<p><strong>ಶಿವಮೊಗ್ಗ: </strong>ಮಂಗಳೂರಿನಲ್ಲಿ ಆಟೊದಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿತ ಶಾರಿಕ್ ನ ತೀರ್ಥಹಳ್ಳಿಯ ಮನೆಗೆ ಪೊಲೀಸರ ತಂಡ ಸೋಮವಾರ ಬೆಳಿಗ್ಗೆ ತೆರಳಿ ಪರಿಶೀಲನೆ ನಡೆಸಿದೆ.</p>.<p>ಶಾರೀಕ್ ಮತ್ತು ಸಂಬಂಧಿಕರ ನಾಲ್ಕು ಮನೆಗಳಿಗೆ ಪೊಲೀಸರ ತಂಡ ಭೇಟಿ ನೀಡಿತ್ತಯ. ಸುಮಾರು 15 ಜನರನ್ನ ವಿಚಾರಣಿಗೆ ಒಳಪಡಿಸಲಾಗಿದೆ.</p>.<p>ಆಗುಂಬೆ ಪಿಎಸ್ಐ ಶಿವಕುಮಾರ್, ಮಾಳೂರು ಪಿಎಸ್ಐ ನವೀನ್ ಕುಮಾರ್ ಮಠಪತಿ, ತೀರ್ಥಹಳ್ಳಿ ಇನ್ ಸ್ಪೆಕ್ಟರ್ ಅಶ್ವಥ್ ಗೌಡ, ಮಾಳೂರು ಸರ್ಕಲ್ ಇನ್ ಸ್ಪೆಕ್ಟರ್ ಪ್ರವೀಣ್ ನೀಲಮ್ಮನವರ್ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿತ್ತು.</p>.<p>ಮಂಗಳೂರಿನಲ್ಲಿ ಆಟೊದಲ್ಲಿ ನಡೆದ ಸ್ಪೋಟದಲ್ಲಿ ಗಾಯಗೊಂಡಿರುವುದು ಶಾರಿಕ್ ಎಂದು ಪೊಲೀಸರು ಗುರುತಿಸಿದ್ದು, ಹೀಗಾಗಿ ಆತನ ಕುಟುಂಬದವರು ಭಾನುವಾರ ರಾತ್ರಿಯೇ ಮಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ.</p>.<p>ಅದರ ಬೆನ್ನಲ್ಲೇ ಶಾರಿಕ್ ಮನೆಗೆ ತೆರಳಿ ಪೊಲೀಸರ ತಂಡ ಪರಿಶೀಲನೆ ನಡೆಸಿದೆ. ತೀರ್ಥಹಳ್ಳಿಯ ಬಾಳೆಬೈಲಿನಲ್ಲಿ ಒಂದು ಮನೆ ಮತ್ತು ಸೊಪ್ಪುಗುಡ್ಡೆಯಲ್ಲಿ ಮೂರು ಮನೆಗಳನ್ನು ತಪಾಸಣೆ ನಡೆಸಲಾಗಿದೆ.</p>.<p><strong>ಶಾರಿಕ್ ಕುಟುಂಬದವರು ಆಸ್ಪತ್ರೆಗೆ ಭೇಟಿ</strong></p>.<p><strong>ಮಂಗಳೂರು</strong>: ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ನಿವಾಸಿ ಶಾರಿಕ್ ಅವರ ಕುಟುಂಬ ವರ್ಗದವರನ್ನು ಇಲ್ಲಿಗೆ ಬಂದಿದ್ದು, ಸೋಮವಾರ ಬೆಳಿಗ್ಗೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಂಬ್ ಸ್ಫೋಟದ ಆರೋಪಿಯನ್ನು ಭೇಟಿಯಾದರು.</p>.<p>ಬಾಂಬ್ ಸ್ಫೋಟದ ಆರೋಪಿ ತೀರ್ಥಹಳ್ಳಿಯ ಶಾರಿಕ್ ಇರಬಹುದು ಎಂಬ ಶಂಕೆಯ ಮೇರೆಗೆ ಪೊಲೀಸರು, ಅವರ ಕುಟುಂಬವರ್ಗದವರನ್ನು ಇಲ್ಲಿಗೆ ಕರೆಸಿದ್ದಾರೆ. </p>.<p>ಕುಟುಂಬ ವರ್ಗದವರನ್ನು ಪೊಲೀಸರು ಬಿಗಿ ಬಂದೋಬಸ್ತ್ನಲ್ಲಿ ಕರೆದೊಯ್ದರು. ಅವರು ನೀಡುವ ಮಾಹಿತಿ ಮೇರೆಗೆ ಪೊಲೀಸರು ಆರೋಪಿಯ ಗುರುತನ್ನು ಇನ್ನಷ್ಟೇ ಬಹಿರಂಗ ಪಡಿಸಬೇಕಿದೆ.</p>.<p><a href="https://www.prajavani.net/karnataka-news/voter-id-scam-chilume-founder-ravikumar-arrested-990361.html" itemprop="url">'ಚಿಲುಮೆ' ಸಂಸ್ಥೆ ಮುಖ್ಯಸ್ಥ ರವಿಕುಮಾರ್ ಬಂಧನ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ: </strong>ಮಂಗಳೂರಿನಲ್ಲಿ ಆಟೊದಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿತ ಶಾರಿಕ್ ನ ತೀರ್ಥಹಳ್ಳಿಯ ಮನೆಗೆ ಪೊಲೀಸರ ತಂಡ ಸೋಮವಾರ ಬೆಳಿಗ್ಗೆ ತೆರಳಿ ಪರಿಶೀಲನೆ ನಡೆಸಿದೆ.</p>.<p>ಶಾರೀಕ್ ಮತ್ತು ಸಂಬಂಧಿಕರ ನಾಲ್ಕು ಮನೆಗಳಿಗೆ ಪೊಲೀಸರ ತಂಡ ಭೇಟಿ ನೀಡಿತ್ತಯ. ಸುಮಾರು 15 ಜನರನ್ನ ವಿಚಾರಣಿಗೆ ಒಳಪಡಿಸಲಾಗಿದೆ.</p>.<p>ಆಗುಂಬೆ ಪಿಎಸ್ಐ ಶಿವಕುಮಾರ್, ಮಾಳೂರು ಪಿಎಸ್ಐ ನವೀನ್ ಕುಮಾರ್ ಮಠಪತಿ, ತೀರ್ಥಹಳ್ಳಿ ಇನ್ ಸ್ಪೆಕ್ಟರ್ ಅಶ್ವಥ್ ಗೌಡ, ಮಾಳೂರು ಸರ್ಕಲ್ ಇನ್ ಸ್ಪೆಕ್ಟರ್ ಪ್ರವೀಣ್ ನೀಲಮ್ಮನವರ್ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿತ್ತು.</p>.<p>ಮಂಗಳೂರಿನಲ್ಲಿ ಆಟೊದಲ್ಲಿ ನಡೆದ ಸ್ಪೋಟದಲ್ಲಿ ಗಾಯಗೊಂಡಿರುವುದು ಶಾರಿಕ್ ಎಂದು ಪೊಲೀಸರು ಗುರುತಿಸಿದ್ದು, ಹೀಗಾಗಿ ಆತನ ಕುಟುಂಬದವರು ಭಾನುವಾರ ರಾತ್ರಿಯೇ ಮಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ.</p>.<p>ಅದರ ಬೆನ್ನಲ್ಲೇ ಶಾರಿಕ್ ಮನೆಗೆ ತೆರಳಿ ಪೊಲೀಸರ ತಂಡ ಪರಿಶೀಲನೆ ನಡೆಸಿದೆ. ತೀರ್ಥಹಳ್ಳಿಯ ಬಾಳೆಬೈಲಿನಲ್ಲಿ ಒಂದು ಮನೆ ಮತ್ತು ಸೊಪ್ಪುಗುಡ್ಡೆಯಲ್ಲಿ ಮೂರು ಮನೆಗಳನ್ನು ತಪಾಸಣೆ ನಡೆಸಲಾಗಿದೆ.</p>.<p><strong>ಶಾರಿಕ್ ಕುಟುಂಬದವರು ಆಸ್ಪತ್ರೆಗೆ ಭೇಟಿ</strong></p>.<p><strong>ಮಂಗಳೂರು</strong>: ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ನಿವಾಸಿ ಶಾರಿಕ್ ಅವರ ಕುಟುಂಬ ವರ್ಗದವರನ್ನು ಇಲ್ಲಿಗೆ ಬಂದಿದ್ದು, ಸೋಮವಾರ ಬೆಳಿಗ್ಗೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಂಬ್ ಸ್ಫೋಟದ ಆರೋಪಿಯನ್ನು ಭೇಟಿಯಾದರು.</p>.<p>ಬಾಂಬ್ ಸ್ಫೋಟದ ಆರೋಪಿ ತೀರ್ಥಹಳ್ಳಿಯ ಶಾರಿಕ್ ಇರಬಹುದು ಎಂಬ ಶಂಕೆಯ ಮೇರೆಗೆ ಪೊಲೀಸರು, ಅವರ ಕುಟುಂಬವರ್ಗದವರನ್ನು ಇಲ್ಲಿಗೆ ಕರೆಸಿದ್ದಾರೆ. </p>.<p>ಕುಟುಂಬ ವರ್ಗದವರನ್ನು ಪೊಲೀಸರು ಬಿಗಿ ಬಂದೋಬಸ್ತ್ನಲ್ಲಿ ಕರೆದೊಯ್ದರು. ಅವರು ನೀಡುವ ಮಾಹಿತಿ ಮೇರೆಗೆ ಪೊಲೀಸರು ಆರೋಪಿಯ ಗುರುತನ್ನು ಇನ್ನಷ್ಟೇ ಬಹಿರಂಗ ಪಡಿಸಬೇಕಿದೆ.</p>.<p><a href="https://www.prajavani.net/karnataka-news/voter-id-scam-chilume-founder-ravikumar-arrested-990361.html" itemprop="url">'ಚಿಲುಮೆ' ಸಂಸ್ಥೆ ಮುಖ್ಯಸ್ಥ ರವಿಕುಮಾರ್ ಬಂಧನ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>