ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ದಕ್ಷಿಣ ಕನ್ನಡ: ಅಂಕೆ ಮೀರಿ ಹರಡುತ್ತಿದೆ ಡೆಂಗಿ

Published : 15 ಜುಲೈ 2024, 7:13 IST
Last Updated : 15 ಜುಲೈ 2024, 7:13 IST
ಫಾಲೋ ಮಾಡಿ
Comments
ನಗರದಲ್ಲಿ ಎಲ್ಲೆಲ್ಲಿ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ ಎಂಬ ಮಾಹಿತಿಯೇ ಪಾಲಿಕೆ ಬಳಿ ಮಾಹಿತಿಯೇ ಇಲ್ಲ. ಡೆಂಗಿ ನಿಯಂತ್ರಣಕ್ಕೆ ಪಾಲಿಕೆ ಇನ್ನಷ್ಟು ಸನ್ನದ್ಧಗೊಳ್ಳಬೇಕು
ನವೀನ್ ಡಿಸೋಜ ಪಾಲಿಕೆ ಸದಸ್ಯ
ಹೊರ ರಾಜ್ಯಗಳ ವಲಸೆ ಕಾರ್ಮಿಕರು ನೆಲೆಸಿರುವಲ್ಲಿ ಡೆಂಗಿ ಪ್ರಕರಣ ಹೆಚ್ಚುತ್ತಿದೆ. ಇಂತಹ ಕಡೆ ಡೆಂಗಿ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ
ವರುಣ್ ಚೌಟ ಪಾಲಿಕೆ ಸದಸ್ಯ ಹೊಸಬೆಟ್ಟು ವಾರ್ಡ್‌
ವಾರ್ಡ್‌ ಮಟ್ಟದಲ್ಲಿ ತಂಡಗಳನ್ನು ರಚಿಸುವ ಮೂಲಕ ಪಾಲಿಕೆ ಡೆಂಗಿ ನಿಯಂತ್ರಣಕ್ಕೆ ಕ್ರಮವಹಿಸಿದೆ. ಜನರ ಸಹಕಾರ ಸಿಕ್ಕರೆ ಮಾತ್ರ ಡೆಂಗಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು
ಆನಂದ ಸಿ.ಎಲ್‌. ಪಾಲಿಕೆ ಆಯುಕ್ತ
ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚುತ್ತಿದೆ ಡೆಂಗಿ 
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪುತ್ತೂರು ಕಡಬ ಉಪ್ಪಿನಂಗಡಿಯಂತಹ ಗ್ರಾಮೀಣ ಪ್ರದೇಶಗಳಲ್ಲೂ ಶಂಕಿತ ಡೆಂಗಿ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಇವರಲ್ಲಿ ಬಹುತೇಕರು ಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ.  ಬಹುತೇಕ ಕಡೆ ಮಳೆಗಾಲ ಆರಂಭಗೊಂಡಿದ್ದರೂ ಚರಂಡಿ ದುರಸ್ತಿ ಕಾರ್ಯ ನಡೆದೇ ಇಲ್ಲ. ಇಂತಹ ಪ್ರದೇಶಗಳಲ್ಲಿ ಮಳೆನೀರು ಸಂಗ್ರಹಗೊಂಡು ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತಿವೆ. ಸುಳ್ಯ ತಾಲ್ಲೂಕಿನ  ಕೊಲ್ಲಮೊಗ್ರು ಹಾಗೂ ಕಲ್ಮಕಾರು ಗ್ರಾಮದಲ್ಲಿ ಶಂಕಿತ ಡೆಂಗಿ ಪ್ರಕರಣಗಳು ವರದಿಯಾಗಿವೆ. ಮೂಲ್ಕಿ ಕಟೀಲು ಕೆಮ್ರಾಲ್‌ ಪ್ರದೇಶದಲ್ಲೂ 20ಕ್ಕೂ ಹೆಚ್ಚು ಶಂಕಿತ ಡೆಂಗಿ ಪ್ರಕರಣಗಳು ವರದಿಯಾಗಿದ್ದವು. 
‘ಡ್ರೈ ಡೇ’– ಘೋಷಣೆಗಷ್ಟೇ ಸೀಮಿತ
‘ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು ಶುಕ್ರವಾರ ‘ಡ್ರೈ–ಡೇ’ಯನ್ನಾಗಿ ನಿರ್ವಹಿಸಬೇಕು. ಆದಿನ ಮನೆಯ ನೀರಿನ ತೊಟ್ಟಿಯ ನೀರನ್ನು ಖಾಲಿ ಮಾಡಿ ಶುಚಿಗೊಳಿಸಿ ಒಣಗಿಸಬೇಕು. ಸುತ್ತ ಮುತ್ತಲಿನ ಪರಿಸರದಲ್ಲಿ ಎಲ್ಲೂ ಶುದ್ಧ ನೀರು ನಿಲ್ಲದಂತೆ  ಎಚ್ಚರವಹಿಸಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿತ್ತು. ಆದರೆ ಅದಕ್ಕೆ ಸಾರ್ವಜನಿಕರಿಂದ ಸಿಕ್ಕ ಪ್ರತಿಕ್ರಿಯೆ ಅಷ್ಟಕ್ಕಷ್ಟೇ. ಬೆರಳೆಣಿಕೆಯ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಈ ಬಗ್ಗೆ ಜಾಗೃತಿ ಮೂಡಿಸುವ ಸಭೆಗಳನ್ನು ನಡೆಸಲಾಗಿದೆ. ಜನರಲ್ಲಿ ಈ ಬಗ್ಗೆ  ಜಾಗೃತಿ ಮೂಡಿಲ್ಲ’ ಎಂದು ಪಾಲಿಕೆ ಸದಸ್ಯರೊಬ್ಬರು ಬೇಸರ ವ್ಯಕ್ತಪಡಿಸಿದರು.   
ಸವಾಲಾದ ಖಾಲಿ ನಿವೇಶನಗಳು
ನಗರದ ಬಹುತೇಕ ಖಾಲಿ ನಿವೇಶನಗಳು ಜನ ಕದ್ದುಮುಚ್ಚಿ ಕಸ ಬಿಸಾಡುವ ತಾಣಗಳಾಗಿ ಪರಿವರ್ತನೆಗೊಂಡಿವೆ. ಇಲ್ಲಿ ಪ್ಲಾಸ್ಟಿಕ್ ಬಾಟಲಿ ಎಳನೀರಿನ ಚಿಪ್ಪು ಮುಂತಾದ ಕಸಗಳು ತಿಮಗಳಾನುಗಟ್ಟಲೆ ಹಾಗೆಯೇ ಬಿದ್ದಿರುತ್ತವೆ. ಅವುಗಳು ಸೊಳ್ಳೆಗಳ ಸಂತಾನೋತ್ಪಾದನೆಗೆ ಸೊಂಪಾದ ತಾಣಗಳಾಗಿಬಿಟ್ಟಿವೆ. ಇಂತಹ ಖಾಲಿ ನಿವೇಶನಗಳ ಮಾಲೀಕರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಪಾಲಿಕೆ ಸದಸ್ಯ ಮನೋಹರ ಕದ್ರಿ. ಕೆಲವು ಗೂಡಂಗಡಿಗಳು ಕಸವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಎಲ್ಲೆಂದರಲ್ಲಿ ಕಸ ಬಿಸಾಡುವ ಮೂಲಕ ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತಿದ್ದಾರೆ ಎಂದು ದೂರುತ್ತಾರೆ ಜಯಾನಂದ ಅಂಚನ್‌
ಪ್ಲೇಟ್‌ಲೆಟ್‌ಗೆ ಹೆಚ್ಚು ದರ ವಸೂಲಿ?
ಡೆಂಗಿ ರಕ್ತ ಪರೀಕ್ಷಗೆ ಹಾಗೂ ರೋಗಿಗಳಿಗೆ ನೀರುವ ರಕ್ತದ ಪ್ಲೇಟ್‌ಲೆಟ್‌ಗೆ ದುಬಾರಿ ದರ ವಿಧಿಸಬಾರದು ಎಂದು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೆ ಕೆಲವು ಆಸ್ಪತ್ರೆಗಳು ಪ್ಲೇಟ್‌ಲೆಟ್‌ಗೆ ಸರ್ಕಾರ ವಿಧಿಸಿದಷ್ಟೇ ದರ ವಸೂಲಿ ಮಾಡಿ ಅದನ್ನು ನೀಡುವುದರ ಸೇವಾ ಶುಲ್ಕವಾಗಿ ಹೆಚ್ಚಿನ ಹಣ ಪಡೆಯುತ್ತಿವೆ ಎಂಬ ದೂರುಗಳಿವೆ. ‘ಪ್ಲೇಟ್‌ಲೆಟ್‌ಗೆ ಹೆಚ್ಚು ದರ ವಿಧಿಸಿದ ಬಗ್ಗೆ ನಮಗೆ ದೂರು ಬಂದಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಿಪಿಎಲ್‌ ಕುಟುಂಬದ ರೋಗಿಗಳಿಗೆ ಉಚಿತವಾಗಿ ಪ್ಲೇಟ್‌ಲೆಟ್‌ ನೀಡಲಾಗುತ್ತದೆ. ಇತರರಿಗೆ ಯೂನಿಟ್‌ಗೆ ₹ 350ರಿಂದ ₹ 400 ದರ ವಿಧಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ₹ 500ರವರೆಗೆ ದರ ವಿಧಿಸುತ್ತಿವೆ’ ಎಂದು ಡಾ.ನವೀನಚಂದ್ರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT