ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮಂಗಳೂರು: ವಾಚನಾಲಯಗಳಿಗೆ ಬಹು ಆಯಾಮ

Published : 20 ಮೇ 2024, 7:32 IST
Last Updated : 20 ಮೇ 2024, 7:32 IST
ಫಾಲೋ ಮಾಡಿ
Comments
ಮಂಗಳೂರಿನ ವೆಲೆನ್ಶಿಯಾದಲ್ಲಿ ಹೊಸತನದೊಂದಿಗೆ ಕಂಗೊಳಿಸುತ್ತಿರುವ ವಾಚನಾಲಯ -ಪ್ರಜಾವಾಣಿ ಚಿತ್ರ 
ಮಂಗಳೂರಿನ ವೆಲೆನ್ಶಿಯಾದಲ್ಲಿ ಹೊಸತನದೊಂದಿಗೆ ಕಂಗೊಳಿಸುತ್ತಿರುವ ವಾಚನಾಲಯ -ಪ್ರಜಾವಾಣಿ ಚಿತ್ರ 
ಮಂಗಳೂರಿನ ಆಶೋಕನಗರದ ವಾಚನಾಲಯ -ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಮಂಗಳೂರಿನ ಆಶೋಕನಗರದ ವಾಚನಾಲಯ -ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಜಿಲ್ಲೆಯಲ್ಲಿರುವ ಹೆಚ್ಚಿನ ಕಟ್ಟಡಗಳು ಹಳೆಯವು. ವಿಸ್ತಾರ ಮಾಡಲು ಸಾಧ್ಯವಾಗದಷ್ಟು ಜಾಗದ ಸಮಸ್ಯೆ ಇದೆ. ಆದ್ದರಿಂದ ಹೊಸ ಸ್ಥಳ ಹುಡುಕಿ ಖರೀದಿಸಿ ಹಣ ಹೊಂದಿಸಿ ಪ್ರತ್ಯೇಕವಾಗಿ ಕಟ್ಟಡ ನಿರ್ಮಿಸುವ ಅನಿವಾರ್ಯ ಸ್ಥಿತಿ ಇದೆ.
–ಗಾಯತ್ರಿ ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ.
ಐಟಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿದ್ದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕೆಂಬ ಹಂಬಲದಿಂದ ಬಂದಿದ್ದೇನೆ. ಆನ್‌ಲೈನ್‌ನಲ್ಲಿ ಮಾಹಿತಿ ಪಡೆಯಬಹುದು. ಆದರೆ ಅದು ಕೆಲವೊಮ್ಮೆ ಅತಿಯಾಗುತ್ತದೆ. ಇಲ್ಲಿ ವಾತಾವರಣವೂ ಪೂರಕವಾಗಿದೆ.
–ವರ್ಷ ಗುರುಪುರ ಕೈಕಂಬ
ಅಗ್ನಿವೀರ್ ತರಬೇತಿ ಕೇಂದ್ರದಲ್ಲಿ ಶಿಕ್ಷಕನಾಗಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆಗೂ ತರಬೇತಿ ಕೊಡುತ್ತೇನೆ. ಮಾಹಿತಿ ಲೋಕಕ್ಕೆ ಅಪ್‌ಡೇಟ್ ಆಗದೇ ಇದ್ದರೆ ಅಂಗವೈಕಲ್ಯ ಇದ್ದಂತೆ. ಆದ್ದರಿಂದ ನಾನು ಸಮಯ ಇದ್ದಾಗಲೆಲ್ಲ ಇಲ್ಲಿಗೆ ಬರುತ್ತೇನೆ.
–ವಸಂತ ಗೋಟೂರು ಮಂಗಳೂರು
ಕಟ್ಟಡವಿಡೀ ಹಾಳಾಗಿತ್ತು. ಪುಸ್ತಕಗಳು ಮತ್ತು ಪತ್ರಿಕೆಗಳನ್ನು ಓದಲು ಬೇಕಾದ ಪರಿಸರ ಇರಲಿಲ್ಲ. ಈಗ ಅಭಿವೃದ್ಧಿ ಆಗಿದೆ. ಕೆಲವೇ ಕೆಲಸಗಳು ಬಾಕಿ ಇವೆ. ಅದೆಲ್ಲವೂ ಆದಾಗ ವಾಚನಾಲಯ ಹೊಸ ಬಗೆಯಲ್ಲಿ ಕಂಗೊಳಿಸಲಿದೆ.
–ಮಾಲತಿ ವೆಲೆನ್ಸಿಯಾ ವಾಚನಾಲಯದ ಉಸ್ತುವಾರಿ.
ಸುಳ್ಯದಲ್ಲಿ ತರಬೇತಿ; ಮಂಗಳೂರಿನಲ್ಲಿ ಮಾಹಿತಿ
ಸುಳ್ಯ ವಾಚನಾಲದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲಾಗುತ್ತಿದೆ.  ತರಬೇತಿ ಪಡೆದ ಮೊದಲ ತಂಡ ಈಗಾಗಲೇ ಹೊರಬಂದಿದ್ದು ಸುಮಾರು 100 ಮಂದಿ ಇದರ ಲಾಭ ಪಡೆದುಕೊಂಡಿದ್ದಾರೆ. ಎರಡನೇ ತಂಡದ ತರಬೇತಿ ಸದ್ಯದಲ್ಲೇ ಆರಂಭವಾಗಲಿದೆ. ಮಂಗಳೂರಿನಲ್ಲಿ ಹೊಸ ಕಟ್ಟಡ ನಿರ್ಮಾಣ ಆದ ನಂತರ ಈ ಯೋಜನೆ ಜಿಲ್ಲಾಕೇಂದ್ರಕ್ಕೂ ವಿಸ್ತರಣೆ ಆಗಲಿದೆ. ಬಾವುಟಗುಡ್ಡದ ನಗರ ಕೇಂದ್ರ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಿದ್ಧರಾಗುವವರಿಗಾಗಿ ಪೂರಕ ಮಾಹಿತಿಯ ಪುಸ್ತಕಗಳನ್ನು ಒದಗಿಸಲಾಗುತ್ತಿದೆ. ನಿತ್ಯವೂ ನೂರಾರು ಮಂದಿ ಇದರ ಪ್ರಯೋಜ ಪಡೆದುಕೊಳ್ಳುತ್ತಿದ್ದಾರೆ. ಪರೀಕ್ಷೆಗೆ ಸಜ್ಜಾಗುವವರಿಗಾಗಿ ಪ್ರಕಾಶ್‌ ಎಂಬವರು ವಾರದಲ್ಲಿ ಎರಡು ದಿನ ಉಚಿತವಾಗಿ ಆಪ್ತಸಮಾಲೋಚನೆ ನಡೆಸುತ್ತಾರೆ. ನಗರ ಕೇಂದ್ರ ಗ್ರಂಥಾಲಯ ಸಮೀಪದ ಹೊಸ ಕಟ್ಟಡವನ್ನು ಚಟುವಟಿಕೆ ಆಧಾರಿತ ಕೇಂದ್ರವನ್ನಾಗಿ ಮಾಡುವ ಸಲುವಾಗಿ ಸಭಾಂಗಣ ಮತ್ತಿತರ ಸೌಲಭ್ಯಗಳನ್ನು ಮಾಡಲಾಗಿದೆ.ಬಾವುಟಗುಡ್ಡದಲ್ಲಿ ಪುಸ್ತಕಗಳಿಂದ ಮಾಹಿತಿ ಕಲೆ ಹಾಕುವವರಲ್ಲಿ ಬೇರೆ ಬೇರೆ ಕ್ಷೇತ್ರಗಳ ಜನರು ಇದ್ದಾರೆ. ಉನ್ನತ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಎಸ್‌ಐಗಳು ಎಸ್‌ಐ ಹುದ್ದೆ ಬೇಕೆಂದು ಬಯಸುವ ಕಾನ್‌ಸ್ಟೆಬಲ್‌ಗಳು ಉದ್ಯೋಗದ ನಡುವೆಯೇ ಅಭ್ಯಾಸ ಮಾಡುತ್ತಿದ್ದಾರೆ. ‘ಸನ್‌ ಇನ್‌ಸ್ಪೆಕ್ಟರ್ ಆಗಬೇಕೆಂಬ ಬಯಕೆ ಇದೆ. 2 ವರ್ಷದಿಂದ ಇಲ್ಲಿ ಓದುತ್ತಾ ಇದ್ದೇನೆ. ಇಲ್ಲಿ ಪಿಎಸ್‌ಐ ಕೆಎಎಸ್ ಪರೀಕ್ಷೆಗೆ ಪೂರಕವಾದ ಪುಸ್ತಕಗಳು ಹಳೆಯ ಪ್ರಶ್ನೆ ಪತ್ರಿಕೆಗಳು ಇವೆ. ಒಂದು ಪುಸ್ತಕ ಕೇಳಿದರೆ ಪೂರಕವಾದ ಮತ್ತೊಂದನ್ನೂ ತಂದುಕೊಡುವ ಉತ್ತಮ ಸಿಬ್ಬಂದಿ ಇದ್ದಾರೆ’ ಎಂದು ಉತ್ತರ ಕರ್ನಾಟಕದಿಂದ ಬಂದಿರುವ ಕಾನ್‌ಸ್ಟೆಬಲ್ ಒಬ್ಬರು ತಿಳಿಸಿದರು.
ಜನರ ಸಹಭಾಗಿತ್ವ ಕುಳಾಯಿ
ಹೊಸಬೆಟ್ಟು ಗ್ರಂಥಾಲಯದ ಅಭಿವೃದ್ಧಿ ಆದಂದಿನಿಂದ ಸುತ್ತಮುತ್ತಲ ಜನರು ಪುಸ್ತಕ ಪ್ರಿಯರು ಖುಷಿಯಾಗಿದ್ದಾರೆ. ನೀರು ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಸಾರ್ವಜನಿಕರೇ ಮುಂದೆ ಬಂದಿದ್ದಾರೆ. ರೋಟರಿ ಸಂಸ್ಥೆಯವರೂ ಕೈಜೋಡಿಸಿದ್ದಾರೆ. ‘ಹೊಸಬೆಟ್ಟು ವಾಚನಾಲಯದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅದರ ಮುಂಭಾಗದಲ್ಲಿ ಮಹಾನಗರ ಪಾಲಿಕೆಯ ಉದ್ಯಾನದಲ್ಲಿ ಜಾಗ ಇತ್ತು. ಅದನ್ನು ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿತ್ತು. ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡು ನಾಲ್ಕು ವರ್ಷ ಕಳೆದಿದೆ. ಇಲ್ಲಿನ ಜನರು ಗ್ರಂಥಾಲಯದ ಬಗ್ಗೆ ತೋರುತ್ತಿರುವ ಕಾಳಜಿ ಅಭಿನಂದನೀಯ. ಕುಡಿಯುವ ನೀರಿನ ವ್ಯವಸ್ಥೆ ಅವರೇ ಮಾಡಿದ್ದಾರೆ. ಪುಸ್ತಕಗಳ ರ‍್ಯಾಕ್ ಮತ್ತಿತರ ಕೆಲವು ವಸ್ತುಗಳನ್ನು ರೋಟರಿ ಸಂಸ್ಥೆ ಕೊಡುಗೆಯಾಗಿ ನೀಡಿದೆ’ ಎಂದು ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ರಾಘವೆಂದ್ರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT