<p><strong>ಮೂಲ್ಕಿ (ದಕ್ಷಿಣ ಕನ್ನಡ):</strong> ದಸರೆಯ ಸಂಭ್ರಮದಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತ ಮಹಿಳೆಯರು ಪ್ರಸಾದ ರೂಪದಲ್ಲಿ ‘ಅಮ್ಮ’ನ ಸೀರೆ ಪಡೆದು ಧನ್ಯರಾದರು.</p>.<p>‘ಅಮ್ಮ’ನ ಸೀರೆ ಪ್ರಸಾದಕ್ಕಾಗಿ ಮಹಿಳೆಯರು ಮಧ್ಯಾಹ್ನ 3 ಗಂಟೆಗೇ ಸರತಿ ಸಾಲಿನಲ್ಲಿ ನಿಂತಿದ್ದರು. ತಡರಾತ್ರಿಯ ವರೆಗೂ ಸೀರೆಗಳನ್ನು ವಿತರಿಸಲಾಯಿತು.</p>.<p>ಪ್ರತಿ ವರ್ಷ ದಸರೆ ಸಂದರ್ಭದಲ್ಲಿ ಲಲಿತ ಪಂಚಮಿಯ ದಿನ ಸೀರೆಗಳ ವಿತರಣೆ ನಡೆಯುತ್ತದೆ. ಇದಕ್ಕಾಗಿ ನಾನಾ ಕಡೆಗಳಿಂದ ಭಕ್ತರು ಬರುತ್ತಾರೆ. ಈ ಬಾರಿಯೂ ಭಕ್ತರ ಪ್ರವಾಹ ಹರಿದು ಬಂತು.</p>.<p>ಮೊದಲು ಅನ್ನಪ್ರಸಾದ ನೀಡಿ, ಅದನ್ನು ಸ್ವೀಕರಿಸಿ ಹೋಗುವಾಗ ಸೀರೆಗಳನ್ನು ವಿತರಿಸಲಾಯಿತು. ನೂಕುನುಗ್ಗಲು ಆಗದಂತೆ ದೇವಸ್ಥಾನದ ಮುಂಭಾಗದಲ್ಲಿ ಅಟ್ಟಳಿಗೆ ಅಳವಡಿಸಲಾಗಿತ್ತು. ಅದರ ಮೂಲಕ ಭಕ್ತರು ನೇರವಾಗಿ ಅನ್ನದಾನದ ಛತ್ರದತ್ತ ತೆರಳಿದರು.</p>.<p>‘ಹಿಂದೆ, ಹರಕೆ ರೂಪದಲ್ಲಿ ಬಂದ ಸೀರೆಗಳನ್ನು ಕೊಡಲಾಗುತ್ತಿತ್ತು. ಈಗ ಸಮಾನತೆ ಇರಬೇಕು ಎಂದು ಹೊಸದಾಗಿ ಖರೀದಿಸಿ ವಿತರಿಸಲಾಗುತ್ತಿದೆ. ಈ ಬಾರಿ 25 ಸಾವಿರ ಸೀರೆ ಖರೀದಿಸಲಾಗಿದೆ. ಸೀರೆಯನ್ನು ಎರಡು ಭಾಗ ಮಾಡಿ ರವಿಕೆ ಕಣ ಎಂದು ಕೊಡುವ ಪದ್ಧತಿ ಈಗ ಕೈಬಿಡಲಾಗಿದೆ’ ಎಂದು ದೇವಸ್ಥಾನದ ಆನುವಂಶಿಕ ಪ್ರಧಾನ ಅರ್ಚಕ ಹರಿನಾರಾಯಣ ಅಸ್ರಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಲ್ಕಿ (ದಕ್ಷಿಣ ಕನ್ನಡ):</strong> ದಸರೆಯ ಸಂಭ್ರಮದಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತ ಮಹಿಳೆಯರು ಪ್ರಸಾದ ರೂಪದಲ್ಲಿ ‘ಅಮ್ಮ’ನ ಸೀರೆ ಪಡೆದು ಧನ್ಯರಾದರು.</p>.<p>‘ಅಮ್ಮ’ನ ಸೀರೆ ಪ್ರಸಾದಕ್ಕಾಗಿ ಮಹಿಳೆಯರು ಮಧ್ಯಾಹ್ನ 3 ಗಂಟೆಗೇ ಸರತಿ ಸಾಲಿನಲ್ಲಿ ನಿಂತಿದ್ದರು. ತಡರಾತ್ರಿಯ ವರೆಗೂ ಸೀರೆಗಳನ್ನು ವಿತರಿಸಲಾಯಿತು.</p>.<p>ಪ್ರತಿ ವರ್ಷ ದಸರೆ ಸಂದರ್ಭದಲ್ಲಿ ಲಲಿತ ಪಂಚಮಿಯ ದಿನ ಸೀರೆಗಳ ವಿತರಣೆ ನಡೆಯುತ್ತದೆ. ಇದಕ್ಕಾಗಿ ನಾನಾ ಕಡೆಗಳಿಂದ ಭಕ್ತರು ಬರುತ್ತಾರೆ. ಈ ಬಾರಿಯೂ ಭಕ್ತರ ಪ್ರವಾಹ ಹರಿದು ಬಂತು.</p>.<p>ಮೊದಲು ಅನ್ನಪ್ರಸಾದ ನೀಡಿ, ಅದನ್ನು ಸ್ವೀಕರಿಸಿ ಹೋಗುವಾಗ ಸೀರೆಗಳನ್ನು ವಿತರಿಸಲಾಯಿತು. ನೂಕುನುಗ್ಗಲು ಆಗದಂತೆ ದೇವಸ್ಥಾನದ ಮುಂಭಾಗದಲ್ಲಿ ಅಟ್ಟಳಿಗೆ ಅಳವಡಿಸಲಾಗಿತ್ತು. ಅದರ ಮೂಲಕ ಭಕ್ತರು ನೇರವಾಗಿ ಅನ್ನದಾನದ ಛತ್ರದತ್ತ ತೆರಳಿದರು.</p>.<p>‘ಹಿಂದೆ, ಹರಕೆ ರೂಪದಲ್ಲಿ ಬಂದ ಸೀರೆಗಳನ್ನು ಕೊಡಲಾಗುತ್ತಿತ್ತು. ಈಗ ಸಮಾನತೆ ಇರಬೇಕು ಎಂದು ಹೊಸದಾಗಿ ಖರೀದಿಸಿ ವಿತರಿಸಲಾಗುತ್ತಿದೆ. ಈ ಬಾರಿ 25 ಸಾವಿರ ಸೀರೆ ಖರೀದಿಸಲಾಗಿದೆ. ಸೀರೆಯನ್ನು ಎರಡು ಭಾಗ ಮಾಡಿ ರವಿಕೆ ಕಣ ಎಂದು ಕೊಡುವ ಪದ್ಧತಿ ಈಗ ಕೈಬಿಡಲಾಗಿದೆ’ ಎಂದು ದೇವಸ್ಥಾನದ ಆನುವಂಶಿಕ ಪ್ರಧಾನ ಅರ್ಚಕ ಹರಿನಾರಾಯಣ ಅಸ್ರಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>