ಆಟೊರಿಕ್ಷಾದವರು ನಮ್ಮ ಪರಿಚಯದವರೇ. ಅವರು ತಲೆ ಕೂದಲೆಲ್ಲ ಸುಟ್ಟು ಹೋಗಿದೆ. ಅವರನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ಕಳುಹಿಸಿದ್ದು ನಾನೆ. ರಿಕ್ಷಾದ ಗ್ಯಾಸ್ ಸಿಲಿಂಡರ್ ಸ್ಫೋಟಿಸಿರಬಹುದು ಎಂದು ಮೊದಲು ಭಾವಿಸಿದ್ದೆವು. ಆದರೆ, ನಂತರ ನೋಡುವಾಗ ಕುಕ್ಕರ್, ಬೋಲ್ಟ್, ನಟ್ಟು, ಬ್ಯಾಟರಿ ಹಾಗೂ ವೈರ್ಗಳುರಿಕ್ಷಾದಲ್ಲಿದ್ದವು. ಸಂಶಯ ಬಂದು ಕಂಕನಾಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದೆಎಂದು ಅವರು ತಿಳಿಸಿದರು.
‘ರಿಕ್ಷಾ ಚಾಲಕ ಉಜ್ಜೋಡಿಯವರು. ಪ್ರಯಾಣಿಕನನ್ನು ಕಂಕನಾಡಿ ಜಂಕ್ಷನ್ ರೈಲು ನಿಲ್ದಾಣದಿಂದ ಕರೆತಂದಿದ್ದಾಗಿ ತಿಳಿಸಿದ್ದರು. ಅವರು ಎಲ್ಲಿಗೆ ಹೋಗುತ್ತಿದ್ದರು ಎಂಬುದು ಗೊತ್ತಿಲ್ಲ’ಎಂದರು.