<p><strong>ಹೊಳಲ್ಕೆರೆ</strong> (ಚಿತ್ರದುರ್ಗ): ತಾಲ್ಲೂಕಿನ ತಿರುಮಲಾಪುರ ಶಾಲೆಯ ಶಿಕ್ಷಕ ಎನ್.ಸಿ.ಬಸವಕುಮಾರ್ ಐದೇ ದಿನದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಮುಗಿಸಿದ್ದು, ಇದನ್ನು ಪೂರ್ಣಗೊಳಿಸಿದ ತಾಲ್ಲೂಕಿನ ಮೊದಲ ಸಮೀಕ್ಷಕ ಎನಿಸಿದ್ದಾರೆ.</p><p>ತಹಶೀಲ್ದಾರ್ ವಿಜಯ ಕುಮಾರ್ ಅವರು ಇವರನ್ನು ಭಾನುವಾರ ಸನ್ಮಾನಿಸಿದರು.</p><p>‘ಬದ್ಧತೆ ಇದ್ದರೆ ಎಂತಹ ಕೆಲಸವನ್ನಾದರೂ ಸಮರ್ಥವಾಗಿ ನಿಭಾಯಿಸಬಹುದು. ಬಸವ ಕುಮಾರ್ ಕರ್ತವ್ಯ ಪ್ರಜ್ಞೆ ಮಾದರಿಯಾಗಲಿ’ ಎಂದು ವಿಜಯಕುಮಾರ್ ಹೇಳಿದರು.</p><p>‘ಮೊದಲ ಎರಡು ದಿನ ಆ್ಯಪ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ನಂತರದ 5 ದಿನಗಳಲ್ಲಿ ನನಗೆ ನಿಗದಿ ಮಾಡಿದ್ದ 83 ಕುಟುಂಬಗಳ ಸಮೀಕ್ಷಾ ಕಾರ್ಯ ಮುಗಿಸಿದ್ದೇನೆ. ಬೆಳಿಗ್ಗೆ 8ರಿಂದಲೇ ಆರಂಭಿಸಿ ರಾತ್ರಿಯವರೆಗೆ ಕೆಲಸ ಮಾಡಿದ್ದರಿಂದ ಇದು ಸಾಧ್ಯವಾಯಿತು’ ಎಂದು ಬಸವಕುಮಾರ್ ತಿಳಿಸಿದರು.</p><p>ಬಿಸಿಎಂ ಕಲ್ಯಾಣಾಧಿಕಾರಿ ಪ್ರದೀಪ್ ಕುಮಾರ್, ಬಿಆರ್ಸಿ ಸುರೇಂದ್ರ ನಾಥ್, ಪದವೀಧರ ಶಿಕ್ಷಕರ ಸ೦ಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಜಯಪ್ಪ, ಚಿತ್ರಹಳ್ಳಿ ದೇವರಾಜು, ಸಮೀಕ್ಷಾ ಮೇಲ್ವಿಚಾರಕಿ ರೂಪಾ, ಪುನಿತ್ ಕುಮಾರ್, ರಾಜಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳಲ್ಕೆರೆ</strong> (ಚಿತ್ರದುರ್ಗ): ತಾಲ್ಲೂಕಿನ ತಿರುಮಲಾಪುರ ಶಾಲೆಯ ಶಿಕ್ಷಕ ಎನ್.ಸಿ.ಬಸವಕುಮಾರ್ ಐದೇ ದಿನದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಮುಗಿಸಿದ್ದು, ಇದನ್ನು ಪೂರ್ಣಗೊಳಿಸಿದ ತಾಲ್ಲೂಕಿನ ಮೊದಲ ಸಮೀಕ್ಷಕ ಎನಿಸಿದ್ದಾರೆ.</p><p>ತಹಶೀಲ್ದಾರ್ ವಿಜಯ ಕುಮಾರ್ ಅವರು ಇವರನ್ನು ಭಾನುವಾರ ಸನ್ಮಾನಿಸಿದರು.</p><p>‘ಬದ್ಧತೆ ಇದ್ದರೆ ಎಂತಹ ಕೆಲಸವನ್ನಾದರೂ ಸಮರ್ಥವಾಗಿ ನಿಭಾಯಿಸಬಹುದು. ಬಸವ ಕುಮಾರ್ ಕರ್ತವ್ಯ ಪ್ರಜ್ಞೆ ಮಾದರಿಯಾಗಲಿ’ ಎಂದು ವಿಜಯಕುಮಾರ್ ಹೇಳಿದರು.</p><p>‘ಮೊದಲ ಎರಡು ದಿನ ಆ್ಯಪ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ನಂತರದ 5 ದಿನಗಳಲ್ಲಿ ನನಗೆ ನಿಗದಿ ಮಾಡಿದ್ದ 83 ಕುಟುಂಬಗಳ ಸಮೀಕ್ಷಾ ಕಾರ್ಯ ಮುಗಿಸಿದ್ದೇನೆ. ಬೆಳಿಗ್ಗೆ 8ರಿಂದಲೇ ಆರಂಭಿಸಿ ರಾತ್ರಿಯವರೆಗೆ ಕೆಲಸ ಮಾಡಿದ್ದರಿಂದ ಇದು ಸಾಧ್ಯವಾಯಿತು’ ಎಂದು ಬಸವಕುಮಾರ್ ತಿಳಿಸಿದರು.</p><p>ಬಿಸಿಎಂ ಕಲ್ಯಾಣಾಧಿಕಾರಿ ಪ್ರದೀಪ್ ಕುಮಾರ್, ಬಿಆರ್ಸಿ ಸುರೇಂದ್ರ ನಾಥ್, ಪದವೀಧರ ಶಿಕ್ಷಕರ ಸ೦ಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಜಯಪ್ಪ, ಚಿತ್ರಹಳ್ಳಿ ದೇವರಾಜು, ಸಮೀಕ್ಷಾ ಮೇಲ್ವಿಚಾರಕಿ ರೂಪಾ, ಪುನಿತ್ ಕುಮಾರ್, ರಾಜಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>