<p><strong>ಮಂಗಳೂರು:</strong> ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹ ಪತ್ತೆಗಾಗಿ ಜಾಗ ಅಗೆಯುವ ಕಾರ್ಯ ಗುರುವಾರ ಸತತ ಮೂರನೇ ದಿನವೂ ಮುಂದುವರಿಯಿತು. </p><p>ಎಸ್ಐಟಿ ತಂಡದ ಜೊತೆ ಸುಮಾರು 20 ಕಾರ್ಮಿಕರು ನೇತ್ರಾವತಿ ನದಿ ಪಕ್ಕದ ಕಾಡಿನ ಒಳಗೆ ತೆರಳಿದ್ದಾರೆ.</p><p>ಈ ಪ್ರಕರಣದ ಸಾಕ್ಷಿ ದೂರುದಾರ ತೋರಿಸಿದ್ದ 13 ಜಾಗಗಳಲ್ಲಿ ನೇತ್ರಾವತಿ ನದಿ ಪಕ್ಕದ ದಟ್ಟ ಕಾಡಿನ ಒಳಗೆ ತೋರಿಸಿದ್ದ ಐದು ಕಡೆ ಈಗಾಗಲೇ ನೆಲವನ್ನು ಅಗೆಯಲಾಗಿದೆ. </p><p>ಮೃತದೇಹಗಳನ್ನು ಹೂತು ಹಾಕಿದ ಕುರುಹುಗಳು ಎಲ್ಲೂ ಪತ್ತೆಯಾಗಿರಲಿಲ್ಲ.</p><p>ದೂರುದಾರ ತೋರಿಸಿದ ಆರನೇ ಜಾಗದಲ್ಲಿ ಆತನ ಸಮ್ಮುಖದಲ್ಲೆ ನೆಲ ಅಗೆಯುವ ಈಗ ನಡೆಯುತ್ತಿದೆ. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ , ಎಸ್ಐಟಿಯ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಸ್ಥಳದಲ್ಲಿದ್ದು ಮಾರ್ಗದರ್ಶನ ಮಾಡುತ್ತಿದ್ದಾರೆ. </p><p>ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಹಾಗೂ ಡಿಐಜಿ ಎಂ.ಎನ್.ಅನುಚೇತ್ ಅವರೂ ಸ್ಥಳಕ್ಕಾಗಮಿಲಿದ್ದಾರೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.</p><p>ನೆಲ ಅಗೆಯುತ್ತಿದ್ದಂತೆ ನೀರಿನ ಒಸರು ಬರುತ್ತಿದೆ. ನೀರನ್ನು ತೆರವುಗೊಳಿಸಲು ಡೀಸೆಲ್ ಪಂಪ್ ಬಳಸಲಾಗುತ್ತಿದೆ. ನೆಲ ಅಗೆಯುವ ಯಂತ್ರವನ್ನೂ ಕಾಡಿನೊಳಗೆ ಒಯ್ಯಲಾಯಿತು.</p>.ಧರ್ಮಸ್ಥಳ ಪ್ರಕರಣ: ಎಲ್ಲೂ ಸಿಕ್ಕಿಲ್ಲ ಶವಗಳ ಅವಶೇಷ.ಧರ್ಮಸ್ಥಳ ಪ್ರಕರಣ | ಮಂಗಳೂರಲ್ಲಿ ಎಸ್ಐಟಿ ಕಚೇರಿ; ಸಹಾಯವಾಣಿ ಆರಂಭ.ಧರ್ಮಸ್ಥಳ ಪ್ರಕರಣ | ಮೊಹಾಂತಿ ಹೋದರೆ ಎಸ್ಐಟಿಗೆ ಹೊಸಬರ ನೇಮಕ: ಪರಮೇಶ್ವರ .ಧರ್ಮಸ್ಥಳ: ಜನರನ್ನು ತುದಿಗಾಲಿನಲ್ಲಿ ನಿಲ್ಲಿಸಿದ ಶೋಧ ಕಾರ್ಯ.ಧರ್ಮಸ್ಥಳ ಪ್ರಕರಣ: ದಟ್ಟ ಕಾನನದೊಳಗೆ ಎರಡನೇ ಜಾಗದಲ್ಲಿ ಉತ್ಖನನ ಆರಂಭ.ಧರ್ಮಸ್ಥಳ ಪ್ರಕರಣ: 8 ಅಡಿ ಆಳಕ್ಕೆ ಅಗೆದರೂ ಸಿಗದ ಕುರುಹು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹ ಪತ್ತೆಗಾಗಿ ಜಾಗ ಅಗೆಯುವ ಕಾರ್ಯ ಗುರುವಾರ ಸತತ ಮೂರನೇ ದಿನವೂ ಮುಂದುವರಿಯಿತು. </p><p>ಎಸ್ಐಟಿ ತಂಡದ ಜೊತೆ ಸುಮಾರು 20 ಕಾರ್ಮಿಕರು ನೇತ್ರಾವತಿ ನದಿ ಪಕ್ಕದ ಕಾಡಿನ ಒಳಗೆ ತೆರಳಿದ್ದಾರೆ.</p><p>ಈ ಪ್ರಕರಣದ ಸಾಕ್ಷಿ ದೂರುದಾರ ತೋರಿಸಿದ್ದ 13 ಜಾಗಗಳಲ್ಲಿ ನೇತ್ರಾವತಿ ನದಿ ಪಕ್ಕದ ದಟ್ಟ ಕಾಡಿನ ಒಳಗೆ ತೋರಿಸಿದ್ದ ಐದು ಕಡೆ ಈಗಾಗಲೇ ನೆಲವನ್ನು ಅಗೆಯಲಾಗಿದೆ. </p><p>ಮೃತದೇಹಗಳನ್ನು ಹೂತು ಹಾಕಿದ ಕುರುಹುಗಳು ಎಲ್ಲೂ ಪತ್ತೆಯಾಗಿರಲಿಲ್ಲ.</p><p>ದೂರುದಾರ ತೋರಿಸಿದ ಆರನೇ ಜಾಗದಲ್ಲಿ ಆತನ ಸಮ್ಮುಖದಲ್ಲೆ ನೆಲ ಅಗೆಯುವ ಈಗ ನಡೆಯುತ್ತಿದೆ. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ , ಎಸ್ಐಟಿಯ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಸ್ಥಳದಲ್ಲಿದ್ದು ಮಾರ್ಗದರ್ಶನ ಮಾಡುತ್ತಿದ್ದಾರೆ. </p><p>ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಹಾಗೂ ಡಿಐಜಿ ಎಂ.ಎನ್.ಅನುಚೇತ್ ಅವರೂ ಸ್ಥಳಕ್ಕಾಗಮಿಲಿದ್ದಾರೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.</p><p>ನೆಲ ಅಗೆಯುತ್ತಿದ್ದಂತೆ ನೀರಿನ ಒಸರು ಬರುತ್ತಿದೆ. ನೀರನ್ನು ತೆರವುಗೊಳಿಸಲು ಡೀಸೆಲ್ ಪಂಪ್ ಬಳಸಲಾಗುತ್ತಿದೆ. ನೆಲ ಅಗೆಯುವ ಯಂತ್ರವನ್ನೂ ಕಾಡಿನೊಳಗೆ ಒಯ್ಯಲಾಯಿತು.</p>.ಧರ್ಮಸ್ಥಳ ಪ್ರಕರಣ: ಎಲ್ಲೂ ಸಿಕ್ಕಿಲ್ಲ ಶವಗಳ ಅವಶೇಷ.ಧರ್ಮಸ್ಥಳ ಪ್ರಕರಣ | ಮಂಗಳೂರಲ್ಲಿ ಎಸ್ಐಟಿ ಕಚೇರಿ; ಸಹಾಯವಾಣಿ ಆರಂಭ.ಧರ್ಮಸ್ಥಳ ಪ್ರಕರಣ | ಮೊಹಾಂತಿ ಹೋದರೆ ಎಸ್ಐಟಿಗೆ ಹೊಸಬರ ನೇಮಕ: ಪರಮೇಶ್ವರ .ಧರ್ಮಸ್ಥಳ: ಜನರನ್ನು ತುದಿಗಾಲಿನಲ್ಲಿ ನಿಲ್ಲಿಸಿದ ಶೋಧ ಕಾರ್ಯ.ಧರ್ಮಸ್ಥಳ ಪ್ರಕರಣ: ದಟ್ಟ ಕಾನನದೊಳಗೆ ಎರಡನೇ ಜಾಗದಲ್ಲಿ ಉತ್ಖನನ ಆರಂಭ.ಧರ್ಮಸ್ಥಳ ಪ್ರಕರಣ: 8 ಅಡಿ ಆಳಕ್ಕೆ ಅಗೆದರೂ ಸಿಗದ ಕುರುಹು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>