<p><strong>ಮಂಗಳೂರು</strong>: ರಾಜ್ಯ ಸಾರಿಗೆ ನಿಗಮ ಮಂಗಳೂರು ವಿಭಾಗಕ್ಕೆ ಮಂಜೂರು ಮಾಡಿರುವ ಮಂಗಳೂರು–ಬೆಂಗಳೂರು ವೋಲ್ವೊ ಮಲ್ಟಿ ಆ್ಯಕ್ಸೆಲ್ ಸೀಟರ್ 2.0 ಮತ್ತು ಅಂಬಾರಿ ಉತ್ಸವ ಬಸ್ಗಳ ಸಂಚಾರಕ್ಕೆ ನಗರದಲ್ಲಿ ಭಾನುವಾರ ಚಾಲನೆ ನೀಡಲಾಯಿತು.</p>.<p>ಪುತ್ತೂರು, ಮೈಸೂರು ಮತ್ತು ಹಾಸನ ಮಾರ್ಗಗಳ ಮೂಲಕ ಸಾಗುವ ಬಸ್ಗಳನ್ನು ಮಂಗಳೂರು ವಿಭಾಗದ ನಿಯಂತ್ರಕ ರಾಜೇಶ್ ಶೆಟ್ಟಿ ಬರಮಾಡಿಕೊಂಡರು. ಭಾನುವಾರ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಶಾಸಕ ಐವನ್ ಡಿಸೋಜ ಅವರು ಬಸ್ಗಳಿಗೆ ಹಸಿರು ನಿಶಾನೆ ತೋರಿದರು.</p>.<p>ಎರಡು ವೋಲ್ವೊ ಮಲ್ಟಿ ಆ್ಯಕ್ಸೆಲ್ ಬಸ್ಗಳು ಮತ್ತು ಮೂರು ಅಂಬಾರಿ ಉತ್ಸವ್ ಬಸ್ಗಳು ಹೊಸದಾಗಿ ಬಂದಿವೆ. ಮಂಗಳೂರಿನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಬೆಂಗಳೂರಿಗೆ ರಾತ್ರಿ 8 ಗಂಟೆಗೆ ತಲುಪುವ ಎಸಿ ಸ್ಲೀಪರ್ ಬಸ್ ಪ್ರಯಾಣ ಕೂಡ ಆರಂಭಿಸಲಾಗಿದೆ ಎಂದು ರಾಜೇಶ್ ಶೆಟ್ಟಿ ತಿಳಿಸಿದರು. ಪುತ್ತೂರು–ಸುಳ್ಯ–ಮೈಸೂರು ಎಸಿ ಬಸ್ ಕೂಡ ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು.</p>.<p>1982ರಲ್ಲಿ ಆರಂಭಗೊಂಡ ಮಂಗಳೂರು ವಿಭಾಗ ಪ್ರತಿದಿನ 550 ಸರ್ವಿಸ್ ನಡೆಸುತ್ತಿದ್ದು 595 ವಾಹನಗಳು ಒಟ್ಟು 2.17 ಲಕ್ಷ ಕಿಮೀ ದೂರವನ್ನು ಪ್ರತಿದಿನ ಕ್ರಮಿಸುತ್ತಿದ್ದು ನಿತ್ಯವೂ ಅಂದಾಜು 1.2 ಲಕ್ಷ ಪ್ರಯಾಣಿಕರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ವಿವರಿಸಿದರು.</p>.<p>ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಪಾಲ್ಗೊಂಡಿದ್ದರು. </p>.<p><strong>ಬಸ್ಗಳ ವೇಳಾಪಟ್ಟಿ</strong></p>.<p>ಪುತ್ತೂರು, ಮೈಸೂರು ದಾರಿಯಾಗಿ ಸಾಗುವ ಅಂಬಾರಿ ಉತ್ಸವ ಮಂಗಳೂರಿನಿಂದ ರಾತ್ರಿ 9.30ಕ್ಕೆ ಹೊರಟು ಮರುದಿನ ಬೆಳಿಗ್ಗೆ 5.50ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ರಾತ್ರಿ 9.30ಕ್ಕೆ ಹೊರಟು ಬೆಳಿಗ್ಗೆ 6 ಗಂಟೆಗೆ ಮಂಗಳೂರು ತಲುಪಲಿದೆ. ಹಾಸನ ಮೂಲಕ ತೆರಳುವ ಮಲ್ಟಿ ಆ್ಯಕ್ಸೆಲ್ ಬಸ್ ಬೆಳಿಗ್ಗೆ 10ಕ್ಕೆ ಮಂಗಳೂರಿನಿಂದ ಹೊರಟು ಸಂಜೆ 5.30ಕ್ಕೆ ಬೆಂಗಳೂರು ತಲುಪಲಿದೆ.</p><p> ಬೆಂಗಳೂರಿನಿಂದ ರಾತ್ರಿ 10.10ಕ್ಕೆ ಹೊರಟು ಬೆಳಿಗ್ಗೆ 5.45ಕ್ಕೆ ಮಂಗಳೂರು ತಲುಪಲಿದೆ. ಮಂಗಳೂರಿನಿಂದ ರಾತ್ರಿ 9.30ಕ್ಕೆ ಹೊರಟು ಬೆಂಗಳೂರಿಗೆ 5.40ಕ್ಕೆ, ಬೆಂಗಳೂರಿನಿಂದ ಬೆಳಿಗ್ಗೆ 10 ಗಂಟೆಗೆ ಹೊರಟು ಮಂಗಳೂರಿಗೆ ಸಂಜೆ 6.10ಕ್ಕೆ ತಲುಪಲಿದೆ.</p><p>ಹಾಸನ ದಾರಿಯಾಗಿ ಸಾಗುವ ಅಂಬಾರಿ ಉತ್ಸವ ಮಧ್ಯಾಹ್ನ 1 ಗಂಟೆಗೆ ಮಂಗಳೂರಿನಿಂದ ಹೊರಟು ರಾತ್ರಿ 8.30ಕ್ಕೆ ಬೆಂಗಳೂರು, ಬೆಂಗಳೂರಿನಿಂದ ರಾತ್ರಿ 11 ಗಂಟೆಗೆ ಹೊರಟು ಮಂಗಳೂರಿಗೆ ಬೆಳಿಗ್ಗೆ 6.15ಕ್ಕೆ ತಲುಪಲಿದೆ. ಹಾಸನ ಮೂಲಕ ಸಾಗುವ ಮಲ್ಟಿ ಆ್ಯಕ್ಸೆಲ್ ಬಸ್ ಮಂಗಳೂರಿನಿಂದ ಸಂಜೆ 5 ಗಂಟೆಗೆ ಹೊರಟು ರಾತ್ರಿ 12.15ಕ್ಕೆ ಬೆಂಗಳೂರು ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ರಾಜ್ಯ ಸಾರಿಗೆ ನಿಗಮ ಮಂಗಳೂರು ವಿಭಾಗಕ್ಕೆ ಮಂಜೂರು ಮಾಡಿರುವ ಮಂಗಳೂರು–ಬೆಂಗಳೂರು ವೋಲ್ವೊ ಮಲ್ಟಿ ಆ್ಯಕ್ಸೆಲ್ ಸೀಟರ್ 2.0 ಮತ್ತು ಅಂಬಾರಿ ಉತ್ಸವ ಬಸ್ಗಳ ಸಂಚಾರಕ್ಕೆ ನಗರದಲ್ಲಿ ಭಾನುವಾರ ಚಾಲನೆ ನೀಡಲಾಯಿತು.</p>.<p>ಪುತ್ತೂರು, ಮೈಸೂರು ಮತ್ತು ಹಾಸನ ಮಾರ್ಗಗಳ ಮೂಲಕ ಸಾಗುವ ಬಸ್ಗಳನ್ನು ಮಂಗಳೂರು ವಿಭಾಗದ ನಿಯಂತ್ರಕ ರಾಜೇಶ್ ಶೆಟ್ಟಿ ಬರಮಾಡಿಕೊಂಡರು. ಭಾನುವಾರ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಶಾಸಕ ಐವನ್ ಡಿಸೋಜ ಅವರು ಬಸ್ಗಳಿಗೆ ಹಸಿರು ನಿಶಾನೆ ತೋರಿದರು.</p>.<p>ಎರಡು ವೋಲ್ವೊ ಮಲ್ಟಿ ಆ್ಯಕ್ಸೆಲ್ ಬಸ್ಗಳು ಮತ್ತು ಮೂರು ಅಂಬಾರಿ ಉತ್ಸವ್ ಬಸ್ಗಳು ಹೊಸದಾಗಿ ಬಂದಿವೆ. ಮಂಗಳೂರಿನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಬೆಂಗಳೂರಿಗೆ ರಾತ್ರಿ 8 ಗಂಟೆಗೆ ತಲುಪುವ ಎಸಿ ಸ್ಲೀಪರ್ ಬಸ್ ಪ್ರಯಾಣ ಕೂಡ ಆರಂಭಿಸಲಾಗಿದೆ ಎಂದು ರಾಜೇಶ್ ಶೆಟ್ಟಿ ತಿಳಿಸಿದರು. ಪುತ್ತೂರು–ಸುಳ್ಯ–ಮೈಸೂರು ಎಸಿ ಬಸ್ ಕೂಡ ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು.</p>.<p>1982ರಲ್ಲಿ ಆರಂಭಗೊಂಡ ಮಂಗಳೂರು ವಿಭಾಗ ಪ್ರತಿದಿನ 550 ಸರ್ವಿಸ್ ನಡೆಸುತ್ತಿದ್ದು 595 ವಾಹನಗಳು ಒಟ್ಟು 2.17 ಲಕ್ಷ ಕಿಮೀ ದೂರವನ್ನು ಪ್ರತಿದಿನ ಕ್ರಮಿಸುತ್ತಿದ್ದು ನಿತ್ಯವೂ ಅಂದಾಜು 1.2 ಲಕ್ಷ ಪ್ರಯಾಣಿಕರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ವಿವರಿಸಿದರು.</p>.<p>ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಪಾಲ್ಗೊಂಡಿದ್ದರು. </p>.<p><strong>ಬಸ್ಗಳ ವೇಳಾಪಟ್ಟಿ</strong></p>.<p>ಪುತ್ತೂರು, ಮೈಸೂರು ದಾರಿಯಾಗಿ ಸಾಗುವ ಅಂಬಾರಿ ಉತ್ಸವ ಮಂಗಳೂರಿನಿಂದ ರಾತ್ರಿ 9.30ಕ್ಕೆ ಹೊರಟು ಮರುದಿನ ಬೆಳಿಗ್ಗೆ 5.50ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ರಾತ್ರಿ 9.30ಕ್ಕೆ ಹೊರಟು ಬೆಳಿಗ್ಗೆ 6 ಗಂಟೆಗೆ ಮಂಗಳೂರು ತಲುಪಲಿದೆ. ಹಾಸನ ಮೂಲಕ ತೆರಳುವ ಮಲ್ಟಿ ಆ್ಯಕ್ಸೆಲ್ ಬಸ್ ಬೆಳಿಗ್ಗೆ 10ಕ್ಕೆ ಮಂಗಳೂರಿನಿಂದ ಹೊರಟು ಸಂಜೆ 5.30ಕ್ಕೆ ಬೆಂಗಳೂರು ತಲುಪಲಿದೆ.</p><p> ಬೆಂಗಳೂರಿನಿಂದ ರಾತ್ರಿ 10.10ಕ್ಕೆ ಹೊರಟು ಬೆಳಿಗ್ಗೆ 5.45ಕ್ಕೆ ಮಂಗಳೂರು ತಲುಪಲಿದೆ. ಮಂಗಳೂರಿನಿಂದ ರಾತ್ರಿ 9.30ಕ್ಕೆ ಹೊರಟು ಬೆಂಗಳೂರಿಗೆ 5.40ಕ್ಕೆ, ಬೆಂಗಳೂರಿನಿಂದ ಬೆಳಿಗ್ಗೆ 10 ಗಂಟೆಗೆ ಹೊರಟು ಮಂಗಳೂರಿಗೆ ಸಂಜೆ 6.10ಕ್ಕೆ ತಲುಪಲಿದೆ.</p><p>ಹಾಸನ ದಾರಿಯಾಗಿ ಸಾಗುವ ಅಂಬಾರಿ ಉತ್ಸವ ಮಧ್ಯಾಹ್ನ 1 ಗಂಟೆಗೆ ಮಂಗಳೂರಿನಿಂದ ಹೊರಟು ರಾತ್ರಿ 8.30ಕ್ಕೆ ಬೆಂಗಳೂರು, ಬೆಂಗಳೂರಿನಿಂದ ರಾತ್ರಿ 11 ಗಂಟೆಗೆ ಹೊರಟು ಮಂಗಳೂರಿಗೆ ಬೆಳಿಗ್ಗೆ 6.15ಕ್ಕೆ ತಲುಪಲಿದೆ. ಹಾಸನ ಮೂಲಕ ಸಾಗುವ ಮಲ್ಟಿ ಆ್ಯಕ್ಸೆಲ್ ಬಸ್ ಮಂಗಳೂರಿನಿಂದ ಸಂಜೆ 5 ಗಂಟೆಗೆ ಹೊರಟು ರಾತ್ರಿ 12.15ಕ್ಕೆ ಬೆಂಗಳೂರು ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>