‘ಖಿನ್ನತೆ, ಗೀಳು ಮತ್ತಿತರ ಮಾನಸಿಕ ಕಾಯಿಲೆಯ ಬಗ್ಗೆ ಜನರಲ್ಲಿ ಅರಿವು ಇದೆ. ಅದಕ್ಕೆ ಚಿಕಿತ್ಸೆಯನ್ನೂ ಪಡೆಯುತ್ತಾರೆ. ಆದರೆ ಅಲ್ಸರ್, ಅಸ್ತಮಾ, ನಿದ್ರಾಹೀನತೆ, ಆಹಾರದ ಮೇಲಿನ ಅತಿಯಾದ ಆಸೆ, ತೂಕ ಇಳಿಸಿಕೊಳ್ಳವ ಭ್ರಮೆ, ಮೈಗ್ರೇನ್ ಮುಂತಾದ ಮನೋದೈಹಿಕ ಖಾಯಿಲೆಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಲ್ಲ. ಅವುಗಳಿಗೆ ಸ್ವಯಂ ಔಷಧಿ ತೆಗೆದುಕೊಳ್ಳುವವರೇ ಹೆಚ್ಚು. ಇದೇ ವೇಳೆ ವರ್ತನೆಯಲ್ಲಿನ ದೋಷ, ಸಂಬಂಧಗಳ ನಡುವಿನ ಬಿರುಕು, ವೈವಾಹಿಕ ಜೀವನದ ವೈಫಲ್ಯ ಇತ್ಯಾದಿಗಳಿಗೆ ಔಷಧಿ ಅಗತ್ಯವಿಲ್ಲ. ಅದನ್ನು ನಿಯಂತ್ರಿಸಲು ಇತರ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. ಈ ಎಲ್ಲ ಅಂಶಗಳನ್ನು ಪುಸ್ತಕದಲ್ಲಿ ಅಳವಡಿಸಲಾಗಿದೆ’ ಎಂದು ಧನಂಜಯ ತಿಳಿಸಿದರು.