ರಾಮನಗರ ನಿವಾಸಿ ಯು.ಟಿ.ಜಮೀಳಾ ಎಂಬುವರ ಜಾಗ ರಸ್ತೆಯ ಬದಿ ಇದ್ದು, ಹೆದ್ದಾರಿ ಕಾಮಗಾರಿ ನಡೆಸುವವರು ಆವರಣ ಗೋಡೆಯ ಅಡಿ ಭಾಗದಿಂದ ಮಣ್ಣು ತೆಗೆದಿದ್ದು, ಅದನ್ನು ಹಾಗೆ ಬಿಟ್ಟಿದ್ದರು. 3 ದಿನಗಳಿಂದ ಸುರಿಯುತ್ತಿರುವ ಮಳೆಗೆ ಆವರಣ ಗೋಡೆ ಕುಸಿದು ಬಿದ್ದಿದೆ. ಅವರ ತೋಟದ ಬಳಿ ಹೆದ್ದಾರಿಗೆ ಅಡ್ಡಲಾಗಿ ಮೋರಿ ಅಳವಡಿಸಿ ಆ ಭಾಗದ ನೀರನ್ನು ಅವರ ತೋಟಕ್ಕೆ ಬಿಡಲಾಗಿದ್ದು, ಇದರಿಂದಾಗಿ ಕೃಷಿ ನಾಶಕ್ಕೂ ಕಾರಣವಾಗಿದೆ.