ಪಲ್ಲೋಡಿ ಜ್ಞಾನಭಾರತಿ ಶಿಶುಮಂದಿರದಲ್ಲಿ ಸಭಾ ಕಾರ್ಯಕ್ರಮ ಜರಗಿತು. ಉಪ ವಲಯ ಅರಣ್ಯಧಿಕಾರಿ ಕೆ ಸಂತೋಷ್ ರೈ ಅವರನ್ನು ಸನ್ಮಾನಿಸಲಾಯಿತು. ಉಳ್ಳಾಕುಲು ಕಲಾರಂಗದ ಅಧ್ಯಕ್ಷ ಕವನ್ ಪಲ್ಲೋಡಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ದೇರಾಜೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ, ಕಾರ್ಯದರ್ಶಿ ಪ್ರದೀಪ್ ಪಲ್ಲೋಡಿ, ಫಲಾನುಭವಿ ಕಾಂತು ಕಲ್ಮಕಾರು ಇದ್ದರು. ರಾಧಾಕೃಷ್ಣ ಪಲ್ಲೋಡಿ ಸ್ವಾಗತಿಸಿದರು. ಸಂದೀಪ್ ಪಲ್ಲೋಡಿ, ಪ್ರಕಾಶ್ ಜಾಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಿಖಿತ್ ಪಲ್ಲೋಡಿ ವಂದಿಸಿದರು.