<p><strong>ಚಿತ್ರದುರ್ಗ: </strong>‘ಪರಿಸರದ ಮೇಲೆ ಮನುಷ್ಯನ ದಬ್ಬಾಳಿಕೆ ಇದೇ ವೇಗದಲ್ಲಿ ಸಾಗಿದರೆ ಉತ್ತರ ಕರ್ನಾಟಕ ದೇಶದ ಮತ್ತೊಂದು ದೊಡ್ಡ ಮರುಭೂಮಿ ಆಗಲಿದೆ. ಇನ್ನಾದರೂ ನಮ್ಮ ಗಮನವನ್ನು ಭೂಮಿಯ ಕಡೆ ಹರಿಸಬೇಕಿದೆ’ ಎಂದು ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಎಚ್ಚರಿಸಿದರು.</p>.<p>ನಗರದ ಕ್ರೀಡಾ ಭವನದಲ್ಲಿ ಉಳುಮೆ ಪ್ರತಿಷ್ಠಾನದಿಂದ ಭಾನುವಾರ ಆಯೋಜಿಸಿದ್ದ ‘ಜಾಗತಿಕ ತಾಪಮಾನ ಮತ್ತು ಕೃಷಿ’ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.</p>.<p>‘ಮನುಷ್ಯ ವಿಕಾಸದ ಬಳಿಕ ಕೇವಲ 150 ವರ್ಷಗಳಲ್ಲಿ ಭೂಮಿಯನ್ನು ಶಕ್ತಿ ಮೀರಿ ಹಾಳು ಮಾಡಿದ್ದೇವೆ. ಈ ಎಲ್ಲದರ ಪರಿಣಾಮ 10 ವರ್ಷಗಳಲ್ಲಿ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಭಾರತದ ಮಹಾ ಮರುಭೂಮಿ ಎಂದು ಕರೆಯಲ್ಪಡುವ ‘ಥಾರ್’ ಮರುಭೂಮಿಯಂತೆ ಉತ್ತರ ಕರ್ನಾಟಕ ಭಾಗವೂ ಬದಲಾಗುವ ಸಾಧ್ಯತೆಗಳು ಗೋಚರಿಸುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.</p>.<p>‘ತಾಪಮಾನ ಏರಿಕೆಯಿಂದಾಗಿ ಕೆರೆ, ನದಿಗಳು ಬತ್ತುತ್ತಿವೆ. ಬೃಹತ್ ಅರಣ್ಯಗಳಲ್ಲಿ ಊಹೆಗೂ ನಿಲುಕದ ರೀತಿ ಬೆಂಕಿ ಕಾಣಿಸಿಕೊಂಡು ಕಾಡು ನಾಶವಾಗುತ್ತಿವೆ. ಅತಿವೃಷ್ಠಿ, ಅನಾವೃಷ್ಠಿ ಉಂಟಾಗುತ್ತಿದೆ. ಈ ಸಮಸ್ಯೆಯಿಂದ ಹೊರ ಬರಬೇಕಾದರೆ ಈಗಿನಿಂದಲೇ ಗಿಡ ಮರಗಳನ್ನು ಬೆಳೆಸಬೇಕು. ಕೆರೆಗಳನ್ನು ಸಂರಕ್ಷಿಸುವ ಕೆಲಸವಾಗಬೇಕು. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಎಚ್ಚರಿಸಿದರು.</p>.<p>‘ಅಭಿವೃದ್ಧಿ ಹೆಸರಲ್ಲಿ ನದಿಗಳಿಗೆ ಅಣೆಕಟ್ಟು ನಿರ್ಮಾಣ, ವಿದ್ಯುಚ್ಛಕ್ತಿ ಘಟಕಗಳ ಸ್ಥಾಪನೆಯಿಂದ ಸಮುದ್ರಕ್ಕೆ ಸೇರಬೇಕಾದ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಪ್ರಾಣಿ, ಪಕ್ಷಿ, ಅರಣ್ಯವನ್ನು ವಿವಿಧ ಕಾರಣ ನೀಡಿ ನಾಶ ಮಾಡಲಾಗುತ್ತಿದೆ. ಈ ಎಲ್ಲದರಿಂದ ಶೇ 35ರಷ್ಟು ಜನರಿಗೆ ಪ್ರಯೋಜನವಾಗಿದ್ದು, 65ರಷ್ಟು ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಅಭಿವೃದ್ಧಿಯಿಂದ ಹೊಸ ಪ್ರಳಯ ಸೃಷ್ಟಿಯಾಗುತ್ತಿದೆ’ ಎಂದು ಹೇಳಿದರು.</p>.<p>‘ಪರಿಸರದಲ್ಲಿನ ನಿರಂತರ ಬದಲಾವಣೆಯಿಂದ ಚಂಡಮಾರುತುಗಳ ಹೆಚ್ಚಾಗಿ ಬೀಸುತ್ತಿದ್ದು, ಸಮುದ್ರ ಕೊರೆತವೂ ಹೆಚ್ಚಾಗುತ್ತಿದೆ. ಶ್ರೀಮಂತರು ಮಾಡುವ ಕೆಲಸಕ್ಕೆ ಸಾಮಾನ್ಯನ ಬದುಕು ದುಸ್ತರವಾಗುತ್ತಿದೆ. ಈ ಮೂಲಕ ಅತಿಮಾನವ ಯುಗವೊಂದು ಸೃಷ್ಟಿಯಾಗುತ್ತಿದೆ’ ಎಂದು ತಿಳಿಸಿದರು.</p>.<p>‘ಕಲ್ಲಿದ್ದಲು, ಕಚ್ಚಾತೈಲ, ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯಿಂದ ಭೂಮಿ ಸುಡುತ್ತಿದೆ. ಬಂಗಾರದ ವ್ಯಾಮೋಹಕ್ಕೆ ಸಿಲುಕಿ ಭೂಗರ್ಭವನ್ನು ಸೀಳುತ್ತಿದ್ದೇವೆ. ಇದರಿಂದ ಮನುಷ್ಯನಿಗೆ ಬೇಡವಾದ ಕಾಮ, ಕ್ರೋಧ, ಮೋಹ, ಲೋಭ, ಅಸೂಯೆಯನ್ನು ನಾವೇ ಹೆಚ್ಚಿಸಿಕೊಳ್ಳುತ್ತಿದ್ದೇವೆ’ ಎಂದರು.</p>.<p>ಪೂರ್ಣಪ್ರಜ್ಞ ಕಾಲೇಜು ಪ್ರಾಚಾರ್ಯ ಗುರುರಾಜ್ ಎಸ್. ದಾವಣಗೆರೆ ಮಾತನಾಡಿ, ‘ಒಂದು ಕಾಲದಲ್ಲಿ ಸಿರಿಧಾನ್ಯಗಳ ಬೀಡಾಗಿದ್ದ ಚಿತ್ರದುರ್ಗದಲ್ಲಿ ಈಗ ಸಿರಿಧಾನ್ಯ ಹುಡುಕಬೇಕಾದ ಸ್ಥಿತಿ ಎದುರಾಗಿದೆ. ಪರಿಸ್ಥಿತಿ ಹೀಗೆ ಸಾಗಿದರೆ 20 ವರ್ಷದಲ್ಲಿ ‘ಕೃಷಿ’ ಪದವನ್ನು ನಾವೆಲ್ಲ ಮರೆಯಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.</p>.<p>‘ಸರ್ಕಾರಗಳು ಕೃಷಿ ನಾಶ ಮಾಡಲು ಕಾನೂನು ರೂಪಿಸುತ್ತಿವೆ. ಈಗಾಗಲೇ 40 ಕೋಟಿ ಗ್ರಾಮೀಣ ಜನರು ನಗರ ಸೇರಿದ್ದಾರೆ. ಅವರ ಮಕ್ಕಳಿಗೆ ಕೃಷಿಯನ್ನು ಕಲಿಸದೆ ಕೈಗಾರಿಕೆಗಳಿಗೆ ನೂಕುತ್ತಿದ್ದಾರೆ. ಕೃಷಿ ತಜ್ಞರು ಸಹ ರೈತರ ಆತ್ಮಹತ್ಯೆಗೆ ನಿರ್ಲಕ್ಷ್ಯದ ಕಾರಣ ನೀಡುತ್ತಿದ್ದಾರೆ’ ಎಂದು ಬೇಸರಿಸಿದರು.</p>.<p>‘ಸೈನಿಕರಂತೆ ರೈತರ ಸೇವೆಯನ್ನು ‘ರಾಷ್ಟ್ರೀಯ ಸೇವೆ’ ಎಂದು ಸರ್ಕಾರ ಘೋಷಿಸಬೇಕು. ಬಜೆಟ್ನಲ್ಲಿ ಹೆಚ್ಚಿನ ಅನುದಾನ ಕೃಷಿ ವಲಯಕ್ಕೆ ಮೀಸಲಿಡಬೇಕು. ಆಗ ಮಾತ್ರ ಆಹಾರದ ಸಮಸ್ಯೆ ನೀಗಿ ರೈತರ ಬದುಕು ಹಸನಾಗುತ್ತದೆ’ ಎಂದು ತಿಳಿಸಿದರು.</p>.<p>ಸಂವಾದ ನಡೆಸಿಕೊಟ್ಟ ಪತ್ರಕರ್ತ ಗಾಣಧಾಳು ಶ್ರೀಕಂಠ, ‘ಜಾಗತಿಕ ತಾಪಮಾನ ಮತ್ತು ಕೃಷಿ ಬಿಕ್ಕಟ್ಟು ಕುರಿತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಚರ್ಚೆಯಾಗಬೇಕು’ ಎಂದು ಅಭಿಪ್ರಾಯಪಟ್ಟರು.</p>.<p>ಕೃಷಿ ತಜ್ಞ ಟಿ.ಜಿ.ಎಸ್. ಅವಿನಾಶ್, ರೈತ ಮುಖಂಡ ಈಚಘಟ್ಟ ಸಿದ್ದವೀರಪ್ಪ, ಉಳುಮೆ ಸಂಘಟನೆಯ ಉಜನಿಗೌಡ ಇದ್ದರು.</p>.<p class="Briefhead"><strong>ಒಂದೆಡೆ ಪ್ರವಾಹ ಪಕ್ಕದಲ್ಲೆ ಬರ</strong></p>.<p>‘ಇಂದು ಭೂಮಿಯೇ ಮನುಷ್ಯನ ದಾಹಕ್ಕೆ ಸಿಲುಕಿ ದಹಿಸುತ್ತಿದೆ. ಭೂಮಿ ಬಾಯಾರಿಕೆಯನ್ನು ನೀಗಿಸಬಹುದು. ದಾಹವನ್ನಲ್ಲ. ಇಂದಿನ ಮನುಷ್ಯನ ದಾಹದಿಂದಾಗಿ ತಾಪಮಾನ ಹೆಚ್ಚಾಗಿ- ಹಿಮಗಡ್ಡೆ ಕರಗುತ್ತಿವೆ. ಸಮುದ್ರದ ಮಟ್ಟ ಏರುತ್ತಿದೆ. ಚಂಡಮಾರುತಗಳು ಅಪ್ಪಳಿಸುತ್ತಿವೆ. ಹುಚ್ಚು ಮಳೆ ಬರುತ್ತಿದೆ. ಭೂಮಿ ಕುಸಿಯುತ್ತಿದೆ. ಎಲ್ಲವೂ ಕೊಚ್ಚಿಹೋಗುತ್ತಿದೆ. ವಿಪರ್ಯಾಸವೆಂದರೆ ಒಂದು ಕಡೆ ಪ್ರವಾಹ. ಅದರ ಪಕ್ಕದಲ್ಲೆ ನೀರಿಲ್ಲದ ಬರ. ಬದುಕುವುದೆಂತು’ ಎಂದು ನಾಗೇಶ ಹೆಗಡೆ ಪ್ರಶ್ನಿಸಿದರು.</p>.<p><strong>***</strong></p>.<p>ಪ್ರಸಕ್ತ ಸನ್ನಿವೇಶದಲ್ಲಿ ರೈತರು ಕೃಷಿಯನ್ನು ತ್ಯಜಿಸಬೇಕೋ, ಮುಂದುವರಿಸಬೇಕೋ ಎಂಬ ಗೊಂದಲದಲ್ಲಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ವಿಜ್ಞಾನಿಗಳು ರೈತರ ನೆರವಿಗೆ ನಿಲ್ಲಬೇಕು.</p>.<p><strong>-ಬಸ್ತಿಹಳ್ಳಿ ಜಿ. ಸುರೇಶ್ ಬಾಬು, ಜಿಲ್ಲಾಧ್ಯಕ್ಷ, ರೈತ ಸಂಘ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ: </strong>‘ಪರಿಸರದ ಮೇಲೆ ಮನುಷ್ಯನ ದಬ್ಬಾಳಿಕೆ ಇದೇ ವೇಗದಲ್ಲಿ ಸಾಗಿದರೆ ಉತ್ತರ ಕರ್ನಾಟಕ ದೇಶದ ಮತ್ತೊಂದು ದೊಡ್ಡ ಮರುಭೂಮಿ ಆಗಲಿದೆ. ಇನ್ನಾದರೂ ನಮ್ಮ ಗಮನವನ್ನು ಭೂಮಿಯ ಕಡೆ ಹರಿಸಬೇಕಿದೆ’ ಎಂದು ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಎಚ್ಚರಿಸಿದರು.</p>.<p>ನಗರದ ಕ್ರೀಡಾ ಭವನದಲ್ಲಿ ಉಳುಮೆ ಪ್ರತಿಷ್ಠಾನದಿಂದ ಭಾನುವಾರ ಆಯೋಜಿಸಿದ್ದ ‘ಜಾಗತಿಕ ತಾಪಮಾನ ಮತ್ತು ಕೃಷಿ’ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.</p>.<p>‘ಮನುಷ್ಯ ವಿಕಾಸದ ಬಳಿಕ ಕೇವಲ 150 ವರ್ಷಗಳಲ್ಲಿ ಭೂಮಿಯನ್ನು ಶಕ್ತಿ ಮೀರಿ ಹಾಳು ಮಾಡಿದ್ದೇವೆ. ಈ ಎಲ್ಲದರ ಪರಿಣಾಮ 10 ವರ್ಷಗಳಲ್ಲಿ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಭಾರತದ ಮಹಾ ಮರುಭೂಮಿ ಎಂದು ಕರೆಯಲ್ಪಡುವ ‘ಥಾರ್’ ಮರುಭೂಮಿಯಂತೆ ಉತ್ತರ ಕರ್ನಾಟಕ ಭಾಗವೂ ಬದಲಾಗುವ ಸಾಧ್ಯತೆಗಳು ಗೋಚರಿಸುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.</p>.<p>‘ತಾಪಮಾನ ಏರಿಕೆಯಿಂದಾಗಿ ಕೆರೆ, ನದಿಗಳು ಬತ್ತುತ್ತಿವೆ. ಬೃಹತ್ ಅರಣ್ಯಗಳಲ್ಲಿ ಊಹೆಗೂ ನಿಲುಕದ ರೀತಿ ಬೆಂಕಿ ಕಾಣಿಸಿಕೊಂಡು ಕಾಡು ನಾಶವಾಗುತ್ತಿವೆ. ಅತಿವೃಷ್ಠಿ, ಅನಾವೃಷ್ಠಿ ಉಂಟಾಗುತ್ತಿದೆ. ಈ ಸಮಸ್ಯೆಯಿಂದ ಹೊರ ಬರಬೇಕಾದರೆ ಈಗಿನಿಂದಲೇ ಗಿಡ ಮರಗಳನ್ನು ಬೆಳೆಸಬೇಕು. ಕೆರೆಗಳನ್ನು ಸಂರಕ್ಷಿಸುವ ಕೆಲಸವಾಗಬೇಕು. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಎಚ್ಚರಿಸಿದರು.</p>.<p>‘ಅಭಿವೃದ್ಧಿ ಹೆಸರಲ್ಲಿ ನದಿಗಳಿಗೆ ಅಣೆಕಟ್ಟು ನಿರ್ಮಾಣ, ವಿದ್ಯುಚ್ಛಕ್ತಿ ಘಟಕಗಳ ಸ್ಥಾಪನೆಯಿಂದ ಸಮುದ್ರಕ್ಕೆ ಸೇರಬೇಕಾದ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಪ್ರಾಣಿ, ಪಕ್ಷಿ, ಅರಣ್ಯವನ್ನು ವಿವಿಧ ಕಾರಣ ನೀಡಿ ನಾಶ ಮಾಡಲಾಗುತ್ತಿದೆ. ಈ ಎಲ್ಲದರಿಂದ ಶೇ 35ರಷ್ಟು ಜನರಿಗೆ ಪ್ರಯೋಜನವಾಗಿದ್ದು, 65ರಷ್ಟು ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಅಭಿವೃದ್ಧಿಯಿಂದ ಹೊಸ ಪ್ರಳಯ ಸೃಷ್ಟಿಯಾಗುತ್ತಿದೆ’ ಎಂದು ಹೇಳಿದರು.</p>.<p>‘ಪರಿಸರದಲ್ಲಿನ ನಿರಂತರ ಬದಲಾವಣೆಯಿಂದ ಚಂಡಮಾರುತುಗಳ ಹೆಚ್ಚಾಗಿ ಬೀಸುತ್ತಿದ್ದು, ಸಮುದ್ರ ಕೊರೆತವೂ ಹೆಚ್ಚಾಗುತ್ತಿದೆ. ಶ್ರೀಮಂತರು ಮಾಡುವ ಕೆಲಸಕ್ಕೆ ಸಾಮಾನ್ಯನ ಬದುಕು ದುಸ್ತರವಾಗುತ್ತಿದೆ. ಈ ಮೂಲಕ ಅತಿಮಾನವ ಯುಗವೊಂದು ಸೃಷ್ಟಿಯಾಗುತ್ತಿದೆ’ ಎಂದು ತಿಳಿಸಿದರು.</p>.<p>‘ಕಲ್ಲಿದ್ದಲು, ಕಚ್ಚಾತೈಲ, ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯಿಂದ ಭೂಮಿ ಸುಡುತ್ತಿದೆ. ಬಂಗಾರದ ವ್ಯಾಮೋಹಕ್ಕೆ ಸಿಲುಕಿ ಭೂಗರ್ಭವನ್ನು ಸೀಳುತ್ತಿದ್ದೇವೆ. ಇದರಿಂದ ಮನುಷ್ಯನಿಗೆ ಬೇಡವಾದ ಕಾಮ, ಕ್ರೋಧ, ಮೋಹ, ಲೋಭ, ಅಸೂಯೆಯನ್ನು ನಾವೇ ಹೆಚ್ಚಿಸಿಕೊಳ್ಳುತ್ತಿದ್ದೇವೆ’ ಎಂದರು.</p>.<p>ಪೂರ್ಣಪ್ರಜ್ಞ ಕಾಲೇಜು ಪ್ರಾಚಾರ್ಯ ಗುರುರಾಜ್ ಎಸ್. ದಾವಣಗೆರೆ ಮಾತನಾಡಿ, ‘ಒಂದು ಕಾಲದಲ್ಲಿ ಸಿರಿಧಾನ್ಯಗಳ ಬೀಡಾಗಿದ್ದ ಚಿತ್ರದುರ್ಗದಲ್ಲಿ ಈಗ ಸಿರಿಧಾನ್ಯ ಹುಡುಕಬೇಕಾದ ಸ್ಥಿತಿ ಎದುರಾಗಿದೆ. ಪರಿಸ್ಥಿತಿ ಹೀಗೆ ಸಾಗಿದರೆ 20 ವರ್ಷದಲ್ಲಿ ‘ಕೃಷಿ’ ಪದವನ್ನು ನಾವೆಲ್ಲ ಮರೆಯಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.</p>.<p>‘ಸರ್ಕಾರಗಳು ಕೃಷಿ ನಾಶ ಮಾಡಲು ಕಾನೂನು ರೂಪಿಸುತ್ತಿವೆ. ಈಗಾಗಲೇ 40 ಕೋಟಿ ಗ್ರಾಮೀಣ ಜನರು ನಗರ ಸೇರಿದ್ದಾರೆ. ಅವರ ಮಕ್ಕಳಿಗೆ ಕೃಷಿಯನ್ನು ಕಲಿಸದೆ ಕೈಗಾರಿಕೆಗಳಿಗೆ ನೂಕುತ್ತಿದ್ದಾರೆ. ಕೃಷಿ ತಜ್ಞರು ಸಹ ರೈತರ ಆತ್ಮಹತ್ಯೆಗೆ ನಿರ್ಲಕ್ಷ್ಯದ ಕಾರಣ ನೀಡುತ್ತಿದ್ದಾರೆ’ ಎಂದು ಬೇಸರಿಸಿದರು.</p>.<p>‘ಸೈನಿಕರಂತೆ ರೈತರ ಸೇವೆಯನ್ನು ‘ರಾಷ್ಟ್ರೀಯ ಸೇವೆ’ ಎಂದು ಸರ್ಕಾರ ಘೋಷಿಸಬೇಕು. ಬಜೆಟ್ನಲ್ಲಿ ಹೆಚ್ಚಿನ ಅನುದಾನ ಕೃಷಿ ವಲಯಕ್ಕೆ ಮೀಸಲಿಡಬೇಕು. ಆಗ ಮಾತ್ರ ಆಹಾರದ ಸಮಸ್ಯೆ ನೀಗಿ ರೈತರ ಬದುಕು ಹಸನಾಗುತ್ತದೆ’ ಎಂದು ತಿಳಿಸಿದರು.</p>.<p>ಸಂವಾದ ನಡೆಸಿಕೊಟ್ಟ ಪತ್ರಕರ್ತ ಗಾಣಧಾಳು ಶ್ರೀಕಂಠ, ‘ಜಾಗತಿಕ ತಾಪಮಾನ ಮತ್ತು ಕೃಷಿ ಬಿಕ್ಕಟ್ಟು ಕುರಿತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಚರ್ಚೆಯಾಗಬೇಕು’ ಎಂದು ಅಭಿಪ್ರಾಯಪಟ್ಟರು.</p>.<p>ಕೃಷಿ ತಜ್ಞ ಟಿ.ಜಿ.ಎಸ್. ಅವಿನಾಶ್, ರೈತ ಮುಖಂಡ ಈಚಘಟ್ಟ ಸಿದ್ದವೀರಪ್ಪ, ಉಳುಮೆ ಸಂಘಟನೆಯ ಉಜನಿಗೌಡ ಇದ್ದರು.</p>.<p class="Briefhead"><strong>ಒಂದೆಡೆ ಪ್ರವಾಹ ಪಕ್ಕದಲ್ಲೆ ಬರ</strong></p>.<p>‘ಇಂದು ಭೂಮಿಯೇ ಮನುಷ್ಯನ ದಾಹಕ್ಕೆ ಸಿಲುಕಿ ದಹಿಸುತ್ತಿದೆ. ಭೂಮಿ ಬಾಯಾರಿಕೆಯನ್ನು ನೀಗಿಸಬಹುದು. ದಾಹವನ್ನಲ್ಲ. ಇಂದಿನ ಮನುಷ್ಯನ ದಾಹದಿಂದಾಗಿ ತಾಪಮಾನ ಹೆಚ್ಚಾಗಿ- ಹಿಮಗಡ್ಡೆ ಕರಗುತ್ತಿವೆ. ಸಮುದ್ರದ ಮಟ್ಟ ಏರುತ್ತಿದೆ. ಚಂಡಮಾರುತಗಳು ಅಪ್ಪಳಿಸುತ್ತಿವೆ. ಹುಚ್ಚು ಮಳೆ ಬರುತ್ತಿದೆ. ಭೂಮಿ ಕುಸಿಯುತ್ತಿದೆ. ಎಲ್ಲವೂ ಕೊಚ್ಚಿಹೋಗುತ್ತಿದೆ. ವಿಪರ್ಯಾಸವೆಂದರೆ ಒಂದು ಕಡೆ ಪ್ರವಾಹ. ಅದರ ಪಕ್ಕದಲ್ಲೆ ನೀರಿಲ್ಲದ ಬರ. ಬದುಕುವುದೆಂತು’ ಎಂದು ನಾಗೇಶ ಹೆಗಡೆ ಪ್ರಶ್ನಿಸಿದರು.</p>.<p><strong>***</strong></p>.<p>ಪ್ರಸಕ್ತ ಸನ್ನಿವೇಶದಲ್ಲಿ ರೈತರು ಕೃಷಿಯನ್ನು ತ್ಯಜಿಸಬೇಕೋ, ಮುಂದುವರಿಸಬೇಕೋ ಎಂಬ ಗೊಂದಲದಲ್ಲಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ವಿಜ್ಞಾನಿಗಳು ರೈತರ ನೆರವಿಗೆ ನಿಲ್ಲಬೇಕು.</p>.<p><strong>-ಬಸ್ತಿಹಳ್ಳಿ ಜಿ. ಸುರೇಶ್ ಬಾಬು, ಜಿಲ್ಲಾಧ್ಯಕ್ಷ, ರೈತ ಸಂಘ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>