<p><strong>ಮೂಡುಬಿದಿರೆ (ದಕ್ಷಿಣ ಕನ್ನಡ):</strong> ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಯುವ ಅಳ್ವಾಸ್ ವಿರಾಸತ್ಗೆ ಸಂಬಂಧಿಸಿ ‘ಆಳ್ವಾಸ್ ವಿರಾಸತ್ ಶಾಸ್ತ್ರೀಯ ಯುವಸಂಪದ’ ಶಿಬಿರ ಡಿ.10ರಿಂದ 14ರವರೆಗೆ ಬೆಳಿಗ್ಗೆ 7.30ರಿಂದ ಸಂಜೆ 5ರವರೆಗೆ ನಡೆಯಲಿದೆ.</p>.<p>ಆಸಕ್ತ ಶಾಸ್ತ್ರೀಯ (ಹಿಂದೂಸ್ಥಾನಿ- ಕರ್ನಾಟಕ) ಸಂಗೀತ- ನೃತ್ಯ- ತಾಳವಾದ್ಯ ಮತ್ತು ಯಕ್ಷಗಾನ ಕಲೆ ಅಭ್ಯಸಿಸುವ 6ನೇ ತರಗತಿಯಿಂದ ಸ್ನಾತಕೋತ್ತರ ತರಗತಿವರೆಗಿನ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಭಾಗವಹಿಸುವ ವಿದ್ಯಾರ್ಥಿಗಳಿಗೆ ಅಭ್ಯಸಿಸುವ ಕಲಾಪ್ರಕಾರದಲ್ಲಿ ಕನಿಷ್ಠ 2 ವರ್ಷಗಳ ಪರಿಶ್ರಮವಿರಬೇಕು. ತರಬೇತಿ ಶುಲ್ಕ ಇರುವುದಿಲ್ಲ.</p>.<p>ಊಟ, ಉಪಾಹಾರ ಮತ್ತು ವಸತಿ ಉಚಿತವಾಗಿರುತ್ತವೆ. ಶಿಬಿರದಲ್ಲಿ ಯೋಗ, ಧ್ಯಾನ, ವಿದ್ವಾಂಸರಿಂದ ಉಪನ್ಯಾಸ, ಶಾಸ್ತ್ರೀಯ ಸಂಗೀತ-ನೃತ್ಯಾದಿ ಕಲೆಗಳಲ್ಲಿ ಏಕವ್ಯಕ್ತಿ ಮತ್ತು ಸಮೂಹ ಪ್ರಾತ್ಯಕ್ಷಿಕೆಗಳಿರುತ್ತವೆ. ಕೃಷಿ, ಆಹಾರ, ಚಿತ್ರಕಲೆ, ಕರಕುಶಲ, ಫಲಪುಷ್ಪ ಪ್ರದರ್ಶನ ಮತ್ತು ‘ಆಳ್ವಾಸ್ ವಿರಾಸತ್-2024’ರ ಮಹಾವೈಭವದಲ್ಲಿ ಭಾಗವಹಿಸಬಹುದು. ಆಸಕ್ತರು ಡಿ.9ರ ಮೊದಲು ಹೆಸರು ನೋಂದಾಯಿಸಿಕೊಳ್ಳಬೇಕು. ಮಾಹಿತಿಗಾಗಿ ಚಂದ್ರಶೇಖರ ನಾವಡ ಮೊ: 9972247873 ಅಥವಾ ಸುಮನಾ ಪ್ರಸಾದ್ ಮೊ: 9448989382 ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡುಬಿದಿರೆ (ದಕ್ಷಿಣ ಕನ್ನಡ):</strong> ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಯುವ ಅಳ್ವಾಸ್ ವಿರಾಸತ್ಗೆ ಸಂಬಂಧಿಸಿ ‘ಆಳ್ವಾಸ್ ವಿರಾಸತ್ ಶಾಸ್ತ್ರೀಯ ಯುವಸಂಪದ’ ಶಿಬಿರ ಡಿ.10ರಿಂದ 14ರವರೆಗೆ ಬೆಳಿಗ್ಗೆ 7.30ರಿಂದ ಸಂಜೆ 5ರವರೆಗೆ ನಡೆಯಲಿದೆ.</p>.<p>ಆಸಕ್ತ ಶಾಸ್ತ್ರೀಯ (ಹಿಂದೂಸ್ಥಾನಿ- ಕರ್ನಾಟಕ) ಸಂಗೀತ- ನೃತ್ಯ- ತಾಳವಾದ್ಯ ಮತ್ತು ಯಕ್ಷಗಾನ ಕಲೆ ಅಭ್ಯಸಿಸುವ 6ನೇ ತರಗತಿಯಿಂದ ಸ್ನಾತಕೋತ್ತರ ತರಗತಿವರೆಗಿನ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಭಾಗವಹಿಸುವ ವಿದ್ಯಾರ್ಥಿಗಳಿಗೆ ಅಭ್ಯಸಿಸುವ ಕಲಾಪ್ರಕಾರದಲ್ಲಿ ಕನಿಷ್ಠ 2 ವರ್ಷಗಳ ಪರಿಶ್ರಮವಿರಬೇಕು. ತರಬೇತಿ ಶುಲ್ಕ ಇರುವುದಿಲ್ಲ.</p>.<p>ಊಟ, ಉಪಾಹಾರ ಮತ್ತು ವಸತಿ ಉಚಿತವಾಗಿರುತ್ತವೆ. ಶಿಬಿರದಲ್ಲಿ ಯೋಗ, ಧ್ಯಾನ, ವಿದ್ವಾಂಸರಿಂದ ಉಪನ್ಯಾಸ, ಶಾಸ್ತ್ರೀಯ ಸಂಗೀತ-ನೃತ್ಯಾದಿ ಕಲೆಗಳಲ್ಲಿ ಏಕವ್ಯಕ್ತಿ ಮತ್ತು ಸಮೂಹ ಪ್ರಾತ್ಯಕ್ಷಿಕೆಗಳಿರುತ್ತವೆ. ಕೃಷಿ, ಆಹಾರ, ಚಿತ್ರಕಲೆ, ಕರಕುಶಲ, ಫಲಪುಷ್ಪ ಪ್ರದರ್ಶನ ಮತ್ತು ‘ಆಳ್ವಾಸ್ ವಿರಾಸತ್-2024’ರ ಮಹಾವೈಭವದಲ್ಲಿ ಭಾಗವಹಿಸಬಹುದು. ಆಸಕ್ತರು ಡಿ.9ರ ಮೊದಲು ಹೆಸರು ನೋಂದಾಯಿಸಿಕೊಳ್ಳಬೇಕು. ಮಾಹಿತಿಗಾಗಿ ಚಂದ್ರಶೇಖರ ನಾವಡ ಮೊ: 9972247873 ಅಥವಾ ಸುಮನಾ ಪ್ರಸಾದ್ ಮೊ: 9448989382 ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>