ಮಂಗಳೂರು: ಮುಸ್ಲಿಂ ಧರ್ಮೀಯರಿಂದಲೇ ಕೊರೊನಾ ವೈರಸ್ ಸೋಂಕು ಹರಡುತ್ತಿದೆ ಎಂಬ ತಪ್ಪು ಮಾಹಿತಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದ್ವೇಷ ಸೃಷ್ಟಿಯಾಗುವ ಆತಂಕ ಎದುರಾಗಿದೆ. ತೊಕ್ಕೊಟ್ಟು, ಕೊಲ್ಯ, ಮಂಗಳೂರಿನ ಅಳಪೆ ಸೇರಿದಂತೆ ಹಲವೆಡೆ ಊರಿಗೆ ಮುಸ್ಲಿಂ ವ್ಯಾಪಾರಿಗಳ ಪ್ರವೇಶ ವಿರೋಧಿಸಿ ಫಲಕಗಳನ್ನು ಅಳವಡಿಸಲಾಗಿದೆ.