<p><strong>ಚಿತ್ರದುರ್ಗ: </strong>‘ಅಜ್ಞಾನಿಯನ್ನೂ ಸುಜ್ಞಾನಿ ಆಗಿಸಬಲ್ಲ ಶಕ್ತಿ ಶಿಕ್ಷಕರಲ್ಲಿದೆ. ಆದ್ದರಿಂದ ಜ್ಞಾನದಾಸೋಹ ಉಣಬಡಿಸಿದ ಶಿಕ್ಷಕರನ್ನು ವಿದ್ಯಾರ್ಥಿ ಸಮೂಹ ಎಂದಿಗೂ ಮರೆಯಬಾರದು’ ಎಂದು ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.</p>.<p>ಮುರುಘಾಮಠದಲ್ಲಿ ಶ್ರೀಮಠ, ಎಸ್ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಷನ್ನಿಂದ ಶನಿವಾರ ಆಯೋಜಿಸಿದ್ದ 30ನೇ ವರ್ಷದ 9ನೇ ತಿಂಗಳ ‘ಸಾಮೂಹಿಕ ಕಲ್ಯಾಣ ಮಹೋತ್ಸವ’ದಲ್ಲಿ ಅವರು ಮಾತನಾಡಿದರು.</p>.<p>‘ಮಾನವರಲ್ಲಿ ಅಜ್ಞಾನ ಬೆಟ್ಟದಷ್ಟಿದ್ದು, ದುಷ್ಟತನ ಬೆಳೆದು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಬಿಡುವುದಿಲ್ಲ. ಜತೆಗೆ ಮೂರ್ಖರನ್ನಾಗಿಸುತ್ತದೆ. ಸುಂದರ ಬದುಕು ಕಟ್ಟಿಕೊಳ್ಳುವ ತಿರುವುಗಳನ್ನೇ ಬದಲಿಸುತ್ತದೆ. ಆದ್ದರಿಂದ ಅಕ್ಷರ ಬೋಧಿಸುವ ಗುರುಗಳು ಸುಜ್ಞಾನಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು’ ಎಂದರು.</p>.<p>‘ಸುಜ್ಞಾನ ಸುಮ್ಮನೆ ಬರುವಂಥದಲ್ಲ. ಅದಕ್ಕೆ ಸಾಧನೆ, ಸತತ ಪ್ರಯತ್ನ, ಹಂಬಲ ಇರಬೇಕು. ಸುಜ್ಞಾನ ಉಳ್ಳವರಿಂದ ಸಮಾಜದಲ್ಲಿ ಒಳ್ಳೆಯ ಕೆಲಸಗಳಾಗುತ್ತವೆ. ಉತ್ತಮ ಸಮಾಜ ನಿರ್ಮಿಸುವಲ್ಲಿ ಆಧ್ಯಾತ್ಮಿಕ, ಅಧ್ಯಾತ್ಮಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಗುರುಗಳ ಜವಾಬ್ದಾರಿಯೂ ಹೆಚ್ಚಿದೆ’ ಎಂದು ಹೇಳಿದರು.</p>.<p>‘ನಮ್ಮ ಹಿರಿಯ ಗುರುಗಳಾದ ಮಲ್ಲಿಕಾರ್ಜುನ ಸ್ವಾಮೀಜಿ ಅವರು ನೂರಾರು ವಿದ್ಯಾಕೇಂದ್ರ ತೆರೆದು ಜ್ಞಾನದಾಸೋಹ ನೀಡಿದರು. ಅವನ್ನು ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಆರೋಗ್ಯಪೂರ್ಣ ಸಮಾಜ ಸೃಷ್ಟಿಯಾಗಬೇಕಿದೆ. ಅದಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ’ ಎಂದರು.</p>.<p>ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಬದರಿನಾಥ್, ‘ಜಿಲ್ಲೆಯಲ್ಲಿ ಶೈಕ್ಷಣಿಕ ಕ್ಷೇತ್ರ ಬೆಳೆಯುವಲ್ಲಿ ಮುರುಘಾಮಠದ ಪಾತ್ರವೂ ಇದೆ. ಚಿತ್ರದುರ್ಗ ಸುಂದರ ನಗರವಾಗಬೇಕು ಎಂಬುದು ನನ್ನ ಕನಸು. ಶ್ರೀಗಳ, ಸ್ಥಳೀಯ ಶಾಸಕರ ಸಹಕಾರ ಪಡೆದು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇನೆ’ ಎಂದು ಭರವಸೆ ನೀಡಿದರು.</p>.<p>ಇದೇ ವೇಳೆ ಏಳು ಜೋಡಿ ನವ ವಧುವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶರಣಾನಂದ ದೇವರು ರಚಿಸಿರುವ ಶಿವಹಂಸಾರೂಢ ಪ್ರಭು ವಚನ ಶತಕ ಪುಸ್ತಕ ಲೋಕಾರ್ಪಣೆಯಾಯಿತು.</p>.<p>ಎಸ್ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ಷಣ್ಮುಖಪ್ಪ, ಮೈಸೂರಿನ ಡಿಎಸ್ಎಸ್ ಮುಖಂಡ ಸಿ. ರಾಮಕೃಷ್ಣ, ಪೈಲ್ವಾನ್ ತಿಪ್ಪೇಸ್ವಾಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ: </strong>‘ಅಜ್ಞಾನಿಯನ್ನೂ ಸುಜ್ಞಾನಿ ಆಗಿಸಬಲ್ಲ ಶಕ್ತಿ ಶಿಕ್ಷಕರಲ್ಲಿದೆ. ಆದ್ದರಿಂದ ಜ್ಞಾನದಾಸೋಹ ಉಣಬಡಿಸಿದ ಶಿಕ್ಷಕರನ್ನು ವಿದ್ಯಾರ್ಥಿ ಸಮೂಹ ಎಂದಿಗೂ ಮರೆಯಬಾರದು’ ಎಂದು ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.</p>.<p>ಮುರುಘಾಮಠದಲ್ಲಿ ಶ್ರೀಮಠ, ಎಸ್ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಷನ್ನಿಂದ ಶನಿವಾರ ಆಯೋಜಿಸಿದ್ದ 30ನೇ ವರ್ಷದ 9ನೇ ತಿಂಗಳ ‘ಸಾಮೂಹಿಕ ಕಲ್ಯಾಣ ಮಹೋತ್ಸವ’ದಲ್ಲಿ ಅವರು ಮಾತನಾಡಿದರು.</p>.<p>‘ಮಾನವರಲ್ಲಿ ಅಜ್ಞಾನ ಬೆಟ್ಟದಷ್ಟಿದ್ದು, ದುಷ್ಟತನ ಬೆಳೆದು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಬಿಡುವುದಿಲ್ಲ. ಜತೆಗೆ ಮೂರ್ಖರನ್ನಾಗಿಸುತ್ತದೆ. ಸುಂದರ ಬದುಕು ಕಟ್ಟಿಕೊಳ್ಳುವ ತಿರುವುಗಳನ್ನೇ ಬದಲಿಸುತ್ತದೆ. ಆದ್ದರಿಂದ ಅಕ್ಷರ ಬೋಧಿಸುವ ಗುರುಗಳು ಸುಜ್ಞಾನಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು’ ಎಂದರು.</p>.<p>‘ಸುಜ್ಞಾನ ಸುಮ್ಮನೆ ಬರುವಂಥದಲ್ಲ. ಅದಕ್ಕೆ ಸಾಧನೆ, ಸತತ ಪ್ರಯತ್ನ, ಹಂಬಲ ಇರಬೇಕು. ಸುಜ್ಞಾನ ಉಳ್ಳವರಿಂದ ಸಮಾಜದಲ್ಲಿ ಒಳ್ಳೆಯ ಕೆಲಸಗಳಾಗುತ್ತವೆ. ಉತ್ತಮ ಸಮಾಜ ನಿರ್ಮಿಸುವಲ್ಲಿ ಆಧ್ಯಾತ್ಮಿಕ, ಅಧ್ಯಾತ್ಮಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಗುರುಗಳ ಜವಾಬ್ದಾರಿಯೂ ಹೆಚ್ಚಿದೆ’ ಎಂದು ಹೇಳಿದರು.</p>.<p>‘ನಮ್ಮ ಹಿರಿಯ ಗುರುಗಳಾದ ಮಲ್ಲಿಕಾರ್ಜುನ ಸ್ವಾಮೀಜಿ ಅವರು ನೂರಾರು ವಿದ್ಯಾಕೇಂದ್ರ ತೆರೆದು ಜ್ಞಾನದಾಸೋಹ ನೀಡಿದರು. ಅವನ್ನು ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಆರೋಗ್ಯಪೂರ್ಣ ಸಮಾಜ ಸೃಷ್ಟಿಯಾಗಬೇಕಿದೆ. ಅದಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ’ ಎಂದರು.</p>.<p>ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಬದರಿನಾಥ್, ‘ಜಿಲ್ಲೆಯಲ್ಲಿ ಶೈಕ್ಷಣಿಕ ಕ್ಷೇತ್ರ ಬೆಳೆಯುವಲ್ಲಿ ಮುರುಘಾಮಠದ ಪಾತ್ರವೂ ಇದೆ. ಚಿತ್ರದುರ್ಗ ಸುಂದರ ನಗರವಾಗಬೇಕು ಎಂಬುದು ನನ್ನ ಕನಸು. ಶ್ರೀಗಳ, ಸ್ಥಳೀಯ ಶಾಸಕರ ಸಹಕಾರ ಪಡೆದು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇನೆ’ ಎಂದು ಭರವಸೆ ನೀಡಿದರು.</p>.<p>ಇದೇ ವೇಳೆ ಏಳು ಜೋಡಿ ನವ ವಧುವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶರಣಾನಂದ ದೇವರು ರಚಿಸಿರುವ ಶಿವಹಂಸಾರೂಢ ಪ್ರಭು ವಚನ ಶತಕ ಪುಸ್ತಕ ಲೋಕಾರ್ಪಣೆಯಾಯಿತು.</p>.<p>ಎಸ್ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ಷಣ್ಮುಖಪ್ಪ, ಮೈಸೂರಿನ ಡಿಎಸ್ಎಸ್ ಮುಖಂಡ ಸಿ. ರಾಮಕೃಷ್ಣ, ಪೈಲ್ವಾನ್ ತಿಪ್ಪೇಸ್ವಾಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>