ಇದೇ ವೇಳೆ ಶಿಲ್ಪಿ ಗುಣವಂತ ಭಟ್ ಕಾರ್ಕಳ ಇವರು ಪಂಚಲೋಹದ ರಾಘವೇಂದ್ರ ಸ್ವಾಮಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಹಸ್ತಾಂತರಿಸಿದರು. ಸೇವಾರ್ಥಿ ಜಯಪ್ರಕಾಶ್ ತುಂಬೆ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ ಕಲ್ಲಡ್ಕ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ, ಪ್ರಮುಖರಾದ ಅಭಿಷೇಕ್ ಪಿಲಿಂಗಾಲು, ಡೊಂಬಯ ಸಪಲ್ಯ, ಹರೀಶ ಪಿಲಿಂಗಾಲು ಇದ್ದರು.