<p><strong>ಮಂಗಳೂರು: </strong>ದೇಶದ ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ (ಎಂಎಸ್ಸಿಎಲ್) ಭಾನುವಾರ ನಗರದಲ್ಲಿ ವಿಂಟೇಜ್ ವಾಹನಗಳ ರ್ಯಾಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.</p>.<p>ರ್ಯಾಲಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಚಾಲನೆ ನೀಡಿದರು. ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.</p>.<p>ನಗರದ ಎ.ಬಿ. ಶೆಟ್ಟಿ ವೃತ್ತದಲ್ಲಿ ಆರಂಭವಾದ ರ್ಯಾಲಿ, ಗಡಿಯಾರಗೋಪುರ, ಹಂಪನಕಟ್ಟೆ ವೃತ್ತ, ಅಂಬೇಡ್ಕರ್ ವೃತ್ತ, ಬಂಟ್ಸ್ ಹಾಸ್ಟೆಲ್, ಪಿವಿಎಸ್ ವೃತ್ತ, ಲಾಲ್ಬಾಗ್ ಮೂಲಕ ಸಾಗಿ ಲೇಡಿಹಿಲ್ ಬಳಿಯ ಮಂಗಳಾಕ್ರೀಡಾಂಗಣದಲ್ಲಿ ಸಮಾವೇಶಗೊಂಡಿತು.</p>.<p>ವಿಂಟೇಜ್ ವಾಹನಗಳ ರ್ಯಾಲಿಯಲ್ಲಿ ಕಾರುಗಳು, ದ್ವಿಚಕ್ರ ವಾಹನಗಳು ಗತವೈಭವಕ್ಕೆ ಹೊಸತನದ ಮೆರುಗಿನೊಂದಿಗೆ ಸಾಗಿದವು. ಅವುಗಳ ರಾಜಗಾಂಭೀರ್ಯ ವೀಕ್ಷಕರನ್ನು ಪುಳಕಗೊಳಿಸಿತು. ಮಕ್ಕಳು, ಹಿರಿಯರು ಸೇರದಂತೆ ನೂರಾರು ಜನರು ಅಲ್ಲಲ್ಲಿ ನಿಂತು ವೀಕ್ಷಿಸುತ್ತಿದ್ದುದು ಕಂಡುಬಂತು.</p>.<p class="Subhead"><strong>ಸ್ಪರ್ಧೆ: </strong>ಚಿತ್ರರಚನಾ ಸ್ಪರ್ಧೆ ಆಯೋಜಿಸಲಾಗಿದ್ದು, 15 ವರ್ಷಕ್ಕಿಂತ ಕೆಳಗಿನ ವಯಸ್ಸಿನವರು ಹಾಗೂ 16ರಿಂದ 21 ವಯೋಮಾನದವರು ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.</p>.<p class="Subhead"><strong>ಕಲಾ ಸಮೃದ್ಧಿ: </strong>ಲಾಲ್ಬಾಗ್ ವೃತ್ತದಿಂದ ಲೇಡಿಹಿಲ್ವರೆಗೆ ಕಲಾ ಪ್ರದರ್ಶನ ಆಯೋಜಿಸಲಾಗಿತ್ತು. ರ್ಯಾಲಿಯಲ್ಲಿ ಸ್ತಬ್ಧ ಚಿತ್ರ ಮತ್ತಿತರ ವೇಷಗಳು ಆಕರ್ಷಕವಾಗಿದ್ದವು. ಸ್ವಾತಂತ್ರ್ಯ ಸಂಗ್ರಾಮ ಸ್ಮರಣೆಯ ಸ್ತಬ್ಧಚಿತ್ರ ವಿಶೇಷ ಗಮನಸೆಳೆಯಿತು. ಹುಲಿ ಕುಣಿತ, ಯಕ್ಷಗಾನ ಗೊಂಬೆ ಮೇಳೈಸಿದವು. ಸಾಂಸ್ಕೃತಿಕ ಕಲಾ ಪ್ರದರ್ಶನ, ಬೀದಿ ಕಾರ್ಯಕ್ರಮಗಳ ಭಾಗವಾಗಿ ನೆರವೇರಿದವು.</p>.<p>ಕಾರ್ಯಕ್ರಮದಲ್ಲಿ ಎಂಎಸ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ಕುಮಾರ್ ಮಿಶ್ರಾ, ಪಾಲಿಕೆ ಮುಖ್ಯ ಸಚೇತಕ ಸುಧೀರ್ ಕುಮಾರ್ ಶೆಟ್ಟಿ, ಕರ್ನಾಟಕ ಮೀನುಗಾರಿಕೆ ನಿಗಮದ ಅಧ್ಯಕ್ಷ ನಿತಿನ್ ಕುಮಾರ್ , ಇತರ ಪ್ರಮುಖರು ಭಾಗವಹಿಸಿದ್ದರು.</p>.<p><strong>ವಿಂಟೇಜ್ ಒಳಗೆ ‘ಸಾರಥಿಗಳು’: </strong>ಅದು ಕಂದು ಬಣ್ಣದ ವಿಂಟೇಜ್ ಕಾರು. ರಾಜದರ್ಭಾರಿನ ಮೆರುಗು. ಅದರೊಳಗೆ ಜಿಲ್ಲೆ–ನಗರ ಸಾರಥಿಗಳಾದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹಾಗೂ ಮೇಯರ್ ಪ್ರೇಮಾನಂದ ಶೆಟ್ಟಿ ಪೋಸ್ ಕೊಟ್ಟದ್ದು ವಿಶೇಷವಾಗಿತ್ತು. ಕಾರಿನಲ್ಲೂ ಸಾರಥ್ಯದಲ್ಲಿ ‘ನಗರ ಸಾರಥಿ’ಯೇ ಇದ್ದರು. ಜಿಲ್ಲೆಯ ಸಾರಥಿ ಪಕ್ಕದಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು: </strong>ದೇಶದ ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ (ಎಂಎಸ್ಸಿಎಲ್) ಭಾನುವಾರ ನಗರದಲ್ಲಿ ವಿಂಟೇಜ್ ವಾಹನಗಳ ರ್ಯಾಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.</p>.<p>ರ್ಯಾಲಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಚಾಲನೆ ನೀಡಿದರು. ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.</p>.<p>ನಗರದ ಎ.ಬಿ. ಶೆಟ್ಟಿ ವೃತ್ತದಲ್ಲಿ ಆರಂಭವಾದ ರ್ಯಾಲಿ, ಗಡಿಯಾರಗೋಪುರ, ಹಂಪನಕಟ್ಟೆ ವೃತ್ತ, ಅಂಬೇಡ್ಕರ್ ವೃತ್ತ, ಬಂಟ್ಸ್ ಹಾಸ್ಟೆಲ್, ಪಿವಿಎಸ್ ವೃತ್ತ, ಲಾಲ್ಬಾಗ್ ಮೂಲಕ ಸಾಗಿ ಲೇಡಿಹಿಲ್ ಬಳಿಯ ಮಂಗಳಾಕ್ರೀಡಾಂಗಣದಲ್ಲಿ ಸಮಾವೇಶಗೊಂಡಿತು.</p>.<p>ವಿಂಟೇಜ್ ವಾಹನಗಳ ರ್ಯಾಲಿಯಲ್ಲಿ ಕಾರುಗಳು, ದ್ವಿಚಕ್ರ ವಾಹನಗಳು ಗತವೈಭವಕ್ಕೆ ಹೊಸತನದ ಮೆರುಗಿನೊಂದಿಗೆ ಸಾಗಿದವು. ಅವುಗಳ ರಾಜಗಾಂಭೀರ್ಯ ವೀಕ್ಷಕರನ್ನು ಪುಳಕಗೊಳಿಸಿತು. ಮಕ್ಕಳು, ಹಿರಿಯರು ಸೇರದಂತೆ ನೂರಾರು ಜನರು ಅಲ್ಲಲ್ಲಿ ನಿಂತು ವೀಕ್ಷಿಸುತ್ತಿದ್ದುದು ಕಂಡುಬಂತು.</p>.<p class="Subhead"><strong>ಸ್ಪರ್ಧೆ: </strong>ಚಿತ್ರರಚನಾ ಸ್ಪರ್ಧೆ ಆಯೋಜಿಸಲಾಗಿದ್ದು, 15 ವರ್ಷಕ್ಕಿಂತ ಕೆಳಗಿನ ವಯಸ್ಸಿನವರು ಹಾಗೂ 16ರಿಂದ 21 ವಯೋಮಾನದವರು ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.</p>.<p class="Subhead"><strong>ಕಲಾ ಸಮೃದ್ಧಿ: </strong>ಲಾಲ್ಬಾಗ್ ವೃತ್ತದಿಂದ ಲೇಡಿಹಿಲ್ವರೆಗೆ ಕಲಾ ಪ್ರದರ್ಶನ ಆಯೋಜಿಸಲಾಗಿತ್ತು. ರ್ಯಾಲಿಯಲ್ಲಿ ಸ್ತಬ್ಧ ಚಿತ್ರ ಮತ್ತಿತರ ವೇಷಗಳು ಆಕರ್ಷಕವಾಗಿದ್ದವು. ಸ್ವಾತಂತ್ರ್ಯ ಸಂಗ್ರಾಮ ಸ್ಮರಣೆಯ ಸ್ತಬ್ಧಚಿತ್ರ ವಿಶೇಷ ಗಮನಸೆಳೆಯಿತು. ಹುಲಿ ಕುಣಿತ, ಯಕ್ಷಗಾನ ಗೊಂಬೆ ಮೇಳೈಸಿದವು. ಸಾಂಸ್ಕೃತಿಕ ಕಲಾ ಪ್ರದರ್ಶನ, ಬೀದಿ ಕಾರ್ಯಕ್ರಮಗಳ ಭಾಗವಾಗಿ ನೆರವೇರಿದವು.</p>.<p>ಕಾರ್ಯಕ್ರಮದಲ್ಲಿ ಎಂಎಸ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ಕುಮಾರ್ ಮಿಶ್ರಾ, ಪಾಲಿಕೆ ಮುಖ್ಯ ಸಚೇತಕ ಸುಧೀರ್ ಕುಮಾರ್ ಶೆಟ್ಟಿ, ಕರ್ನಾಟಕ ಮೀನುಗಾರಿಕೆ ನಿಗಮದ ಅಧ್ಯಕ್ಷ ನಿತಿನ್ ಕುಮಾರ್ , ಇತರ ಪ್ರಮುಖರು ಭಾಗವಹಿಸಿದ್ದರು.</p>.<p><strong>ವಿಂಟೇಜ್ ಒಳಗೆ ‘ಸಾರಥಿಗಳು’: </strong>ಅದು ಕಂದು ಬಣ್ಣದ ವಿಂಟೇಜ್ ಕಾರು. ರಾಜದರ್ಭಾರಿನ ಮೆರುಗು. ಅದರೊಳಗೆ ಜಿಲ್ಲೆ–ನಗರ ಸಾರಥಿಗಳಾದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹಾಗೂ ಮೇಯರ್ ಪ್ರೇಮಾನಂದ ಶೆಟ್ಟಿ ಪೋಸ್ ಕೊಟ್ಟದ್ದು ವಿಶೇಷವಾಗಿತ್ತು. ಕಾರಿನಲ್ಲೂ ಸಾರಥ್ಯದಲ್ಲಿ ‘ನಗರ ಸಾರಥಿ’ಯೇ ಇದ್ದರು. ಜಿಲ್ಲೆಯ ಸಾರಥಿ ಪಕ್ಕದಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>