ್ನಡಪರ ಸಂಘಟನೆಗಳು ಕರೆ ನೀಡಿದ ಬಂದ್ಗೆ ಕೋಟೆ ನಾಡಿನ ಜನರು ಸ್ಪಂದಿಸಲಿಲ್ಲ. ಜನಜೀವನ ಎಂದಿನಂತೆ ಸಹಜವಾಗಿತ್ತು. ವಾಹನ ಸಂಚಾರ ನಿರಾತಂಕವಾಗಿ ಸಾಗಿತ್ತು. ಅಂಗಡಿ, ಶಾಲೆ–ಕಾಲೇಜು, ಸರ್ಕಾರಿ ಕಚೇರಿಗಳು ಬಾಗಿಲು ತೆರೆದಿದ್ದವು. ಯಾವುದೇ ಸಂಘಟನೆಯ ಕಾರ್ಯಕರ್ತರು ಬೀದಿಗೆ ಇಳಿದು ಬೆಂಬಲ ಕೋರಲಿಲ್ಲ. ಹೀಗಾಗಿ, ಬಂದ್ ಬಿಸಿ ತಟ್ಟಲಿಲ್ಲ. ಆದರೆ, ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.