ಕರಾವಳಿ ಜಿಲ್ಲೆಯಲ್ಲಿ ಹೇಯ ಘಟನೆ ನಡೆದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಮತಾಂಧರು ಯುವತಿಯರನ್ನು ಗುರಿಯಾಗಿಸುತ್ತಿದ್ದಾರೆ. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ.
–ನಯನಾ ಗಣೇಶ್ ಬಿಜೆಪಿ ಮಾಜಿ ರಾಜ್ಯ ಉಪಾಧ್ಯಕ್ಷೆ
ಈ ಘಟನೆ ನಡೆದಿರುವ ಬಗ್ಗೆ ಊಹಿಸಲೂ ಆಗುತ್ತಿಲ್ಲ. ಇದು ಪೂರ್ವಯೋಜಿತ ಕೃತ್ಯ ಎನ್ನುವ ಸಂದೇಹ ದಟ್ಟವಾಗಿದೆ. ಆರೋಪಿಗಳು ಹಿಂದೆಯೂ ಇಂಥ ಕೃತ್ಯ ಎಸಗಲಾಗಿದೆಯೇ ಎಂಬುದನ್ನು ತನಿಖೆ ಆಗಬೇಕು.