<p><strong>ಮೊಳಕಾಲ್ಮುರು:</strong>ತಾಲ್ಲೂಕಿನ ರಾಂಪುರದ 12 ವರ್ಷದ ಬಾಲಕಿಗೆ ಕೊರೊನಾ ಸೋಂಕು ದೃಢಪಟ್ಟಿದೆ.</p>.<p>ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರು ಮಾಹಿತಿ ಪಡೆದಿದ್ದರು. ಬಾಲಕಿಯ ಗಂಟಲುದ್ರವವನ್ನು ಪರೀಕ್ಷೆಗೆಕಳಿಸಿಕೊಡಲಾಗಿತ್ತು. ಬುಧವಾರ ಸೋಂಕು ಇರುವುದು ದೃಢಪಟ್ಟಿದೆ.</p>.<p>ಜುಲೈ 23 ರಂದು ರಾಂಪುರದಲ್ಲಿ ಸೋಂಕಿತ ಬಾಲಕಿಯ ಸಹೋದರಿ ಮದುವೆ ನಡೆದಿತ್ತು. ವರ ಹೊಸಪೇಟೆ ಮೂಲದವರಾಗಿದ್ದು, ಜತೆಯಲ್ಲಿ ಬಂದಿದ್ದಇಬ್ಬರಿಗೆ ಕೊರೊನಾ ಸೋಂಕು ಇರುವುದು ಮದುವೆ ನಡೆದ ನಂತರ ದೃಢಪಟ್ಟಿತ್ತು. ಅವರನ್ನು ಬಳ್ಳಾರಿಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇದು ಬಾಲಕಿಯ ಸೋಂಕಿನಸಂಪರ್ಕ ಮೂಲವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.</p>.<p>ಬುಧವಾರ ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಸಭೆ ನಡೆಸಿ ಗ್ರಾಮದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆನಡೆಸಲಾಯಿತು. ನಂತರ ಸೋಂಕು ಕಾಣಿಸಿಕೊಂಡಿರುವ ಬಾಲಕಿ ಮನೆ ಸುತ್ತಲಿನ ಪ್ರದೇಶವನ್ನು ಸೀಲ್ಡೌನ್ ಮಾಡಲಾಯಿತು.</p>.<p>ಕೊರೊನಾ ತಾಲ್ಲೂಕು ನೋಡಲ್ ಅಧಿಕಾರಿ ಡಿ. ಚಿದಾನಂದಪ್ಪ, ಡಾ. ಮಧುಕುಮಾರ್, ಡಾ. ರಮೇಶ್, ಡಾ. ಚನ್ನಬಸವರಾಜ್, ಎಸ್ಐಗುಡ್ಡಪ್ಪ, ಕಾರ್ಯದರ್ಶಿ ಗುಂಡಪ್ಪ, ಆರ್.ಆರ್. ತಂಡದ ಮುಖ್ಯಸ್ಥ ಶ್ರೀನಿವಾಸ್, ಶಿರಸ್ತೇದಾರ್ ಗೋಪಾಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು:</strong>ತಾಲ್ಲೂಕಿನ ರಾಂಪುರದ 12 ವರ್ಷದ ಬಾಲಕಿಗೆ ಕೊರೊನಾ ಸೋಂಕು ದೃಢಪಟ್ಟಿದೆ.</p>.<p>ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರು ಮಾಹಿತಿ ಪಡೆದಿದ್ದರು. ಬಾಲಕಿಯ ಗಂಟಲುದ್ರವವನ್ನು ಪರೀಕ್ಷೆಗೆಕಳಿಸಿಕೊಡಲಾಗಿತ್ತು. ಬುಧವಾರ ಸೋಂಕು ಇರುವುದು ದೃಢಪಟ್ಟಿದೆ.</p>.<p>ಜುಲೈ 23 ರಂದು ರಾಂಪುರದಲ್ಲಿ ಸೋಂಕಿತ ಬಾಲಕಿಯ ಸಹೋದರಿ ಮದುವೆ ನಡೆದಿತ್ತು. ವರ ಹೊಸಪೇಟೆ ಮೂಲದವರಾಗಿದ್ದು, ಜತೆಯಲ್ಲಿ ಬಂದಿದ್ದಇಬ್ಬರಿಗೆ ಕೊರೊನಾ ಸೋಂಕು ಇರುವುದು ಮದುವೆ ನಡೆದ ನಂತರ ದೃಢಪಟ್ಟಿತ್ತು. ಅವರನ್ನು ಬಳ್ಳಾರಿಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇದು ಬಾಲಕಿಯ ಸೋಂಕಿನಸಂಪರ್ಕ ಮೂಲವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.</p>.<p>ಬುಧವಾರ ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಸಭೆ ನಡೆಸಿ ಗ್ರಾಮದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆನಡೆಸಲಾಯಿತು. ನಂತರ ಸೋಂಕು ಕಾಣಿಸಿಕೊಂಡಿರುವ ಬಾಲಕಿ ಮನೆ ಸುತ್ತಲಿನ ಪ್ರದೇಶವನ್ನು ಸೀಲ್ಡೌನ್ ಮಾಡಲಾಯಿತು.</p>.<p>ಕೊರೊನಾ ತಾಲ್ಲೂಕು ನೋಡಲ್ ಅಧಿಕಾರಿ ಡಿ. ಚಿದಾನಂದಪ್ಪ, ಡಾ. ಮಧುಕುಮಾರ್, ಡಾ. ರಮೇಶ್, ಡಾ. ಚನ್ನಬಸವರಾಜ್, ಎಸ್ಐಗುಡ್ಡಪ್ಪ, ಕಾರ್ಯದರ್ಶಿ ಗುಂಡಪ್ಪ, ಆರ್.ಆರ್. ತಂಡದ ಮುಖ್ಯಸ್ಥ ಶ್ರೀನಿವಾಸ್, ಶಿರಸ್ತೇದಾರ್ ಗೋಪಾಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>