ಮಾಲಾಡಿ ಗ್ರಾಮದ ಮಡಂತ್ಯಾರು ನಾವುಂಡ ಕಡೆಗೆ ಹೋಗುವ ರಸ್ತೆಯಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದು, ಜ.1ರಂದು ಬೆಳಿಗ್ಗೆ ಅಂಗಡಿಯಲ್ಲಿ ಕೆಲಸ ಮಾಡುವ ಇಸ್ಮಾಯಿಲ್ ಎಂಬುವರಲ್ಲಿ ಕ್ಯಾಷ್ ಡ್ರಾಯರ್ನ ಕೀಲಿಕೈ ನೀಡಿ, ಅನ್ಯ ಕೆಲಸದ ನಿಮಿತ್ತ ಹೊರಗೆ ಹೋಗಿದ್ದೆ. ಮಧ್ಯಾಹ್ನ ಸಮಯ ಅಂಗಡಿಯಲ್ಲಿದ್ದ ಇಸ್ಮಾಯಿಲ್ ಕರೆ ಮಾಡಿ, ಇಬ್ಬರು ಅಪರಿಚಿತರು ಸ್ಕೂಟರ್ನಲ್ಲಿ ಅಂಗಡಿಗೆ ಬಂದಿದ್ದು, ಗಮನ ಬೇರೆಡೆಗೆ ಸೆಳೆದು ಡ್ರಾಯರ್ ನಲ್ಲಿದ್ದ ₹ 2.31 ಲಕ್ಷ ಕಳವಾಗಿರುವುದು ಗೊತ್ತಾಗಿದೆ ಎಂದು ಮಾಲಾಡಿ ಗ್ರಾಮದ ಟಿ.ಪುಷ್ಪರಾಜ ಹೆಗ್ಡೆ ದೂರಿನಲ್ಲಿ ತಿಳಿಸಿದ್ದಾರೆ.