ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್ ರಾಘವನ್ ಅವರೊಂದಿಗೆ ಮಾತನಾಡಿದ ಶಾಸಕರು, ‘ವಿ.ವಿ.ಸಾಗರ ಭರ್ತಿಯಾಗಲು ಇನ್ನು ಐದು ಅಡಿಗಳು ಬಾಕಿ ಇವೆ. ಭದ್ರಾ ಜಲಾಶಯದ ನೀರು ಹರಿದರೆ ವಿ.ವಿ.ಸಾಗರ ಕೋಡಿ ಬೀಳುತ್ತದೆ. ಈ ಗತವೈಭವವನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ರೈತರು ಕಾಯುತ್ತಿದ್ದಾರೆ’ ಎಂದು ಹೇಳಿದ್ದಾರೆ.