ಭೂ ಮಂಜೂರಾತಿ ಕಾಯ್ದೆ ಪ್ರಕಾರ ಲಭ್ಯ ಸರ್ಕಾರಿ ಭೂಮಿಯಲ್ಲಿ ಶೇ 50 ದಲಿತರಿಗೆ ಹಂಚಬೇಕಾಗಿದೆ. ಆದರೆ, ಬೆಳ್ತಂಗಡಿ ತಹಶೀಲ್ದಾರರು ಸರ್ಕಾರಿ ಭೂಮಿ ಲಭ್ಯವಿಲ್ಲವೆಂದು ಪ್ರಕಟಣೆ ಕೊಟ್ಟಿದ್ದಾರೆ. ಧರ್ಮಸ್ಥಳ, ಅಂಡಿಂಜೆ, ತೋಟತ್ತಾಡಿ, ಕುವೆಟ್ಟು ಮತ್ತಿತರ ಗ್ರಾಮಗಳಲ್ಲಿ ಸರ್ಕಾರಿ ಭೂಮಿ ಲಭ್ಯತೆಯ ಅಧಿಕೃತ ಮಾಹಿತಿ ಇದೆ. ಡಿ.ಸಿ ಮನ್ನಾ ಭೂಮಿ ವಿತರಣೆ ಇನ್ನೂ ಕಗ್ಗಂಟಾಗಿ ಉಳಿದಿದೆ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪವಾಯಿತು.