ಮಂಗಳೂರು: ‘ಅಕ್ಷಯ ತೃತೀಯದಂದು ಮಹಿಳೆಯರು ಹಿಂದೂಗಳ ಅಂಗಡಿಯಲ್ಲಿಯೇ ಚಿನ್ನಾಭರಣ ಖರೀದಿ ಮಾಡಬೇಕು, ಮುಸ್ಲಿಮರ ಅಂಗಡಿಗಳಿಂದ ಯಾವಕಾರಣಕ್ಕೂ ಖರೀದಿಸಬಾರದು ಎಂದು ಮಹಿಳಾ ಸಮಿತಿ ಹಾಗೂ ದುರ್ಗಾ ಸೇನೆ ಸಂಘಟನೆಯ ಮಹಿಳೆಯರಿಗೆ ಶ್ರೀರಾಮಸೇನೆ ವತಿಯಿಂದ ಮನವಿ ಸಲ್ಲಿಸಲಾಗುತ್ತಿದೆ’ ಎಂದು ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.