ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರ್ವ: ಏಡನ್ ಕ್ರಿಸ್‌ಗೆ ರಕ್ಷಣಾ ಸಚಿವರಿಂದ ಗೌರವ

Last Updated 27 ಜನವರಿ 2023, 5:35 IST
ಅಕ್ಷರ ಗಾತ್ರ

ಶಿರ್ವ: ಗಣರಾಜ್ಯೋತ್ಸವದ ಮುನ್ನಾದಿನ ದೆಹಲಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶಿರ್ವ ಡಾನ್ ಬಾಸ್ಕೊ ಇಂಗ್ಲಿಷ್‌ ಮಾಧ್ಯಮ ಶಾಲಾ 5ನೇ ತರಗತಿ ವಿದ್ಯಾರ್ಥಿ ಏಡನ್ ಕ್ರಿಸ್ ದಾಂತಿಗೆ ಅಭಿನಂದನಾ ಪತ್ರದ ಜೊತೆಗೆ ₹10ಸಾವಿರ ನಗದು ಪುರಸ್ಕಾರ ನೀಡಿ ಸನ್ಮಾನಿಸಿದರು.

ನ.22ರಂದು ರಕ್ಷಣಾ ಸಚಿವಾಲಯವು ಹಮ್ಮಿಕೊಂಡಿದ್ದ ‘ವೀರ್ ಗಾಥಾ -2’ ಕಾರ್ಯಕ್ರಮದ ಭಾಗವಾಗಿ ವೀರಯೋಧರ ಜೀವನದ ಬಗ್ಗೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಏಡನ್ ಕ್ರಿಸ್ ದಾಂತಿ ವಿಕ್ರಮ್ ಭಾತ್ರಾ ಅವರ ಜೀವನದ ಬಗ್ಗೆ ಹಿಂದಿ ಕವನ ರಚಿಸಿದ್ದರು. 25 ವಿದ್ಯಾರ್ಥಿಗಳಲ್ಲಿ ಏಡನ್ ಕ್ರಿಸ್ ಒಬ್ಬರಾಗಿ ಆಯ್ಕೆಯಾಗಿದ್ದರು. ಈತ ಸಂತೋಷ್ ದಾಂತಿ, ಜೋಯ್ಸ್ ದಂಪತಿ ಪುತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT