‘ಹಾರ್ಟ್ ಬೀಟ್’ ಕೃತಿಯೊಂದಿಗೆ ಒಟ್ಟು ಏಳು ಅನುವಾದ ಕೃತಿಗಳನ್ನು ತರುವ ಮೂಲಕ ತುಳು ಭಾಷೆ, ಸಂಸ್ಕೃತಿಗೆ ಜಾಗತಿಕ ಮನ್ನಣೆ ದೊರಕಿಸುವ ಪ್ರಯತ್ನ ಮಾಡಿರುವುದು ಮಹತ್ತರ ಕಾರ್ಯವಾಗಿದೆ. ಅನುವಾದ ಕಾರ್ಯ ಅಷ್ಟು ಸರಳವಲ್ಲ. ಓದುಗನಿಗೆ ಬೇಕಾದ ವಾತಾವರಣದ ಚೌಕಟ್ಟನ್ನು ಅನುವಾದಕರು ಆರಂಭದಲ್ಲಿಯೇ ಮಾಡಿರಬೇಕಾಗುತ್ತದೆ. ಪ್ರೊ.ಸುರೇಂದ್ರರಾವ್ ಹಾಗೂ ಪ್ರೊ. ಚಿನ್ನಪ್ಪ ಗೌಡ ಅವರು ಪ್ರತಿಯೊಂದು ಶಬ್ದವನ್ನು ಅನುಭವಿಸಿಯೇ ಅನುವಾದ ಮಾಡಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ’ ಎಂದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಪ್ರಸಾರಂಗದ ಮೂಲಕ ಮೌಲಿಕ ಕೃತಿಗಳನ್ನು ಪ್ರಕಟಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಪ್ರಸಾರಾಂಗದ ಕೃತಿಗಳನ್ನು ಆನ್ಲೈನ್ ಮೂಲಕ ಮಾರಾಟಕ್ಕೆ ಅವಕಾಶ ಕಲ್ಪಿಸುವ ಯೋಚನೆಯಿದೆ ಎಂದರು.