ಮಿಜಾರುಗುತ್ತು ಶತಾಯುಷಿ ಆನಂದ ಆಳ್ವ ಸ್ಮರಣಾರ್ಥ ಇಲ್ಲಿನ ವಿದ್ಯಾಗಿರಿಯಲ್ಲಿ ಮುಂಡ್ರುದೆಗುತ್ತು ಕೆ.ಅಮರನಾಥ ಶೆಟ್ಟಿ ಆವರಣದಲ್ಲಿ ‘ಪ್ರದರ್ಶನ ಮತ್ತು ಮಾರಾಟ ಮಹಾಮೇಳ’ ಏರ್ಪಡಿಸಲಾಗಿದೆ. ಇಲ್ಲಿರುವ ಕೃಷಿಮೇಳ, ಆಹಾರ ಮೇಳ, ಫಲಫುಷ್ಪ ಪ್ರದರ್ಶನ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿಗಳ ಮತ್ತು ಛಾಯಾಚಿತ್ರಗಳ ಪ್ರದರ್ಶನ ಕಣ್ಣಿಗೆ ಆನಂದವನ್ನು ನೀಡುವುದರ ಜೊತೆಗೆ ನಾಲಗೆಯ ಚಪಲವನ್ನು ತೀರಿಸಿಕೊಳ್ಳುವ ಅವಕಾಶವನ್ನೂ ಒದಗಿಸಿವೆ.