<p><strong>ಹಿರಿಯೂರು:</strong>1986ರಲ್ಲಿ ಹಿರಿಯೂರು ಠಾಣೆಯಲ್ಲಿ ಎಸ್ಐ ಹುದ್ದೆಯಲ್ಲಿದ್ದ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು 1989ರಲ್ಲಿ ಓಡಿಸುತ್ತಿದ್ದ ಬುಲೆಟ್ ಬೈಕನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದರು.</p>.<p>ಶನಿವಾರ ತಾಲ್ಲೂಕಿನ ಆದಿವಾಲ ಫಾರಂನಲ್ಲಿ ಗಾಣದಿಂದ ಎಣ್ಣೆ ತೆಗೆಯುವ ವಿಧಾನವನ್ನು ವೀಕ್ಷಿಸಲು ಬಂದಿದ್ದಾಗ ತಮ್ಮ ಹಳೆಯ ಬೈಕ್ ನೋಡಿ ಸಂತಸಗೊಂಡರು.</p>.<p>ಪಾಟೀಲರಿಂದ ₹ 17,100ಕ್ಕೆ ಆದಿವಾಲ ಫಾರಂನ ಆರ್.ಎ. ರಮೇಶ್ ಎಂಬುವವರು ಬೈಕ್ ಖರೀದಿಸಿದ್ದರು. ಮೂಲ ಮಾಲೀಕರಿಗೆ ಬೈಕನ್ನು ತೋರಿಸಬೇಕೆಂದು ರಮೇಶ್ ಹಲವು ಬಾರಿ ಪ್ರಯತ್ನ ನಡೆಸಿದ್ದರು. ಬೈಕ್ ನೋಡಿದ ಬಳಿಕ ಕೃಷಿ ಸಚಿವರು ಮೂರು ದಶಕಗಳ ಹಿಂದಿನ ನೆನಪಿಗೆ ಜಾರಿದರು.</p>.<p>‘ಹಿರಿಯೂರಿನಲ್ಲಿ ಎಸ್ಐ, ಸಿಪಿಐ ಆಗಿದ್ದಾಗ ತೇರುಮಲ್ಲೇಶ್ವರಸ್ವಾಮಿ ನೂತನ ರಥ ನಿರ್ಮಾಣಕ್ಕೆಂದು ಟಿಪ್ಪುಸುಲ್ತಾನ್ ಮತ್ತು ಕುರುಕ್ಷೇತ್ರ ನಾಟಕಗಳನ್ನು ಆಡಿದ್ದೆವು. ನಾಟಕದಿಂದ ಸಿನಿಮಾ ಕ್ಷೇತ್ರದ ಪರಿಚಯವಾಯಿತು. ಸಿನಿಮಾದಿಂದ ರಾಜಕೀಯದತ್ತ ಹೊರಳಿದೆ. ದೇವರ ಆಶೀರ್ವಾದ ಇತ್ತು. ಸಚಿವನೂ ಆಗಿದ್ದೇನೆ. ನನ್ನಿಂದ ಲಾಠಿ ಏಟು ತಿಂದವರು,<br />ಏಟು ತಿಂದು ಬದಲಾದವರು ನನ್ನನ್ನು ಮರೆತಿಲ್ಲ. ನನ್ನಿಂದ ಬೈಕ್ಖರೀದಿಸಿದ ರಮೇಶ್ 32 ವರ್ಷ ಅದನ್ನು ನಿರ್ವಹಣೆ ಮಾಡಿರುವುದು ಅಚ್ಚರಿ ತಂದಿದೆ. ಆತನ ಬಗ್ಗೆ ಹೆಮ್ಮೆ ಮೂಡಿದೆ’ ಎಂದು ಬಿ.ಸಿ. ಪಾಟೀಲ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರಿಯೂರು:</strong>1986ರಲ್ಲಿ ಹಿರಿಯೂರು ಠಾಣೆಯಲ್ಲಿ ಎಸ್ಐ ಹುದ್ದೆಯಲ್ಲಿದ್ದ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು 1989ರಲ್ಲಿ ಓಡಿಸುತ್ತಿದ್ದ ಬುಲೆಟ್ ಬೈಕನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದರು.</p>.<p>ಶನಿವಾರ ತಾಲ್ಲೂಕಿನ ಆದಿವಾಲ ಫಾರಂನಲ್ಲಿ ಗಾಣದಿಂದ ಎಣ್ಣೆ ತೆಗೆಯುವ ವಿಧಾನವನ್ನು ವೀಕ್ಷಿಸಲು ಬಂದಿದ್ದಾಗ ತಮ್ಮ ಹಳೆಯ ಬೈಕ್ ನೋಡಿ ಸಂತಸಗೊಂಡರು.</p>.<p>ಪಾಟೀಲರಿಂದ ₹ 17,100ಕ್ಕೆ ಆದಿವಾಲ ಫಾರಂನ ಆರ್.ಎ. ರಮೇಶ್ ಎಂಬುವವರು ಬೈಕ್ ಖರೀದಿಸಿದ್ದರು. ಮೂಲ ಮಾಲೀಕರಿಗೆ ಬೈಕನ್ನು ತೋರಿಸಬೇಕೆಂದು ರಮೇಶ್ ಹಲವು ಬಾರಿ ಪ್ರಯತ್ನ ನಡೆಸಿದ್ದರು. ಬೈಕ್ ನೋಡಿದ ಬಳಿಕ ಕೃಷಿ ಸಚಿವರು ಮೂರು ದಶಕಗಳ ಹಿಂದಿನ ನೆನಪಿಗೆ ಜಾರಿದರು.</p>.<p>‘ಹಿರಿಯೂರಿನಲ್ಲಿ ಎಸ್ಐ, ಸಿಪಿಐ ಆಗಿದ್ದಾಗ ತೇರುಮಲ್ಲೇಶ್ವರಸ್ವಾಮಿ ನೂತನ ರಥ ನಿರ್ಮಾಣಕ್ಕೆಂದು ಟಿಪ್ಪುಸುಲ್ತಾನ್ ಮತ್ತು ಕುರುಕ್ಷೇತ್ರ ನಾಟಕಗಳನ್ನು ಆಡಿದ್ದೆವು. ನಾಟಕದಿಂದ ಸಿನಿಮಾ ಕ್ಷೇತ್ರದ ಪರಿಚಯವಾಯಿತು. ಸಿನಿಮಾದಿಂದ ರಾಜಕೀಯದತ್ತ ಹೊರಳಿದೆ. ದೇವರ ಆಶೀರ್ವಾದ ಇತ್ತು. ಸಚಿವನೂ ಆಗಿದ್ದೇನೆ. ನನ್ನಿಂದ ಲಾಠಿ ಏಟು ತಿಂದವರು,<br />ಏಟು ತಿಂದು ಬದಲಾದವರು ನನ್ನನ್ನು ಮರೆತಿಲ್ಲ. ನನ್ನಿಂದ ಬೈಕ್ಖರೀದಿಸಿದ ರಮೇಶ್ 32 ವರ್ಷ ಅದನ್ನು ನಿರ್ವಹಣೆ ಮಾಡಿರುವುದು ಅಚ್ಚರಿ ತಂದಿದೆ. ಆತನ ಬಗ್ಗೆ ಹೆಮ್ಮೆ ಮೂಡಿದೆ’ ಎಂದು ಬಿ.ಸಿ. ಪಾಟೀಲ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>