<p><strong>ಉಡುಪಿ: </strong>ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆರೋಪಿ ಆದಿತ್ಯ ರಾವ್ ಕುಟುಂಬ 8 ತಿಂಗಳ ಹಿಂದೆ ಮಣಿಪಾಲದ ಮಣ್ಣಪಳ್ಳದಲ್ಲಿ ವಾಸವಿತ್ತು ಎಂಬ ವಿಚಾರ ತಿಳಿದು ಬಂದಿದೆ.</p>.<p>ಅನಾರೋಗ್ಯದಿಂದ ಕೆಲ ತಿಂಗಳುಗಳ ಹಿಂದಷ್ಟೆ ಆದಿತ್ಯನ ತಾಯಿ ತೀರಿಹೋದರು. ಬಳಿಕ ಆದಿತ್ಯ ರಾವ್ ಕುಟುಂಬ ಮಣ್ಣಪಳ್ಳದ ಮನೆ ಖಾಲಿ ಮಾಡಿ ಮಂಗಳೂರಿನಲ್ಲಿ ನೆಲೆಸಿತ್ತು ಎಂದು ನೆರೆಮನೆಯವರು ಮಾಹಿತಿ ನೀಡಿದರು.</p>.<p>ಆದಿತ್ಯ ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಆದರೆ, ಅವರ ತಾಯಿ ಅನಾರೋಗ್ಯದ ವಿಚಾರವಾಗಿ ಆಗಾಗ ಮಾತನಾಡುತ್ತಿದ್ದರು ಎಂದು ನೆರೆಮನೆಯ ದಿವ್ಯಾ ಕಿಣಿ ಹಾಗೂ ಪೂರ್ಣಿಮಾ ತಿಳಿಸಿದರು.</p>.<p>ಈಚೆಗೆ ಮನೆಯಲ್ಲಿದ್ದ ಕಪಾಟು ಸೇರಿದಂತೆ ಕೆಲವು ವಸ್ತುಗಳನ್ನು ಮಂಗಳೂರಿಗೆ ಸಾಗಿಸಲಾಗಿದೆ. ಮನೆಯಲ್ಲಿ ಕೆಲವು ಗೃಹೋಪಯೋಗಿ ವಸ್ತುಗಳು ಮಾತ್ರ ಇವೆ. ಹೆಚ್ಚಾಗಿ ಯಾರೂ ಇಲ್ಲಿ ಉಳಿಯುತ್ತಿರಲಿಲ್ಲ ಎಂದು ಹೇಳಿದರು.<br /></p>.<p><strong>ಮನೆಯಲ್ಲಿ ಶೋಧ:</strong><br />ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದು ಆದಿತ್ಯ ರಾವ್ ಎಂಬ ಮಾಹಿತಿ ಸಿಗುತ್ತಿದ್ದಂತೆ ಈಚೆಗೆ ಮಂಗಳೂರಿನಿಂದ ಪೊಲೀಸರ ತಂಡ ಮಣಿಪಾಲದ ಆದಿತ್ಯ ರಾವ್ ನಿವಾಸಕ್ಕೆ ಭೇಟಿನೀಡಿ ಶೋಧ ನಡೆಸಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆರೋಪಿ ಆದಿತ್ಯ ರಾವ್ ಕುಟುಂಬ 8 ತಿಂಗಳ ಹಿಂದೆ ಮಣಿಪಾಲದ ಮಣ್ಣಪಳ್ಳದಲ್ಲಿ ವಾಸವಿತ್ತು ಎಂಬ ವಿಚಾರ ತಿಳಿದು ಬಂದಿದೆ.</p>.<p>ಅನಾರೋಗ್ಯದಿಂದ ಕೆಲ ತಿಂಗಳುಗಳ ಹಿಂದಷ್ಟೆ ಆದಿತ್ಯನ ತಾಯಿ ತೀರಿಹೋದರು. ಬಳಿಕ ಆದಿತ್ಯ ರಾವ್ ಕುಟುಂಬ ಮಣ್ಣಪಳ್ಳದ ಮನೆ ಖಾಲಿ ಮಾಡಿ ಮಂಗಳೂರಿನಲ್ಲಿ ನೆಲೆಸಿತ್ತು ಎಂದು ನೆರೆಮನೆಯವರು ಮಾಹಿತಿ ನೀಡಿದರು.</p>.<p>ಆದಿತ್ಯ ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಆದರೆ, ಅವರ ತಾಯಿ ಅನಾರೋಗ್ಯದ ವಿಚಾರವಾಗಿ ಆಗಾಗ ಮಾತನಾಡುತ್ತಿದ್ದರು ಎಂದು ನೆರೆಮನೆಯ ದಿವ್ಯಾ ಕಿಣಿ ಹಾಗೂ ಪೂರ್ಣಿಮಾ ತಿಳಿಸಿದರು.</p>.<p>ಈಚೆಗೆ ಮನೆಯಲ್ಲಿದ್ದ ಕಪಾಟು ಸೇರಿದಂತೆ ಕೆಲವು ವಸ್ತುಗಳನ್ನು ಮಂಗಳೂರಿಗೆ ಸಾಗಿಸಲಾಗಿದೆ. ಮನೆಯಲ್ಲಿ ಕೆಲವು ಗೃಹೋಪಯೋಗಿ ವಸ್ತುಗಳು ಮಾತ್ರ ಇವೆ. ಹೆಚ್ಚಾಗಿ ಯಾರೂ ಇಲ್ಲಿ ಉಳಿಯುತ್ತಿರಲಿಲ್ಲ ಎಂದು ಹೇಳಿದರು.<br /></p>.<p><strong>ಮನೆಯಲ್ಲಿ ಶೋಧ:</strong><br />ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದು ಆದಿತ್ಯ ರಾವ್ ಎಂಬ ಮಾಹಿತಿ ಸಿಗುತ್ತಿದ್ದಂತೆ ಈಚೆಗೆ ಮಂಗಳೂರಿನಿಂದ ಪೊಲೀಸರ ತಂಡ ಮಣಿಪಾಲದ ಆದಿತ್ಯ ರಾವ್ ನಿವಾಸಕ್ಕೆ ಭೇಟಿನೀಡಿ ಶೋಧ ನಡೆಸಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>