‘ಹಿರಿಯೂರಿನಲ್ಲಿ ಎಸ್ಐ, ಸಿಪಿಐ ಆಗಿದ್ದಾಗ ತೇರುಮಲ್ಲೇಶ್ವರಸ್ವಾಮಿ ನೂತನ ರಥ ನಿರ್ಮಾಣಕ್ಕೆಂದು ಟಿಪ್ಪುಸುಲ್ತಾನ್ ಮತ್ತು ಕುರುಕ್ಷೇತ್ರ ನಾಟಕಗಳನ್ನು ಆಡಿದ್ದೆವು. ನಾಟಕದಿಂದ ಸಿನಿಮಾ ಕ್ಷೇತ್ರದ ಪರಿಚಯವಾಯಿತು. ಸಿನಿಮಾದಿಂದ ರಾಜಕೀಯದತ್ತ ಹೊರಳಿದೆ. ದೇವರ ಆಶೀರ್ವಾದ ಇತ್ತು. ಸಚಿವನೂ ಆಗಿದ್ದೇನೆ. ನನ್ನಿಂದ ಲಾಠಿ ಏಟು ತಿಂದವರು,
ಏಟು ತಿಂದು ಬದಲಾದವರು ನನ್ನನ್ನು ಮರೆತಿಲ್ಲ. ನನ್ನಿಂದ ಬೈಕ್ಖರೀದಿಸಿದ ರಮೇಶ್ 32 ವರ್ಷ ಅದನ್ನು ನಿರ್ವಹಣೆ ಮಾಡಿರುವುದು ಅಚ್ಚರಿ ತಂದಿದೆ. ಆತನ ಬಗ್ಗೆ ಹೆಮ್ಮೆ ಮೂಡಿದೆ’ ಎಂದು ಬಿ.ಸಿ. ಪಾಟೀಲ ಹೇಳಿದರು.