<p><strong>ಮಂಗಳೂರು:</strong> ರಾಜ್ಯದ 5,307 ಸರ್ಕಾರಿ ಪ್ರೌಢಶಾಲೆಗಳ ಸುಮಾರು 1.59 ಕೋಟಿ ವಿದ್ಯಾರ್ಥಿನಿಯರು ಸ್ವ–ರಕ್ಷಣೆಯ ಕೌಶಲ ಕಲಿಕೆಗೆ ಸಿದ್ಧರಾಗಿದ್ದಾರೆ. ಇದೇ ತಿಂಗಳಿನಲ್ಲಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಕರಾಟೆ ತರಬೇತಿ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದೆ. </p>.<p>ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕದ ಮೂಲಕ ‘ರಾಣಿ ಲಕ್ಷ್ಮಿಬಾಯಿ ಆತ್ಮರಕ್ಷಣಾ ಪ್ರಶಿಕ್ಷಣ’ ತರಬೇತಿಯನ್ನು 35 ಶೈಕ್ಷಣಿಕ ಜಿಲ್ಲೆಗಳಲ್ಲಿ ನಡೆಸಲು ಸರ್ಕಾರ ₹1.59 ಕೋಟಿ ಅನುದಾನ ನಿಗದಿಪಡಿಸಿದೆ.</p>.<p>ಸ್ಥಳೀಯ ಕರಾಟೆ ಪರಿಣತರು ಎಂಟು, ಒಂಬತ್ತು ಮತ್ತು ಎಸ್ಸೆಸ್ಸೆಲ್ಸಿ ತರಗತಿಯ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ತರಬೇತಿ ನೀಡಲಿದ್ದಾರೆ. ಪ್ರತಿ ಶಾಲೆಯಲ್ಲಿ 10 ಅವಧಿಗಳಲ್ಲಿ ತರಬೇತಿಗಳು ನಡೆಯುತ್ತವೆ. ತರಬೇತುದಾರರಿಗೆ ಗೌರವಧನ ನೀಡಲು ಪ್ರತಿ ಶಾಲೆಗೆ ₹3,000 ನೀಡಲಾಗುತ್ತದೆ. </p>.<p>‘ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ವೃದ್ಧಿಸುವ, ಸ್ವರಕ್ಷಣಾ ಕೌಶಲ ಬೆಳೆಸಿ, ಆತ್ಮವಿಶ್ವಾಸ ಹೆಚ್ಚಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಬರುವ ವಿದ್ಯಾರ್ಥಿನಿಯರು, ಒಬ್ಬಂಟಿಯಾಗಿ ಬರುವಾಗ ಯಾರಾದರೂ ಆಕ್ರಮಣ ಮಾಡಲು ಬಂದರೆ ಸ್ವರಕ್ಷಣೆಗೆ ಇಂತಹ ತರಬೇತಿ ಸಹಕಾರಿ’ ಎಂದು ಡಿಡಿಪಿಐ ದಯಾನಂದ ನಾಯಕ್ ತಿಳಿಸಿದರು.</p>.<p>‘ತರಬೇತಿ ನೀಡುವ ಪೂರ್ವದಲ್ಲಿ ವಿದ್ಯಾರ್ಥಿನಿಯರು ದೈಹಿಕವಾಗಿ ಆರೋಗ್ಯವಾಗಿರುವುದನ್ನು ದೃಢಪಡಿಸಿಕೊಳ್ಳಲು ಸೂಚಿಸಲಾಗಿದೆ. ಅನಾರೋಗ್ಯವಿರುವ ಹೆಣ್ಣು<br>ಮಕ್ಕಳನ್ನು ತರಬೇತಿಯಿಂದ ಹೊರಗಿಡಲಾಗುವುದು’ ಎಂದು ಪ್ರತಿಕ್ರಿಯಿಸಿದರು.</p>.<p>ತರಬೇತಿಯಲ್ಲಿ ಏನಿರಲಿದೆ?: ಕೌಶಲ ತರಬೇತಿಗಾಗಿ ಪ್ರತ್ಯೇಕ ಪಠ್ಯಕ್ರಮ ರೂಪಿಸಲಾಗಿದೆ.</p>.<p> ಆಕ್ರಮಣ ಮಾಡಿದರೆ ಪ್ರತಿರೋಧ ತೋರುವ ಫೇಸ್ ಪಂಚ್, ಲೋವರ್ ಪಂಚ್ ಹೀಗೆ ಪ್ರತಿ ಆಕ್ರಮಣದ ತಂತ್ರಗಳು, ಕಾಲಿನಿಂದ ಕಿಕ್ ಮಾಡುವ, ರಕ್ಷಣಾತ್ಮಕ ತಂತ್ರಗಳು, ಕರಾಟೆಯ ಕಾಟಾ ಮಾದರಿ, ಪಂಚಿಂಗ್ ತಂತ್ರಗಳನ್ನು ಕರಾಟೆ ತರಬೇತುದಾರರು ವಿದ್ಯಾರ್ಥಿನಿಯರಿಗೆ ಕಲಿಸುತ್ತಾರೆ.</p>.<p>ಆಯಾ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಕೂಡ ತರಬೇತಿಯಲ್ಲಿ ಭಾಗಿಯಾಗಲಿದ್ದಾರೆ. ನಂತರ <br>ವಿದ್ಯಾರ್ಥಿನಿಯರು ಕಲಿತ ಕೌಶಲಗಳನ್ನು ಮರೆಯದೇ ಮುಂದುವರಿಸಿಕೊಂಡು ಹೋಗಲು ಅವರು ನಿಗಾವಹಿಸಲಿದ್ದಾರೆ.</p>.<p>ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟು ಶೈಕ್ಷಣಿಕ ಬ್ಲಾಕ್ಗಳಿಂದ ಒಟ್ಟು 10,840 ವಿದ್ಯಾರ್ಥಿನಿಯರು ಕರಾಟೆ ಕೌಶಲ ಕಲಿಯಲಿದ್ದಾರೆ.</p>.<blockquote>35 ಶೈಕ್ಷಣಿಕ ಜಿಲ್ಲೆಗಳಲ್ಲಿ ಅನುಷ್ಠಾನ 1.59 ಕೋಟಿ ವಿದ್ಯಾರ್ಥಿನಿಯರಿಗೆ ತರಬೇತಿ ಕರಾಟೆ ಪರಿಣತರಿಂದ ಮಾರ್ಗದರ್ಶನ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ರಾಜ್ಯದ 5,307 ಸರ್ಕಾರಿ ಪ್ರೌಢಶಾಲೆಗಳ ಸುಮಾರು 1.59 ಕೋಟಿ ವಿದ್ಯಾರ್ಥಿನಿಯರು ಸ್ವ–ರಕ್ಷಣೆಯ ಕೌಶಲ ಕಲಿಕೆಗೆ ಸಿದ್ಧರಾಗಿದ್ದಾರೆ. ಇದೇ ತಿಂಗಳಿನಲ್ಲಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಕರಾಟೆ ತರಬೇತಿ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದೆ. </p>.<p>ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕದ ಮೂಲಕ ‘ರಾಣಿ ಲಕ್ಷ್ಮಿಬಾಯಿ ಆತ್ಮರಕ್ಷಣಾ ಪ್ರಶಿಕ್ಷಣ’ ತರಬೇತಿಯನ್ನು 35 ಶೈಕ್ಷಣಿಕ ಜಿಲ್ಲೆಗಳಲ್ಲಿ ನಡೆಸಲು ಸರ್ಕಾರ ₹1.59 ಕೋಟಿ ಅನುದಾನ ನಿಗದಿಪಡಿಸಿದೆ.</p>.<p>ಸ್ಥಳೀಯ ಕರಾಟೆ ಪರಿಣತರು ಎಂಟು, ಒಂಬತ್ತು ಮತ್ತು ಎಸ್ಸೆಸ್ಸೆಲ್ಸಿ ತರಗತಿಯ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ತರಬೇತಿ ನೀಡಲಿದ್ದಾರೆ. ಪ್ರತಿ ಶಾಲೆಯಲ್ಲಿ 10 ಅವಧಿಗಳಲ್ಲಿ ತರಬೇತಿಗಳು ನಡೆಯುತ್ತವೆ. ತರಬೇತುದಾರರಿಗೆ ಗೌರವಧನ ನೀಡಲು ಪ್ರತಿ ಶಾಲೆಗೆ ₹3,000 ನೀಡಲಾಗುತ್ತದೆ. </p>.<p>‘ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ವೃದ್ಧಿಸುವ, ಸ್ವರಕ್ಷಣಾ ಕೌಶಲ ಬೆಳೆಸಿ, ಆತ್ಮವಿಶ್ವಾಸ ಹೆಚ್ಚಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಬರುವ ವಿದ್ಯಾರ್ಥಿನಿಯರು, ಒಬ್ಬಂಟಿಯಾಗಿ ಬರುವಾಗ ಯಾರಾದರೂ ಆಕ್ರಮಣ ಮಾಡಲು ಬಂದರೆ ಸ್ವರಕ್ಷಣೆಗೆ ಇಂತಹ ತರಬೇತಿ ಸಹಕಾರಿ’ ಎಂದು ಡಿಡಿಪಿಐ ದಯಾನಂದ ನಾಯಕ್ ತಿಳಿಸಿದರು.</p>.<p>‘ತರಬೇತಿ ನೀಡುವ ಪೂರ್ವದಲ್ಲಿ ವಿದ್ಯಾರ್ಥಿನಿಯರು ದೈಹಿಕವಾಗಿ ಆರೋಗ್ಯವಾಗಿರುವುದನ್ನು ದೃಢಪಡಿಸಿಕೊಳ್ಳಲು ಸೂಚಿಸಲಾಗಿದೆ. ಅನಾರೋಗ್ಯವಿರುವ ಹೆಣ್ಣು<br>ಮಕ್ಕಳನ್ನು ತರಬೇತಿಯಿಂದ ಹೊರಗಿಡಲಾಗುವುದು’ ಎಂದು ಪ್ರತಿಕ್ರಿಯಿಸಿದರು.</p>.<p>ತರಬೇತಿಯಲ್ಲಿ ಏನಿರಲಿದೆ?: ಕೌಶಲ ತರಬೇತಿಗಾಗಿ ಪ್ರತ್ಯೇಕ ಪಠ್ಯಕ್ರಮ ರೂಪಿಸಲಾಗಿದೆ.</p>.<p> ಆಕ್ರಮಣ ಮಾಡಿದರೆ ಪ್ರತಿರೋಧ ತೋರುವ ಫೇಸ್ ಪಂಚ್, ಲೋವರ್ ಪಂಚ್ ಹೀಗೆ ಪ್ರತಿ ಆಕ್ರಮಣದ ತಂತ್ರಗಳು, ಕಾಲಿನಿಂದ ಕಿಕ್ ಮಾಡುವ, ರಕ್ಷಣಾತ್ಮಕ ತಂತ್ರಗಳು, ಕರಾಟೆಯ ಕಾಟಾ ಮಾದರಿ, ಪಂಚಿಂಗ್ ತಂತ್ರಗಳನ್ನು ಕರಾಟೆ ತರಬೇತುದಾರರು ವಿದ್ಯಾರ್ಥಿನಿಯರಿಗೆ ಕಲಿಸುತ್ತಾರೆ.</p>.<p>ಆಯಾ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಕೂಡ ತರಬೇತಿಯಲ್ಲಿ ಭಾಗಿಯಾಗಲಿದ್ದಾರೆ. ನಂತರ <br>ವಿದ್ಯಾರ್ಥಿನಿಯರು ಕಲಿತ ಕೌಶಲಗಳನ್ನು ಮರೆಯದೇ ಮುಂದುವರಿಸಿಕೊಂಡು ಹೋಗಲು ಅವರು ನಿಗಾವಹಿಸಲಿದ್ದಾರೆ.</p>.<p>ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟು ಶೈಕ್ಷಣಿಕ ಬ್ಲಾಕ್ಗಳಿಂದ ಒಟ್ಟು 10,840 ವಿದ್ಯಾರ್ಥಿನಿಯರು ಕರಾಟೆ ಕೌಶಲ ಕಲಿಯಲಿದ್ದಾರೆ.</p>.<blockquote>35 ಶೈಕ್ಷಣಿಕ ಜಿಲ್ಲೆಗಳಲ್ಲಿ ಅನುಷ್ಠಾನ 1.59 ಕೋಟಿ ವಿದ್ಯಾರ್ಥಿನಿಯರಿಗೆ ತರಬೇತಿ ಕರಾಟೆ ಪರಿಣತರಿಂದ ಮಾರ್ಗದರ್ಶನ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>