ಡಿಸಿಪಿ ಹರಿರಾಂ, ಎಎಸ್ಪಿ ರಂಜಿತ್, ಇನ್ಸ್ಪೆಕ್ಟರ್ ಸಂಜೀವ್, ಮಹೇಶ್ ಪ್ರಸಾದ್ ಸೇರಿದಂತೆ ಸುಮಾರು 30 ಮಂದಿ ಪೊಲೀಸರ ತಂಡವು ಕಮಿಷನರ್ ನೇತೃತ್ವದಲ್ಲಿ ಕೋಡಿ, ಮೊಗವೀರಪಟ್ಣ, ಕೋಟೆಪುರ, ಮಾಸ್ತಿಕಟ್ಟೆ, ಉಳ್ಳಾಲ, ಒಳಪೇಟೆ ಮತ್ತು ತೊಕ್ಕೊಟ್ಟು ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿ ಸ್ಥಳೀಯರೊಂದಿಗೆ ಸಂವಾದ ನಡೆಸಿತು. ಅಲ್ಲಿನ ಧಾರ್ಮಿಕ ಕ್ಷೇತ್ರಗಳಿಗೂ ಭೇಟಿ ನೀಡಿ, ಪ್ರಮುಖರ ಜೊತೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಆಲಿಸಿತು. ಬೀಚ್ಗೆ ತೆರಳಿದ ತಂಡವು ಮೀನುಗಾರ ಸಮಸ್ಯೆಗಳ ಕುರಿತು ಚರ್ಚಿಸಿತು.