ಜಿಲ್ಲೆಯಲ್ಲಿರುವ ಹೆಚ್ಚಿನ ಕಟ್ಟಡಗಳು ಹಳೆಯವು. ವಿಸ್ತಾರ ಮಾಡಲು ಸಾಧ್ಯವಾಗದಷ್ಟು ಜಾಗದ ಸಮಸ್ಯೆ ಇದೆ. ಆದ್ದರಿಂದ ಹೊಸ ಸ್ಥಳ ಹುಡುಕಿ ಖರೀದಿಸಿ ಹಣ ಹೊಂದಿಸಿ ಪ್ರತ್ಯೇಕವಾಗಿ ಕಟ್ಟಡ ನಿರ್ಮಿಸುವ ಅನಿವಾರ್ಯ ಸ್ಥಿತಿ ಇದೆ.–ಗಾಯತ್ರಿ ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ.
ಐಟಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿದ್ದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕೆಂಬ ಹಂಬಲದಿಂದ ಬಂದಿದ್ದೇನೆ. ಆನ್ಲೈನ್ನಲ್ಲಿ ಮಾಹಿತಿ ಪಡೆಯಬಹುದು. ಆದರೆ ಅದು ಕೆಲವೊಮ್ಮೆ ಅತಿಯಾಗುತ್ತದೆ. ಇಲ್ಲಿ ವಾತಾವರಣವೂ ಪೂರಕವಾಗಿದೆ.–ವರ್ಷ ಗುರುಪುರ ಕೈಕಂಬ
ಅಗ್ನಿವೀರ್ ತರಬೇತಿ ಕೇಂದ್ರದಲ್ಲಿ ಶಿಕ್ಷಕನಾಗಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆಗೂ ತರಬೇತಿ ಕೊಡುತ್ತೇನೆ. ಮಾಹಿತಿ ಲೋಕಕ್ಕೆ ಅಪ್ಡೇಟ್ ಆಗದೇ ಇದ್ದರೆ ಅಂಗವೈಕಲ್ಯ ಇದ್ದಂತೆ. ಆದ್ದರಿಂದ ನಾನು ಸಮಯ ಇದ್ದಾಗಲೆಲ್ಲ ಇಲ್ಲಿಗೆ ಬರುತ್ತೇನೆ.–ವಸಂತ ಗೋಟೂರು ಮಂಗಳೂರು
ಕಟ್ಟಡವಿಡೀ ಹಾಳಾಗಿತ್ತು. ಪುಸ್ತಕಗಳು ಮತ್ತು ಪತ್ರಿಕೆಗಳನ್ನು ಓದಲು ಬೇಕಾದ ಪರಿಸರ ಇರಲಿಲ್ಲ. ಈಗ ಅಭಿವೃದ್ಧಿ ಆಗಿದೆ. ಕೆಲವೇ ಕೆಲಸಗಳು ಬಾಕಿ ಇವೆ. ಅದೆಲ್ಲವೂ ಆದಾಗ ವಾಚನಾಲಯ ಹೊಸ ಬಗೆಯಲ್ಲಿ ಕಂಗೊಳಿಸಲಿದೆ.–ಮಾಲತಿ ವೆಲೆನ್ಸಿಯಾ ವಾಚನಾಲಯದ ಉಸ್ತುವಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.