ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಅನೇಕ ದಶಕಗಳಿಂದ ಕಪ್ಪೆಗಳ ಕುರಿತ ಅಧ್ಯಯನ ನಡೆಯುತ್ತಿದೆ. ಘಟ್ಟದ ಹೊರಗೆ ವಿಶೇಷವಾಗಿ ಕರಾವಳಿಯಲ್ಲಿ ಒತ್ತು ಸಿಕ್ಕಿರುವುದು ಕಡಿಮೆ. ಆದ್ದರಿಂದ ಈಗಿನ ಬೆಳವಣಿಗೆ ಆಶಾದಾಯಕ.
ಅರ್ಪಿತಾ ಜಾಯ್, ಸಂಶೋಧಕಿ
ಕೆರೆ ಜೀರ್ಣೋದ್ಧಾರದ ಹೆಸರಿನಲ್ಲಿ ಒಳಗಿನದ್ದೆಲ್ಲವನ್ನು ತೆಗೆದು ಸ್ವಚ್ಛ ಮಾಡಿ ಬದಿಗೆ ಕಲ್ಲು ಕಟ್ಟಿ ಸುಂದರಗೊಳಿಸುತ್ತಾರೆ. ಇದು ಅಲ್ಲಿನ ಸ್ಥಳೀಯ ಪ್ರಬೇಧಗಳಿಗೆ ಮಾರಕವಾಗುತ್ತದೆ. ಇಂಥ ಅಂಶಗಳನ್ನು ಗಮನಿಸಬೇಕಾದ ತುರ್ತು ಇದೆ.