<p><strong>ಕಾಸರಗೋಡು</strong>: ಇಲ್ಲಿನ ವಿದ್ಯಾನಗರದ ನಗರಸಭೆ ಕ್ರೀಡಾಂಗಣ ರಸ್ತೆ ಈಗ ವೀಕ್ಷಕ ವಿವರಣೆಕಾರ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅವರ ಹೆಸರಿನಲ್ಲಿ ಪ್ರಸಿದ್ಧಿ ಗಳಿಸಿದೆ.</p>.<p>ಶುಕ್ರವಾರ ಸಂಜೆ ನಡೆದ ಸಂಭ್ರಮದ ಸಮಾರಂಭದಲ್ಲಿ ತಮ್ಮ ಹೆಸರಿನ ರಸ್ತೆಯನ್ನು ಗಾವಸ್ಕರ್ ಉದ್ಘಾಟಿಸಿದರು. ನಂತರ ಚೆಟ್ಟಂಗುಳಿ ರಾಯಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪೌರಸನ್ಮಾನ ಸ್ವೀಕರಿಸಿದರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನಾನು ಜನಿಸಿ ಬೆಳೆದ ಮುಂಬಯಿಯಲ್ಲಿ ಕೂಡ ರಸ್ತೆಗೆ ನನ್ನ ಹೆಸರು ಇರಿಸಲಿಲ್ಲ. ಕಾಸರಗೋಡಿನ ರಸ್ತೆಯೊಂದು ಕ್ರೀಡಾಪಟುವಿನ ಹೆಸರಿನಲ್ಲಿ ಗುರುತಿಸಿಕೊಂಡು ಗಮನ ಸೆಳೆದಿದೆ’ ಎಂದರು.</p>.<p>‘ಉತ್ತಮ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದ ನಾಡು ಕೇರಳ. ಹೀಗಾಗಿ ಈ ರಾಜ್ಯದ ಕುರಿತು ನನಗೆ ಅಪಾರ ಗೌರವವಿದೆ ’ ಎಂದು ಅವರು ಹೇಳಿದರು.</p>.<p>ಮಾದಕ ಪದಾರ್ಥ ಮುಕ್ತ ರಾಜ್ಯಕ್ಕಾಗಿ ಕೇರಳ ಪೊಲೀಸರು ನಡೆಸುತ್ತಿರುವ ಅಭಿಯಾನದ ಲಾಂಛನವನ್ನು ಗಾವಸ್ಕರ್ ಬಿಡುಗಡೆ ಮಾಡಿದರು.</p>.<p>ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಸೈದ್ ಅಬ್ದುಲ್ ಖಾದರ್ ಅಭಿನಂದನಾ ನುಡಿಗಳನ್ನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಾಲಕೃಷ್ಣನ್ ನಾಯರ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಸರಗೋಡು</strong>: ಇಲ್ಲಿನ ವಿದ್ಯಾನಗರದ ನಗರಸಭೆ ಕ್ರೀಡಾಂಗಣ ರಸ್ತೆ ಈಗ ವೀಕ್ಷಕ ವಿವರಣೆಕಾರ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅವರ ಹೆಸರಿನಲ್ಲಿ ಪ್ರಸಿದ್ಧಿ ಗಳಿಸಿದೆ.</p>.<p>ಶುಕ್ರವಾರ ಸಂಜೆ ನಡೆದ ಸಂಭ್ರಮದ ಸಮಾರಂಭದಲ್ಲಿ ತಮ್ಮ ಹೆಸರಿನ ರಸ್ತೆಯನ್ನು ಗಾವಸ್ಕರ್ ಉದ್ಘಾಟಿಸಿದರು. ನಂತರ ಚೆಟ್ಟಂಗುಳಿ ರಾಯಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪೌರಸನ್ಮಾನ ಸ್ವೀಕರಿಸಿದರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನಾನು ಜನಿಸಿ ಬೆಳೆದ ಮುಂಬಯಿಯಲ್ಲಿ ಕೂಡ ರಸ್ತೆಗೆ ನನ್ನ ಹೆಸರು ಇರಿಸಲಿಲ್ಲ. ಕಾಸರಗೋಡಿನ ರಸ್ತೆಯೊಂದು ಕ್ರೀಡಾಪಟುವಿನ ಹೆಸರಿನಲ್ಲಿ ಗುರುತಿಸಿಕೊಂಡು ಗಮನ ಸೆಳೆದಿದೆ’ ಎಂದರು.</p>.<p>‘ಉತ್ತಮ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದ ನಾಡು ಕೇರಳ. ಹೀಗಾಗಿ ಈ ರಾಜ್ಯದ ಕುರಿತು ನನಗೆ ಅಪಾರ ಗೌರವವಿದೆ ’ ಎಂದು ಅವರು ಹೇಳಿದರು.</p>.<p>ಮಾದಕ ಪದಾರ್ಥ ಮುಕ್ತ ರಾಜ್ಯಕ್ಕಾಗಿ ಕೇರಳ ಪೊಲೀಸರು ನಡೆಸುತ್ತಿರುವ ಅಭಿಯಾನದ ಲಾಂಛನವನ್ನು ಗಾವಸ್ಕರ್ ಬಿಡುಗಡೆ ಮಾಡಿದರು.</p>.<p>ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಸೈದ್ ಅಬ್ದುಲ್ ಖಾದರ್ ಅಭಿನಂದನಾ ನುಡಿಗಳನ್ನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಾಲಕೃಷ್ಣನ್ ನಾಯರ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>