ಶಿವಮೊಗ್ಗ: ಬಿಜೆಪಿ ನಗರ ಘಟಕದ ಉಪಾಧ್ಯಕ್ಷ ನಾಗರಾಜ್(50)ಅವರನ್ನು ಭಾನುವಾರ ತಡರಾತ್ರಿ ಕೊಲೆ ಮಾಡಲಾಗಿದೆ.
ಕೊಲೆ ಪ್ರಕರಣ ಬೆಳಕಿಗೆ ಬಂದ ಕೆಲವೇ ತಾಸುಗಳಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಆರೋಪಿಗಳೆಂದು ಶಂಕಿಸಲಾದಭದ್ರಾವತಿ ಜೇಡಿಕಟ್ಟೆಯ ರಾಘು, ರಾಘವೇಂದ್ರಅವರನ್ನು ವಶಕ್ಕೆ ಪಡೆದಿದ್ದಾರೆ.
ನಾಗರಾಜ ರಾಗಿಗುಡ್ಡ ನಿವಾಸಿ. ರಾತ್ರಿ 8.30ರ ಸುಮಾರಿಗೆ ಮನೆಯಿಂದ ಹೊರಗೆ ಹೋದವರನ್ನು ಮಚ್ಚುಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ರಾಗಿಗುಡ್ಡ ಸಮೀಪದ ಕುವೆಂಪು ಬಡಾವಣೆಯಲ್ಲಿ ಶವ ದೊರೆತ್ತಿತ್ತು. ಆತನ ಬಳಿ ಇದ್ದ ಬೈಕ್, ಮೊಬೈಲ್ನಿಂದ ಶವದ ಗುರುತು ಪತ್ತೆಯಾಗಿತ್ತು.
ಶಂಕಿತ ಆರೋಪಿಗಳು ಹಾಗೂ ಕೊಲೆಯಾದ ನಾಗರಾಜ್ ಮಧ್ಯೆ ಹಣಕಾಸಿನ ವ್ಯವಹಾರವಿದ್ದು, ಇದು ಕೊಲೆಗೆ ಕಾರಣವಿರಬಹುದುಎಂದು ಪೊಲೀಸರುಶಂಕಿಸಿದ್ದಾರೆ.